‘ಕೃಷಿ ಕಾಯಕಕ್ಕೆ ಉತ್ತೇಜಿಸಿ’
ಕೃಷಿ ಪ್ರಧಾನ ದೇಶ ನಮ್ಮದು. ಪ್ರಜ್ಞಾವಂತ ನಾಗರೀಕರು ಕೃಷಿ ಕ್ಷೇತ್ರಕ್ಕೆ ಬರಬೇಕು. ವಿವಿಧ ಮಿಶ್ರ ಬೆಳೆ ಬೆಳೆಯುವ ಮೂಲಕ ಆಹಾರದ ಕೊರತೆ ನೀಗಿಸಲು ಮುಂದಾಗಬೇಕು. ಕೃಷಿ ಕಾಯಕಕ್ಕೆ ಉತ್ತೇಜನ ನೀಡಬೇಕು. ಮಕ್ಕಳಿಗೆ ವೈದ್ಯ ಎಂಜಿನಿಯರ್ ಆಗುವಂತೆ ಹೆಚ್ಚು ಒತ್ತಾಯಿಸದೇ ಕೃಷಿ ಚಟುವಟಿಕೆ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆ ಬಗ್ಗೆ ತಿಳಿಸುವಂತಾಗಬೇಕು ಎನ್ನುತ್ತಾರೆ ಕೃಷಿಕ ಎ.ಕೆ. ಆದವಾನಿಮಠ