‘ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ’ ರುದ್ರಪ್ಪ ಲಮಾಣಿ ಅವರು ತಾವು ದುಷ್ಕೃತ್ಯಗಳನ್ನು ಮಾಡಿ, ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ನೆಹರು ಓಲೇಕಾರ ಅವರು ತಮ್ಮ ವಿರೋಧಿಗಳ ವಿರುದ್ಧ ‘ಜಾತಿ ನಿಂದನೆ’ ಪ್ರಕರಣ ದಾಖಲಿಸುತ್ತಾರೆ ಎಂದು ರುದ್ರಪ್ಪ ಆರೋಪ ಮಾಡಿದ್ದರು.ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ‘ಆಕಳ ಮುಖ ಕತ್ತಿ ಹೊದಿಕೆ’ ರೀತಿ ರುದ್ರಪ್ಪ ಅವರ ಚರಿತ್ರೆ ಇದ್ದು, ಇನ್ನಾದರೂ ಪಾಠ ಕಲಿಯಲಿ’ ಎಂದು ತಿರುಗೇಟು ನೀಡಿದರು.