ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ಸಿಂದೊಳ್ಳು ಅಲೆಮಾರಿ ಬದುಕು ದುಸ್ತರ

ಕೆಸರಿನ ಜಾಗದ ಗುಡಿಸಲು–ಶೆಡ್‌ನಲ್ಲಿ ವಾಸ, ಸರ್ಕಾರದ ಸೌಲಭ್ಯ ಪಡೆಯಲು ಗೋಳಾಟ: ಪರ್ಯಾಯ ಜಾಗದಲ್ಲಿ ಸ್ಥಳೀಯರ ವಿರೋಧ
Published : 29 ಸೆಪ್ಟೆಂಬರ್ 2025, 5:04 IST
Last Updated : 29 ಸೆಪ್ಟೆಂಬರ್ 2025, 5:04 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ಅಲೆಮಾರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳದ ದುಸ್ಥಿತಿ  – ಪ್ರಜಾವಾಣಿ ಚಿತ್ರ/ ಹುತ್ತೇಶ ಲಮಾಣಿ
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕಣಜಿ ಕ್ರಾಸ್‌ನಲ್ಲಿ (ತಿಳವಳ್ಳಿ ಕ್ರಾಸ್) ಅಲೆಮಾರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳದ ದುಸ್ಥಿತಿ  – ಪ್ರಜಾವಾಣಿ ಚಿತ್ರ/ ಹುತ್ತೇಶ ಲಮಾಣಿ
ಗುಡಿಸಲು–ಶೆಡ್‌ಗಳಿಗೆ ನಿತ್ಯವೂ ಕೊಳಕುಮಂಡಲ ಸೇರಿ ವಿವಿಧ ಹಾವುಗಳು ನುಗ್ಗುತ್ತಿವೆ. ಭಯದಲ್ಲಿಯೇ ನಾವು ಜೀವನ ಸಾಗಿಸುತ್ತಿದ್ದು ಶಾಶ್ವತ ಸೂರು ಮರೀಚಿಕೆಯಾಗಿದೆ
ಸಿಂದೊಳ್ಳು ಅಲೆಮಾರಿ ಜನಾಂಗದ ನಿವಾಸಿ
ನಾವೂ ಮನುಷ್ಯರು. ಕಲೆ ಪ್ರದರ್ಶನದಿಂದ ಬರುವ ಭಿಕ್ಷೆ ನಂಬಿ ಬದುಕುತ್ತಿದ್ದೇವೆ. ನಮಗೂ ಸ್ವಚ್ಛ ಪರಿಸರದಲ್ಲಿ ಬದುಕುವ ಅವಕಾಶ ಮಾಡಿಕೊಡಿ. ನಮ್ಮ ಮಕ್ಕಳಿಗೂ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿ
ಸಿಂದೊಳ್ಳು ಅಲೆಮಾರಿ ಜನಾಂಗದ ನಿವಾಸಿ
‘ಕಂದಾಯ ಗ್ರಾಮದ ಭರವಸೆ’
ಸಿಂದೊಳ್ಳು ಸಮುದಾಯದ ಬಾಲಕಿ ಪೂಜಾ ಮೃತಪಟ್ಟ ಘಟನೆಯ ಬಳಿಕ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸಮುದಾಯದವರು ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಕಂದಾಯ ಗ್ರಾಮದ ಭರವಸೆ ನೀಡಿದ್ದಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ‘ಸಿಂದೊಳ್ಳು ಸಮುದಾಯದವರು ಮೂಲ ಸೌಕರ್ಯದಿಂದ ವಂಚಿತವಾಗಿರುವುದನ್ನು ಗಮನಿಸಿದ್ದೇನೆ. ಕುಡಿಯುವ ನೀರಿಗಾಗಿ ತ್ವರಿತವಾಗಿ ಕೊಳವೆ ಬಾವಿ ಕೊರೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲರಿಗೂ ಸರ್ಕಾರಿ ದಾಖಲೆ ನೀಡಲು ಕ್ರಮ ಕೈಗೊಳ್ಳುವಂತೆಯೂ ಹೇಳಿದ್ದೇನೆ’ ಎಂದರು. ‘ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳ ಹುಲ್ಲುಗಾವಲು ಪ್ರದೇಶವಾಗಿದೆ. ಕೆರೆ ದಡದಲ್ಲಿರುವ ಈ ಪ್ರದೇಶ ಅಸುರಕ್ಷಿತವಾಗಿದೆ. ಅವರಿಗೆ ಪರ್ಯಾಯ ಜಾಗವನ್ನೂ ಮಂಜೂರು ಮಾಡಲಾಗಿದೆ. ಆದರೆ ಅಲ್ಲಿ ಸ್ಥಳೀಯರ ವಿರೋಧ ಇರುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಪರ್ಯಾಯ ಜಾಗಕ್ಕೆ ಹೋಗಲು ಸಮಸ್ಯೆಯಾದರೆ ಇರುವ ಜಾಗದ ಸುತ್ತಲೂ ಕಾಂಪೌಂಡ್ ಕಟ್ಟಿ ಕಂದಾಯ ಗ್ರಾಮವನ್ನಾಗಿ ಮಾಡಲು ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು’ ಎಂದು ಹೇಳಿದರು.
ಅಧ್ಯಕ್ಷೆ ಭೇಟಿ ಬಳಿಕವೂ ಸುಧಾರಿಸದ ವ್ಯವಸ್ಥೆ
ಹಾವೇರಿ ಜಿಲ್ಲೆಯಲ್ಲಿ ಆಗಸ್ಟ್ 5 ಹಾಗೂ 6ರಂದು ಪ್ರವಾಸ ಕೈಗೊಂಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸಿಂದೊಳ್ಳು ಸಮುದಾಯದವರು ವಾಸವಿರುವ ಸ್ಥಳಕ್ಕೂ ಭೇಟಿ ನೀಡಿದ್ದರು. ಅಲ್ಲಿಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೂಲ ಸೌಕರ್ಯ ಕಲ್ಪಿಸುವಂತೆ ಗಡುವು ನೀಡಿ ಹೊರಟು ಹೋಗಿದ್ದರು. ಅಧ್ಯಕ್ಷೆ ಭೇಟಿಯಾಗಿ ಒಂದೂವರೆ ತಿಂಗಳಾದರೂ ಸಮುದಾಯದವರಿಗೆ ಸೌಲಭ್ಯ ಸಿಕ್ಕಿಲ್ಲ. ಅಧ್ಯಕ್ಷೆ ಮಾತಿಗೂ ಅಧಿಕಾರಿಗಳು ಕಿಮ್ಮತ್ತು ನೀಡಿಲ್ಲವೆಂದು ಸಮುದಾಯದವರು ಆರೋಪಿಸುತ್ತಿದ್ದಾರೆ. ‘ಶಾಶ್ವತ ಸೂರು ಸಿಗುವ ಭರವಸೆಯೇ ಹೋಗಿದೆ. ಮಳೆ ಬಂದರೆ ಜೋಪಡಿ ಇರುವ ಸ್ಥಳದಲ್ಲಿ ಓಡಾಡಲು ಆಗುವುದಿಲ್ಲ. ಇಲ್ಲಿಯ ಗರ್ಭಿಣಿಯವರಿಗೆ ಮಾತೃವಂದನ ನೋಂದಣಿ ಮಾಡಿಲ್ಲ. ಅವರಿಗೆ ಲಸಿಕೆಯನ್ನೂ ಹಾಕಿಸಿಲ್ಲ. ಅರ್ಹರಿಗೆ ವಿಧವಾ ವೇತನ ಏಕ ಪೋಷಕ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯ ಸೌಲಭ್ಯವೂ ಸಿಕ್ಕಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದರು. ‘ನಮ್ಮ ಪ್ರದೇಶಕ್ಕೆ ಯಾವ ಅಧಿಕಾರಿಯೂ ಬರುವುದಿಲ್ಲ. ನಮಗೆ ಯಾವುದೇ ಜಾತಿ ಪ್ರಮಾಣ ಪತ್ರ  ಇಲ್ಲ. ಆಧಾರ್‌ ಕಾರ್ಡ್ ಹಾಗೂ ಪಡಿತರ ಚೀಟಿಯನ್ನೂ ನೀಡುತ್ತಿಲ್ಲ. ಅವುಗಳನ್ನು ಮಾಡಿಕೊಡಲು ಕಚೇರಿಯ ಕೆಲವರು ಲಂಚ ಕೇಳುತ್ತಿದ್ದಾರೆ’ ಎಂದು ಭ್ರಷ್ಟಾಚಾರವನ್ನು ಬಹಿರಂಗವಾಗಿಯೇ ತೆರೆದಿಟ್ಟಿದ್ದರು. ‘ಆಧಾರ್‌ ಕಾರ್ಡ್ ಮಾಡಿಸಲು ₹ 9000 ವಿಧವಾ ವೇತನ ಮಾಡಿಸಲು ₹ 20000 ಲಂಚ ಕೇಳುತ್ತಾರೆ. ಒಂದು ಹೊತ್ತಿನ ಊಟಕ್ಕೂ ನಿತ್ಯವೂ ದುಡಿಯುತ್ತಿರುವ ನಾವು ಎಲ್ಲಿಂದ ಲಂಚ ಕೊಡುವುದು. ಆಧಾರ್ ಕಾರ್ಡ್ ಇಲ್ಲದಿದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಕಣ್ಣೀರಿಟಿದ್ದರು. ಸಮಸ್ಯೆ ಆಲಿಸಿದ್ದ ನಾಗಲಕ್ಷ್ಮಿ ‘ಅಲೆಮಾರಿ ಅರೇ ಅಲೆಮಾರಿ ಜನರಿಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲಸ ಮಾಡದವರಿಗೆ ನೋಟಿಸ್‌ ನೀಡುವಂತೆಯೂ ತಹಶೀಲ್ದಾರ್‌ಗೆ ಹೇಳಿದ್ದರು. ಆದರೆ ಇಂದಿಗೂ ನಾಗಲಕ್ಷ್ಮಿ ಅವರ ಸೂಚನೆಗಳು ಪಾಲನೆಯಾಗಿಲ್ಲ. ಪುನಃ ಅದೇ ಅವ್ಯವಸ್ಥೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT