<p><strong>ಶಿಗ್ಗಾವಿ: </strong>‘ಮನೆಗೆ ಆಸರೆಯಾಗಿದ್ದಮಗ ತೀರಿಕೊಂಡಿದ್ದಾನೆ. ಕುಟುಂಬದ ಬಂಡಿ ಸಾಗಿಸುವುದು ಕಷ್ಟವಾಗಿದೆ. ವಯಸ್ಸಾದ ಅತ್ತೆ–ಮಾವ, ಇಬ್ಬರು ಮಕ್ಕಳನ್ನು ನನ್ನ ಸೊಸೆ ಹೇಗೆ ನೋಡಿಕೊಳ್ಳುತ್ತಾಳೋ ಗೊತ್ತಿಲ್ಲ..’</p>.<p>ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ತಿಂಗಳ ಹಿಂದೆ ಕೋವಿಡ್ನಿಂದ ಮೃತಪಟ್ಟ ಮಹೇಶ ಚಿದಾನಂದಪ್ಪ ಬಡಿಗೇರ (37) ಅವರ ತಾಯಿ ಶಾರದಮ್ಮ ಹೀಗೆನ್ನುತ್ತ ಕಣ್ಣೀರಿಟ್ಟರು.</p>.<p>ಮೃತ ಮಹೇಶ ಅವರಿಗೆ 80 ವರ್ಷದ ತಂದೆ, 75 ವರ್ಷದ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಒಂದನೇ ತರಗತಿ, ಎರಡನೇ ಮಗ ಎಲ್ಕೆಜಿ ಓದುತ್ತಿದ್ದಾನೆ.</p>.<p>ಮಹೇಶ ಬಡಿಗೇರ ಅವರುಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭ ‘ಗಣೇಶ ಮೂರ್ತಿ’ ತಯಾರಿಸಿ, ಸುತ್ತ ಮುತ್ತಲ ಗ್ರಾಮಗಳಿಗೆ ಪೂರೈಕೆ ಮಾಡುತ್ತಿದ್ದರು. ಉಳಿದ ದಿನಗಳಲ್ಲಿ ಕೃಷಿ ಪರಿಕರಗಳಾದ ರೆಂಟೆ, ಕುಂಟೆ, ಕೂರಿಗೆಗಳನ್ನು ಸಿದ್ಧಪಡಿಸುವುದು ಈ ಕುಟುಂಬದ ಕಸುಬಾಗಿತ್ತು. ಅಷ್ಟೇ ಅಲ್ಲದೆ, ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು.</p>.<p>ಮಹೇಶ ಅವರ ಸಾವು ಕುಟುಂಬವನ್ನು ಮಾತ್ರವಲ್ಲ; ಸುತ್ತಮುತ್ತಲ ಗ್ರಾಮಗಳ ಜನರನ್ನೂ ಮರುಗುವಂತೆ ಮಾಡಿದೆ.ಇವರ ಕುಟುಂಬಕ್ಕೆ ಸ್ವಂತ ಜಮೀನಿಲ್ಲ. ಈವರೆಗೆ ಮನೆ ಬಿಟ್ಟು ಹೊರಬಾರದ ಪತ್ನಿ ಸಾವಿತ್ರಿ ಅವರು ಈಗ ಅತ್ತೆ, ಮಾವ ಮತ್ತು ಮಕ್ಕಳನ್ನು ನೋಡಿಕೊಳ್ಳಲು, ಇತರರ ಹೊಲದಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.</p>.<p>ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಕೇಳಿದ್ದಾರೆ. ಆದರೆ, ಮಕ್ಕಳನ್ನು ಬಿಟ್ಟಿರಲಾರದ ತಾಯಿ, ‘ನಮ್ಮೂರಿನ ಸರ್ಕಾರಿ ಶಾಲೆಯಲ್ಲೇ ಕಷ್ಟಪಟ್ಟು ಓದಿಸುತ್ತೇನೆ. ಎಲ್ಲಿಗೂ ಕಳುಹಿಸುವುದಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ.</p>.<p>‘ಹೆತ್ತ ಮಕ್ಕಳನ್ನು ಎಲ್ಲಿಗೋ ಕಳುಹಿಸಿ, ನಾನೊಬ್ಬಳೇ ಹೇಗೆ ಜೀವನ ಮಾಡಲಿ. ಕಷ್ಟವೋ– ಸುಖವೋ ನನ್ನ ಮಕ್ಕಳು ನನ್ನ ಕಣ್ಣ ಮುಂದೆ ಇರಬೇಕು. ನಮ್ಮ ಕಷ್ಟಕ್ಕೆಸರ್ಕಾರ ಮತ್ತು ದಾನಿಗಳು ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ತಾಯಿ ಸಾವಿತ್ರಿ ದುಃಖ ತೋಡಿಕೊಂಡರು.</p>.<p>‘ಅಣ್ಣನ ಸಾವಿನ ನಂತರ ಅವರ ಕುಟುಂಬದ ಸಮಸ್ಯೆಗೆ ಸ್ಪಂದಿಸಿ ನನ್ನ ಕೈಲಾದಷ್ಟು ಸಹಾಯ, ಸಹಕಾರ ಮಾಡುತ್ತೇನೆ’ ಎಂದು ಅವರ ದೊಡ್ಡಪ್ಪನ ಮಗ ಬಸವರಾಜ ಬಡಿಗೇರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ: </strong>‘ಮನೆಗೆ ಆಸರೆಯಾಗಿದ್ದಮಗ ತೀರಿಕೊಂಡಿದ್ದಾನೆ. ಕುಟುಂಬದ ಬಂಡಿ ಸಾಗಿಸುವುದು ಕಷ್ಟವಾಗಿದೆ. ವಯಸ್ಸಾದ ಅತ್ತೆ–ಮಾವ, ಇಬ್ಬರು ಮಕ್ಕಳನ್ನು ನನ್ನ ಸೊಸೆ ಹೇಗೆ ನೋಡಿಕೊಳ್ಳುತ್ತಾಳೋ ಗೊತ್ತಿಲ್ಲ..’</p>.<p>ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ತಿಂಗಳ ಹಿಂದೆ ಕೋವಿಡ್ನಿಂದ ಮೃತಪಟ್ಟ ಮಹೇಶ ಚಿದಾನಂದಪ್ಪ ಬಡಿಗೇರ (37) ಅವರ ತಾಯಿ ಶಾರದಮ್ಮ ಹೀಗೆನ್ನುತ್ತ ಕಣ್ಣೀರಿಟ್ಟರು.</p>.<p>ಮೃತ ಮಹೇಶ ಅವರಿಗೆ 80 ವರ್ಷದ ತಂದೆ, 75 ವರ್ಷದ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಒಂದನೇ ತರಗತಿ, ಎರಡನೇ ಮಗ ಎಲ್ಕೆಜಿ ಓದುತ್ತಿದ್ದಾನೆ.</p>.<p>ಮಹೇಶ ಬಡಿಗೇರ ಅವರುಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭ ‘ಗಣೇಶ ಮೂರ್ತಿ’ ತಯಾರಿಸಿ, ಸುತ್ತ ಮುತ್ತಲ ಗ್ರಾಮಗಳಿಗೆ ಪೂರೈಕೆ ಮಾಡುತ್ತಿದ್ದರು. ಉಳಿದ ದಿನಗಳಲ್ಲಿ ಕೃಷಿ ಪರಿಕರಗಳಾದ ರೆಂಟೆ, ಕುಂಟೆ, ಕೂರಿಗೆಗಳನ್ನು ಸಿದ್ಧಪಡಿಸುವುದು ಈ ಕುಟುಂಬದ ಕಸುಬಾಗಿತ್ತು. ಅಷ್ಟೇ ಅಲ್ಲದೆ, ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು.</p>.<p>ಮಹೇಶ ಅವರ ಸಾವು ಕುಟುಂಬವನ್ನು ಮಾತ್ರವಲ್ಲ; ಸುತ್ತಮುತ್ತಲ ಗ್ರಾಮಗಳ ಜನರನ್ನೂ ಮರುಗುವಂತೆ ಮಾಡಿದೆ.ಇವರ ಕುಟುಂಬಕ್ಕೆ ಸ್ವಂತ ಜಮೀನಿಲ್ಲ. ಈವರೆಗೆ ಮನೆ ಬಿಟ್ಟು ಹೊರಬಾರದ ಪತ್ನಿ ಸಾವಿತ್ರಿ ಅವರು ಈಗ ಅತ್ತೆ, ಮಾವ ಮತ್ತು ಮಕ್ಕಳನ್ನು ನೋಡಿಕೊಳ್ಳಲು, ಇತರರ ಹೊಲದಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.</p>.<p>ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಕೇಳಿದ್ದಾರೆ. ಆದರೆ, ಮಕ್ಕಳನ್ನು ಬಿಟ್ಟಿರಲಾರದ ತಾಯಿ, ‘ನಮ್ಮೂರಿನ ಸರ್ಕಾರಿ ಶಾಲೆಯಲ್ಲೇ ಕಷ್ಟಪಟ್ಟು ಓದಿಸುತ್ತೇನೆ. ಎಲ್ಲಿಗೂ ಕಳುಹಿಸುವುದಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ.</p>.<p>‘ಹೆತ್ತ ಮಕ್ಕಳನ್ನು ಎಲ್ಲಿಗೋ ಕಳುಹಿಸಿ, ನಾನೊಬ್ಬಳೇ ಹೇಗೆ ಜೀವನ ಮಾಡಲಿ. ಕಷ್ಟವೋ– ಸುಖವೋ ನನ್ನ ಮಕ್ಕಳು ನನ್ನ ಕಣ್ಣ ಮುಂದೆ ಇರಬೇಕು. ನಮ್ಮ ಕಷ್ಟಕ್ಕೆಸರ್ಕಾರ ಮತ್ತು ದಾನಿಗಳು ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ತಾಯಿ ಸಾವಿತ್ರಿ ದುಃಖ ತೋಡಿಕೊಂಡರು.</p>.<p>‘ಅಣ್ಣನ ಸಾವಿನ ನಂತರ ಅವರ ಕುಟುಂಬದ ಸಮಸ್ಯೆಗೆ ಸ್ಪಂದಿಸಿ ನನ್ನ ಕೈಲಾದಷ್ಟು ಸಹಾಯ, ಸಹಕಾರ ಮಾಡುತ್ತೇನೆ’ ಎಂದು ಅವರ ದೊಡ್ಡಪ್ಪನ ಮಗ ಬಸವರಾಜ ಬಡಿಗೇರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>