<p><strong>ತಡಸ</strong>: ರೈತರ ಹೊಲ ಗದ್ದೆಗಳ ದಾರಿ ಸಮಸ್ಯೆ ಹಾಗೂ ಕಂದಾಯ ಗ್ರಾಮಗಳ ಪಟ್ಟಾ ನೀಡುವ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.</p>.<p>ಹತ್ತಿರದ ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಲಗಟ್ಟ, ಮಮದಾಪೂರ, ಅಡವಿ ಸೋಮಾಪೂರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ₹ 90 ಲಕ್ಷ ಕುನ್ನೂರು ಪಂಚಾಯತಿಗೆ ನೀಡಿದ್ದೇನೆ. ತರ್ಲಗಟ್ಟ ಗ್ರಾಮವು ಹಲವಾರು ವರ್ಷಗಳಿಂದ ಗ್ರಾಮಸ್ಥರು ಕಂದಾಯ ಗ್ರಾಮವಾಗದೆ ಮೂಲಸೌಕರ್ಯ ಜನರಿಗೆ ಸಿಗದಂತೆ ಆಗಿತ್ತು. ಇಂದು ಮಮದಾಪೂರ ಎಂಬ ಹೊಸ ಕಂದಾಯ ಗ್ರಾಮವಾಗಿ ಮರು ನಾಮಕರಣ ಮಾಡಲಾಗಿದೆ ಎಂದರು.</p>.<p>ಮಮದಾಪೂರ ಹಾಗೂ ಕುನ್ನುರು ಗ್ರಾಮದ ರೈತರ ಹೊಲ ಗದ್ದೆಗಳ ರಸ್ತೆಯ ಸಮಸ್ಯೆ ಇದ್ದು ಮುಖ್ಯಮಂತ್ರಿ ವಿಶೇಷ ಅನುದಾನ ಪಡೆದು ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಗ್ರಾಮಗಳಲ್ಲಿ ವಿವಿಧ ದೇವಸ್ಥಾನಕ್ಕೆ ಸಭಾ ಭವನ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ ಎಂದರು.</p>.<p>‘ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಇಂದಿರಾ ಕಿಟ್ ನೀಡಲಾಗುವುದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ 6 ಕೆಪಿಸಿ ಶಾಲೆ ತಾಲ್ಲೂಕಿಗೆ ತರಲಾಗಿದೆ ಎಂದರು.</p>.<p>ತರ್ಲಗಟ್ಟ ಗ್ರಾಮಸ್ಥರು 25 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆ ವಶಪಡಿಸಿಕೊಂಡು ಹಲವಾರು ರೈತರು ಜಮೀನು ಕಳೆದುಕೊಂಡು ಕೊಲಿ ಕೆಲಸ ಮಾಡುತ್ತಿದ್ದೇವೆ. ಜಮೀನು ಮರಳಿಸುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು.</p>.<p>ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಬಾಬರ್ ಬಾವುಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಆರ್.ಬೊಮ್ಮನಹಳ್ಳಿ, ಲಕ್ಷ್ಮಣ್ ಬೆಂಡಲ್ಗಟ್ಟಿ, ಗಂಗವ್ವ ಲಮಾಣಿ, ಬಂಜಾರ ಸಮಿತಿಯ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಲಾವನಗೌಡ ಪಾಟೀಲ್, ಆನಂದ ಲಮಾಣಿ, ಬಾಹುಬಲಿ ಸೊಗಲಿ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ</strong>: ರೈತರ ಹೊಲ ಗದ್ದೆಗಳ ದಾರಿ ಸಮಸ್ಯೆ ಹಾಗೂ ಕಂದಾಯ ಗ್ರಾಮಗಳ ಪಟ್ಟಾ ನೀಡುವ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.</p>.<p>ಹತ್ತಿರದ ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಲಗಟ್ಟ, ಮಮದಾಪೂರ, ಅಡವಿ ಸೋಮಾಪೂರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ₹ 90 ಲಕ್ಷ ಕುನ್ನೂರು ಪಂಚಾಯತಿಗೆ ನೀಡಿದ್ದೇನೆ. ತರ್ಲಗಟ್ಟ ಗ್ರಾಮವು ಹಲವಾರು ವರ್ಷಗಳಿಂದ ಗ್ರಾಮಸ್ಥರು ಕಂದಾಯ ಗ್ರಾಮವಾಗದೆ ಮೂಲಸೌಕರ್ಯ ಜನರಿಗೆ ಸಿಗದಂತೆ ಆಗಿತ್ತು. ಇಂದು ಮಮದಾಪೂರ ಎಂಬ ಹೊಸ ಕಂದಾಯ ಗ್ರಾಮವಾಗಿ ಮರು ನಾಮಕರಣ ಮಾಡಲಾಗಿದೆ ಎಂದರು.</p>.<p>ಮಮದಾಪೂರ ಹಾಗೂ ಕುನ್ನುರು ಗ್ರಾಮದ ರೈತರ ಹೊಲ ಗದ್ದೆಗಳ ರಸ್ತೆಯ ಸಮಸ್ಯೆ ಇದ್ದು ಮುಖ್ಯಮಂತ್ರಿ ವಿಶೇಷ ಅನುದಾನ ಪಡೆದು ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಗ್ರಾಮಗಳಲ್ಲಿ ವಿವಿಧ ದೇವಸ್ಥಾನಕ್ಕೆ ಸಭಾ ಭವನ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ ಎಂದರು.</p>.<p>‘ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಇಂದಿರಾ ಕಿಟ್ ನೀಡಲಾಗುವುದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ 6 ಕೆಪಿಸಿ ಶಾಲೆ ತಾಲ್ಲೂಕಿಗೆ ತರಲಾಗಿದೆ ಎಂದರು.</p>.<p>ತರ್ಲಗಟ್ಟ ಗ್ರಾಮಸ್ಥರು 25 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆ ವಶಪಡಿಸಿಕೊಂಡು ಹಲವಾರು ರೈತರು ಜಮೀನು ಕಳೆದುಕೊಂಡು ಕೊಲಿ ಕೆಲಸ ಮಾಡುತ್ತಿದ್ದೇವೆ. ಜಮೀನು ಮರಳಿಸುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು.</p>.<p>ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಬಾಬರ್ ಬಾವುಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಆರ್.ಬೊಮ್ಮನಹಳ್ಳಿ, ಲಕ್ಷ್ಮಣ್ ಬೆಂಡಲ್ಗಟ್ಟಿ, ಗಂಗವ್ವ ಲಮಾಣಿ, ಬಂಜಾರ ಸಮಿತಿಯ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಲಾವನಗೌಡ ಪಾಟೀಲ್, ಆನಂದ ಲಮಾಣಿ, ಬಾಹುಬಲಿ ಸೊಗಲಿ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>