ಐದು ಎಕರೆ ಬಾಳೆ ಬೆಳೆದರೂ ಎರಡು, ಮೂರು ವರ್ಷಗಳಿಂದ ಹಾಕಿದ ಬಂಡವಾಳ ಕೈಗೆ ಸಿಕ್ಕಿಲ್ಲ. ಅತಿವೃಷ್ಟಿ, ಬೆಲೆ ಕುಸಿತ, ರೋಗ ಬಾಧೆಯಿಂದ ಬಾಳೆ ಬೆಳೆ ಹಾಳಾಗಿದೆ. ಮಾಕನೂರಿನಲ್ಲಿ 40 ರಿಂದ 45 ಮಂದಿ ನೂರಾರು ಎಕರೆ ಬಾಳೆ ಬೆಳೆದಿದ್ದಾರೆ. ಗಣಪತಿ ರಾವ್ ಕುಲಕರ್ಣಿ ಬೇಸತ್ತು ಒಂದು ಎಕರೆ ಪಚ್ಚಬಾಳೆ ನೆಲಸಮ ಮಾಡಿದ್ದಾರೆ ಎಂದು ರೈತ ಶಿವನಗೌಡ ನಂದಿಗಾವಿ ಬೇಸರ ವ್ಯಕ್ತಪಡಿಸಿದರು.