ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘದಲ್ಲಿ ನಂಬಿಕೆಯೇ ವಹಿವಾಟಿನ ಬುನಾದಿ’

Last Updated 25 ಸೆಪ್ಟೆಂಬರ್ 2021, 15:14 IST
ಅಕ್ಷರ ಗಾತ್ರ

ಹಾವೇರಿ:‘ಬ್ಯಾಂಕು ಅಥವಾ ಯಾವುದೇ ಸಂಸ್ಥೆಗಳಲ್ಲಿ ಸಾರ್ವಜನಿಕ ಆರ್ಥಿಕ ವಹಿವಾಟು ವ್ಯಾಪಾರಿ ಮನೋಭಾವದಿಂದ ಕೂಡಿರುತ್ತದೆ. ಆದರೆ ಕ.ವಿ.ಪ್ರ.ನಿ.ನಿ ಮತ್ತು ಹು.ವಿ.ಸ.ಕಂ.ನಿ ನೌಕರರ ಸಹಕಾರ ಸಂಘದಲ್ಲಿ ನಂಬಿಕೆಯೇ ವಹಿವಾಟಿನ ಬುನಾದಿ ಆಗಿರುತ್ತದೆ. ನೌಕರರ ಹಿತಾಸಕ್ತಿ ಕಾಪಾಡುವದೇ ಸಹಕಾರಿ ತತ್ವದ ಮೂಲ ಸಂದೇಶವಾಗಬೇಕು’ ಎಂದುಹಾವೇರಿ ವೃತ್ತದ ಪ್ರಭಾರ ಅಧೀಕ್ಷಕ ಎಂಜಿನಿಯರ್‌ ಎ.ಪಿ. ಫಣಿರಾಜ ಗುಪ್ತಾ ತಿಳಿಸಿದರು.

ಇಲ್ಲಿಯ ಕೆ.ಪಿ.ಟಿ.ಸಿ.ಎಲ್ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ ನೌಕರರ ಸಹಕಾರ ಸಂಘದ43ನೇ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ‘ಸಹಕಾರಿ ಸಂಘದಲ್ಲಿ ಲಾಭ ಮುಖ್ಯವಲ್ಲ, ಎಲ್ಲ ಸದಸ್ಯರಿಗೆ ಅದರ ಲಾಭ ತಲುಪಬೇಕು. ಸದಸ್ಯರ ಆರ್ಥಿಕ ಅಭಿವೃದ್ಧಿಯೇ ಮುಖ್ಯ. ಸಾಲಗಾರರಿಗೆ ಸಾಕ್ಷಿ ಹಾಕುವಾಗ ಪ್ರತಿ ಸದಸ್ಯ ಎಚ್ಚರಿಕೆಯಿಂದ ಅವನ ಪೂರ್ವಾಪರ ತಿಳಿದುಕೊಂಡು ಸಹಿ ಹಾಕಬೇಕು’ ಎಂದು ಸಲಹೆ ನೀಡಿದರು.

ವೈ.ಎನ್. ನಿಟ್ಟೂರ, ಮಹಮದ್‌ ಅಮಾನುಲ್ಲಾ, ಎಚ್.ಎಸ್.ಬಸವರಾಜಯ್ಯ, ಎ.ಕೆ.ಯಮನೂರ, ಪುಷ್ಪಾ ಹೆಬ್ಬಾಳ, ಸಿ.ಎನ್.ಬಡ್ನಿ, ಎಮ್.ಎಸ್.ಕುಮ್ಮೂರ ಎಸ್.ಎಸ್. ಜಿಂಗಾಡೆ, ಸತೀಶ ಕುಲಕರ್ಣಿ ಮಾತನಾಡಿದರು.

ಸನ್ಮಾನ: ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದ 63 ನೌಕರರ ಮಕ್ಕಳಿಗೆ ಗೌರವಧನ ಮತ್ತು ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.

ಸಹಕಾರಿ ಪತ್ತಿನ ಕಾರ್ಯದರ್ಶಿ ವರದಿ, ಲಾಭ ಹಾನಿ ಪತ್ರಿಕೆ, ಲಾಭ ಹಾನಿ ವಿಂಗಡಣೆ, ಮುಂಗಡ ಪತ್ರ ಮುಂತಾದವುಗಳನ್ನು ಸಂಘದ ನಿರ್ದೇಶಕರಾದ ಗಣೇಶ ಎಸ್. ಬಿ, ಬಸವರಾಜ ಕೋಟಿ, ಎಸ್.ಎಂ.ಶೆಟ್ಟರ, ಜೆ.ಎಲ್. ಕಮತದವರು ಮಂಡಿಸಿದರು. ಸಂಘದ ಕಾರ್ಯದರ್ಶಿ ಬಸವರಾಜ ಕೋಟಿ ಸ್ವಾಗತಿಸಿದರು. ಎ.ಕೆ.ಯಮನೂರ ನಡೆಸಿದರು. ಕೆ.ಎನ್.ಅಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT