ಮೃತ ನವೀನ ಗ್ಯಾನಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಕುಟುಂಬದ ಬಗ್ಗೆ ಮಾಹಿತಿ ಪಡೆದರು. ‘ನಿಮ್ಮ ಮಗ ಪ್ರತಿಭಾವಂತನಾಗಿದ್ದ. ಅವನನ್ನು ಕಳೆದುಕೊಂಡಿರುವುದಕ್ಕೆ ನನಗೂ ದುಃಖವಾಗುತ್ತಿದೆ. ನಿಮಗೆ ಯಾವುದೇ ನೆರವು ಬೇಕು ಎಂದರೆ ನನ್ನನ್ನು ನೇರವಾಗಿ ಸಂಪರ್ಕಿಸಿ, ನಿಮಗೆ ಸಹಾಯ ಮಾಡುತ್ತೇನೆ. ಸದಾ ನಿಮ್ಮೊಂದಿಗೆ ನಾವಿರುತ್ತೇವೆ’ ಎಂದುನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಮತ್ತು ತಾಯಿ ವಿಜಯಲಕ್ಷ್ಮಿ ಅವರಿಗೆ ಸಾಂತ್ವನದ ನುಡಿಗಳನ್ನಾಡಿ, ಧೈರ್ಯ ತುಂಬಿದರು.