<p><strong>ಹಾನಗಲ್ಲ:</strong> ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ದಿನಾಚರಣೆಯ ಅಂಗವಾಗಿ ಸೋಮವಾರ ಹಾನಗಲ್ಲಿನಲ್ಲಿ ಸಾರ್ವಜನಿಕರಿಗೆ ವಿಮಾ ಪಾಲಿಸಿಗಳ ಮಾಹಿತಿಯ ಪ್ರಚಾರ ಮಾಡ ಲಾಯಿತು. ಇದಕ್ಕಾಗಿ ಪಟ್ಟಣದಲ್ಲಿ ಪ್ರತಿನಿಧಿಗಳು ಬೈಕ್ ರ್ಯಾಲಿ ನಡೆಸಿದರು.<br /> <br /> ಇಲ್ಲಿನ ಶಾಖಾ ಕಚೇರಿಯಿಂದ ಹೊರಟ ಬೈಕ್ ರ್ಯಾಲಿ ತಡಸ-ಗೊಂದಿ ರಸ್ತೆಯ ಮೂಲಕ ಸಾಗಿ ನಿರೀಕ್ಷಣಾ ಮಂದಿರಕ್ಕೆ ತೆರಳಿ ರಂಜನಿ ಟಾಕೀಸಿನ ಬಳಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿತು.<br /> <br /> ನಂತರ ಶಾಖಾ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ 25 ವರ್ಷ ಪ್ರತಿನಿಧಿಯಾಗಿ ಸೇವೆಗೈದ ಪರಮೇಶ್ವರಪ್ಪ ಬೆಲ್ಲದ, ಆರ್.ಕೆ.ಶಾಂತಪೂರ ಮಠ, ಎಲ್.ಎಸ್.ಶಿವಣ್ಣನವರ, ಪಿ.ಕೆ.ಬಾಬಜಿ, ಎಸ್.ಎಸ್.ಎರಿಮನಿ ಅವರನ್ನು ಶಾಖಾ ಕಚೇರಿ ಪರವಾಗಿ ಸನ್ಮಾನಿಸಲಾಯಿತು.<br /> <br /> ಈ ಸಂದರ್ಭದಲ್ಲಿ ಶಾಖಾಧಿಕಾರಿ ಬಿ.ತುಳಸಿ ರಾಮ್ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದುವರೆಗೂ 30 ಕೋಟಿ ಪಾಲಿಸಿ ದಾರರನ್ನು ಹೊಂದಿ ಜನರ ವಿಶ್ವಾಸ ಗಳಿಸಿದೆ ಎಂದರು.<br /> <br /> ದೇಶದ ವಿಮಾ ರಂಗದಲ್ಲಿ ಎಲ್ಐಸಿ ಪ್ರಥಮ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಎಲ್ಲೈಸಿ ಪ್ರತಿನಿಧಿ ಗಳು ಪಾಲಿಸಿದಾರರಿಗೆ ಉತ್ತಮ ಸೇವೆ ನೀಡು ವತ್ತ ಗಮನ ಹರಿಸಬೇಕು. ಗ್ರಾಹಕರಿಗೆ ಪಾಲಿ ಸಿಗಳ ಸಮಗ್ರ ವಿವರವನ್ನು ನೀಡಬೇಕು ಎಂದು ಹೇಳಿದರು.<br /> <br /> ಬೈಕ್ ರ್ಯಾಲಿಯಲ್ಲಿ ಅಭಿವೃದ್ಧಿ ಅಧಿಕಾರಿ ಗಳಾದ ಎಸ್.ಎನ್.ಮುಕ್ರಿ, ಪಿ.ಎಸ್.ಸಾಂಬ್ರಾಣಿ, ಎಸ್.ಕೆ.ಖೇಣಿಕರ, ಎ.ಎ.ಲಾಲಮಿಯ್ಯಾನವರ, ಪ್ರತಿನಿಧಿ ಗಳಾದ ಪ್ರಕಾಶ ಜಂಗಲಿ, ಐ.ವಿ.ಮುದಿ ಗೌಡ್ರ, ಆರ್.ಕೆ.ಶಾಂತಪೂರಮಠ, ಪರಮೇಶ್ವ ರಪ್ಪ ಬೆಲ್ಲದ, ಜಿ ಎನ್ ಮೇಗಳಮನಿ, ಎಸ್ ಎಂ ಮಲಿಲ್ಲಿಗಾರ, ಜಿ.ಎಚ್.ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್ಲ:</strong> ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ದಿನಾಚರಣೆಯ ಅಂಗವಾಗಿ ಸೋಮವಾರ ಹಾನಗಲ್ಲಿನಲ್ಲಿ ಸಾರ್ವಜನಿಕರಿಗೆ ವಿಮಾ ಪಾಲಿಸಿಗಳ ಮಾಹಿತಿಯ ಪ್ರಚಾರ ಮಾಡ ಲಾಯಿತು. ಇದಕ್ಕಾಗಿ ಪಟ್ಟಣದಲ್ಲಿ ಪ್ರತಿನಿಧಿಗಳು ಬೈಕ್ ರ್ಯಾಲಿ ನಡೆಸಿದರು.<br /> <br /> ಇಲ್ಲಿನ ಶಾಖಾ ಕಚೇರಿಯಿಂದ ಹೊರಟ ಬೈಕ್ ರ್ಯಾಲಿ ತಡಸ-ಗೊಂದಿ ರಸ್ತೆಯ ಮೂಲಕ ಸಾಗಿ ನಿರೀಕ್ಷಣಾ ಮಂದಿರಕ್ಕೆ ತೆರಳಿ ರಂಜನಿ ಟಾಕೀಸಿನ ಬಳಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿತು.<br /> <br /> ನಂತರ ಶಾಖಾ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ 25 ವರ್ಷ ಪ್ರತಿನಿಧಿಯಾಗಿ ಸೇವೆಗೈದ ಪರಮೇಶ್ವರಪ್ಪ ಬೆಲ್ಲದ, ಆರ್.ಕೆ.ಶಾಂತಪೂರ ಮಠ, ಎಲ್.ಎಸ್.ಶಿವಣ್ಣನವರ, ಪಿ.ಕೆ.ಬಾಬಜಿ, ಎಸ್.ಎಸ್.ಎರಿಮನಿ ಅವರನ್ನು ಶಾಖಾ ಕಚೇರಿ ಪರವಾಗಿ ಸನ್ಮಾನಿಸಲಾಯಿತು.<br /> <br /> ಈ ಸಂದರ್ಭದಲ್ಲಿ ಶಾಖಾಧಿಕಾರಿ ಬಿ.ತುಳಸಿ ರಾಮ್ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದುವರೆಗೂ 30 ಕೋಟಿ ಪಾಲಿಸಿ ದಾರರನ್ನು ಹೊಂದಿ ಜನರ ವಿಶ್ವಾಸ ಗಳಿಸಿದೆ ಎಂದರು.<br /> <br /> ದೇಶದ ವಿಮಾ ರಂಗದಲ್ಲಿ ಎಲ್ಐಸಿ ಪ್ರಥಮ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಎಲ್ಲೈಸಿ ಪ್ರತಿನಿಧಿ ಗಳು ಪಾಲಿಸಿದಾರರಿಗೆ ಉತ್ತಮ ಸೇವೆ ನೀಡು ವತ್ತ ಗಮನ ಹರಿಸಬೇಕು. ಗ್ರಾಹಕರಿಗೆ ಪಾಲಿ ಸಿಗಳ ಸಮಗ್ರ ವಿವರವನ್ನು ನೀಡಬೇಕು ಎಂದು ಹೇಳಿದರು.<br /> <br /> ಬೈಕ್ ರ್ಯಾಲಿಯಲ್ಲಿ ಅಭಿವೃದ್ಧಿ ಅಧಿಕಾರಿ ಗಳಾದ ಎಸ್.ಎನ್.ಮುಕ್ರಿ, ಪಿ.ಎಸ್.ಸಾಂಬ್ರಾಣಿ, ಎಸ್.ಕೆ.ಖೇಣಿಕರ, ಎ.ಎ.ಲಾಲಮಿಯ್ಯಾನವರ, ಪ್ರತಿನಿಧಿ ಗಳಾದ ಪ್ರಕಾಶ ಜಂಗಲಿ, ಐ.ವಿ.ಮುದಿ ಗೌಡ್ರ, ಆರ್.ಕೆ.ಶಾಂತಪೂರಮಠ, ಪರಮೇಶ್ವ ರಪ್ಪ ಬೆಲ್ಲದ, ಜಿ ಎನ್ ಮೇಗಳಮನಿ, ಎಸ್ ಎಂ ಮಲಿಲ್ಲಿಗಾರ, ಜಿ.ಎಚ್.ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>