<p>ರಾಣೆಬೆನ್ನೂರು: ಕರ್ನಾಟಕ ವಿಶ್ವ ವಿದ್ಯಾಲಯದ ಕಾಲೇಜುಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರರಾದ ವಿ.ಎಂ. ಹಿರೇಮಠ ಮತ್ತು ಎಸ್.ಕೆ. ಕಾಮಠೆ ಅವರಿಗೆ ಮನವಿ ಸಲ್ಲಿಸಿದರು.<br /> <br /> ಸರ್ಕಾರ ವಿದ್ಯಾರ್ಥಿಗಳಿಂದ ₨ 565 ಶುಲ್ಕ ಕಟ್ಟಿಸಿಕೊಂಡು, ನಂತರ ಮರುಪಾವತಿ ಮಾಡುತ್ತೇವೆಂದು ಹಿಂದಿನ ವರ್ಷಗಳ ವಿದ್ಯಾರ್ಥಿಗಳಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈ ವರೆಗೂ ಯಾವುದೇ ಹಣವನ್ನು ಕೊಡದೇ ಮೋಸ ಮಾಡಿದೆ,<br /> ಹಾಗೆಯೇ ಈ ವರ್ಷ ಕೂಡ ಅದೇ ರಾಗ ಹಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.<br /> <br /> ನಗರ ಕಾರ್ಯದರ್ಶಿ ದೇವೆಂದ್ರ ಮಾಕನೂರು ಮಾತನಾಡಿ, ₨ 565 ಕಟ್ಟಬೇಕಂತೆ, ನಂತರ ಮರು ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ, ಅಲ್ಲದೇ ಶುಲ್ಕ ತುಂಬಲು ಮಾ.14 ಕೊನೆಯ ದಿನಾಂಕವಾಗಿದ್ದು, ತಪ್ಪಿದರೆ ದಿನಕ್ಕೆ ನೂರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ, ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆರೋಪಿಸಿದರು.<br /> <br /> ಸರ್ಕಾರ ಮೋಸ ಮಾಡುವುದನ್ನು ನಿಲ್ಲಿಸಬೇಕು, ಹಿಂದಿನ ವರ್ಷದ ಹಣ ಮರು ಪಾವತಿ ಮಾಡಬೇಕು, ದಂಡ ಹಾಕುವಂತಿಲ್ಲ, ಇದು ಮುಂದುವರೆದರೆ ಎಬಿಪಿವಿಪಿ ವತಿಯಿಂದ ಹೋರಾಟ ವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.<br /> <br /> ಮಮತಾ ಜಾಧವ, ಶ್ವೇತಾ ಗೌಡನಾಯಕರ, ವಿದ್ಯಾ ಅಡ್ಮನಿ, ಸಂಗೀತಾ ಎನ್, ಉಷಾ ಶಿಡಗನಾಳ, ಶಿವಕುಮಾರ ಓಲೇಕಾರ, ಹನುಮಂತ ಆರ್.ಆರ್, ಹೇಮಂತ, ಗಿರೀಶ ಜಾಧವ, ಲವಾ ತಾರಿಕೊಪ್ಪ, ಗಣೇಶ ಬಡಿಗೇರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ಕರ್ನಾಟಕ ವಿಶ್ವ ವಿದ್ಯಾಲಯದ ಕಾಲೇಜುಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರರಾದ ವಿ.ಎಂ. ಹಿರೇಮಠ ಮತ್ತು ಎಸ್.ಕೆ. ಕಾಮಠೆ ಅವರಿಗೆ ಮನವಿ ಸಲ್ಲಿಸಿದರು.<br /> <br /> ಸರ್ಕಾರ ವಿದ್ಯಾರ್ಥಿಗಳಿಂದ ₨ 565 ಶುಲ್ಕ ಕಟ್ಟಿಸಿಕೊಂಡು, ನಂತರ ಮರುಪಾವತಿ ಮಾಡುತ್ತೇವೆಂದು ಹಿಂದಿನ ವರ್ಷಗಳ ವಿದ್ಯಾರ್ಥಿಗಳಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈ ವರೆಗೂ ಯಾವುದೇ ಹಣವನ್ನು ಕೊಡದೇ ಮೋಸ ಮಾಡಿದೆ,<br /> ಹಾಗೆಯೇ ಈ ವರ್ಷ ಕೂಡ ಅದೇ ರಾಗ ಹಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.<br /> <br /> ನಗರ ಕಾರ್ಯದರ್ಶಿ ದೇವೆಂದ್ರ ಮಾಕನೂರು ಮಾತನಾಡಿ, ₨ 565 ಕಟ್ಟಬೇಕಂತೆ, ನಂತರ ಮರು ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ, ಅಲ್ಲದೇ ಶುಲ್ಕ ತುಂಬಲು ಮಾ.14 ಕೊನೆಯ ದಿನಾಂಕವಾಗಿದ್ದು, ತಪ್ಪಿದರೆ ದಿನಕ್ಕೆ ನೂರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ, ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆರೋಪಿಸಿದರು.<br /> <br /> ಸರ್ಕಾರ ಮೋಸ ಮಾಡುವುದನ್ನು ನಿಲ್ಲಿಸಬೇಕು, ಹಿಂದಿನ ವರ್ಷದ ಹಣ ಮರು ಪಾವತಿ ಮಾಡಬೇಕು, ದಂಡ ಹಾಕುವಂತಿಲ್ಲ, ಇದು ಮುಂದುವರೆದರೆ ಎಬಿಪಿವಿಪಿ ವತಿಯಿಂದ ಹೋರಾಟ ವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.<br /> <br /> ಮಮತಾ ಜಾಧವ, ಶ್ವೇತಾ ಗೌಡನಾಯಕರ, ವಿದ್ಯಾ ಅಡ್ಮನಿ, ಸಂಗೀತಾ ಎನ್, ಉಷಾ ಶಿಡಗನಾಳ, ಶಿವಕುಮಾರ ಓಲೇಕಾರ, ಹನುಮಂತ ಆರ್.ಆರ್, ಹೇಮಂತ, ಗಿರೀಶ ಜಾಧವ, ಲವಾ ತಾರಿಕೊಪ್ಪ, ಗಣೇಶ ಬಡಿಗೇರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>