<p><strong>ಹಾವೇರಿ:</strong> `ಭೂಮಿಯನ್ನು ಮಾರಿದರೆ, ಜನ್ಮಕೊಟ್ಟ ತಾಯಿಯನ್ನೇ ಮಾರಿದಂತೆ, ಯಾರಾದರೂ ತಾಯಿಯನ್ನು ಮಾರಾಟ ಮಾಡುತ್ತಾರೆಯೇ, ಒಂದು ವೇಳೆ ಮಾರಾಟ ಮಾಡಿದರೆ, ಈ ಸಮಾಜದಲ್ಲಿ ಆತನಿಗೆ ತಾಯಿಗಂ... ಎಂದು ಕರೆಯುತ್ತಾರೆ. ಬದುಕು ಕಟ್ಟಿಕೊಟ್ಟ ಭೂಮಿತಾಯಿಯನ್ನು ಮಾರಾಟ ಮಾಡಿ ಜನರಿಂದ ಆ ಮಾತನ್ನು ಅನ್ನಿಸಿಕೊಳ್ಳಬೇಕೇ? ಅದು ಎಂದಿಗೂ ಸಾಧ್ಯವಿಲ್ಲ. ಪ್ರಾಣವನ್ನಾದರೂ ಬಿಡುತ್ತೇವೆ ಹೊರತು, ಜಮೀನನ್ನು ನೀಡುವುದಿಲ್ಲ...!~<br /> <br /> ಇಂತಹ ಭಾವನಾತ್ಮಕ ಹಾಗೂ ಆಕ್ರೋಶಭರಿತ ಮಾತುಗಳನ್ನು ಹೇಳಿದವರು ಬೇರಾರೂ ಅಲ್ಲ. ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುವ ಅಗಡಿ ಹಾಗೂ ಬೂದಗಟ್ಟಿ ಗ್ರಾಮಗಳ ರೈತರು.<br /> <br /> ಸುಡು ಬಿಸಿಲು ನೆತ್ತಿಯನ್ನು ಚುರಗುಡುತ್ತಿದ್ದರೂ ಅದನ್ನು ಲೆಕ್ಕಿಸದೇ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ವಿರುದ್ಧ ಹೊಟ್ಟೆಯಲ್ಲಿರುವ ಆಕ್ರೋಶವನ್ನು ಮಾತಿನ ಮೂಲಕ ಹೊರಹಾಕಿದರು.<br /> <br /> ಫ್ಯಾಕ್ಟರಿಗೆ ಹೊಲ ಕೊಡುವುದಿಲ್ಲ ಎಂದರೂ, ಅವರು ಅಲ್ಲಿಯೇ ಫ್ಯಾಕ್ಟರಿ ಕಟ್ಟಲು ಸರ್ಕಾರ ಮುಂದಾದರೆ, ನಮ್ಮ ಹೆಣದ ಮೇಲೆ ಕಟ್ಟಲಿ. ಆದರೆ, ನಾವು ಜೀವಂತವಾಗಿರುವವರೆಗೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.<br /> <br /> ಅಗಡಿ ಹಾಗೂ ಬೂದಗಟ್ಟಿ ಗ್ರಾಮದ ರೈತರ ಜಮೀನುಗಳು ನೀರಾವರಿ ಸೌಲಭ್ಯ ಹೊಂದಿದ್ದು, ಇದರಲ್ಲಿ ರೈತರು ಉತ್ತಮ ಆದಾಯ ಪಡೆಯುತ್ತಿದ್ದೆೀವೆ. ಅಲ್ಲದೇ ತಮಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗ ತಿಳಿದಿಲ್ಲ. ಈ ಕಾರಣದಿಂದ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.<br /> <br /> ಸುಮಾರು 40 ಸಾವಿರ ಕೃಷಿ ಭೂಮಿ ಅವಲಂಬಿತ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಒಂದು ವೇಳೆ ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಭೂಸ್ವಾಧೀನ ಪಡಿಸಿಕೊಂಡರೆ, ಈ ಕುಟುಂಬಗಳು ಬೀದಿ ಪಾಲಾಗಲಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.<br /> <br /> ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ರೈತರ ಹೋರಾಟವನ್ನು ಸಡಿಲಗೊಳಿಸಲು ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. <br /> <br /> ನಮ್ಮ ಮೇಲೆ ಅಪನಂಬಿಕೆ ಹುಟ್ಟಿಸುವವರ ಮಾತನ್ನು ಕೇಳದೇ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ ಅವರು, ಜನರು ಹೇಳುವಂತೆ ತಾವು ಬೇರೆ ಕಡೆಯಾವುದೇ ಭೂಮಿಯನ್ನು ಖರೀದಿಸಿಲ್ಲ. ಇದೆಲ್ಲ ವಿರೋಧಿಗಳ ಕುಂತಂತ್ರದ ಮಾತಷ್ಟೇ ಎಂದು ಸ್ಪಷ್ಟಪಡಿಸಿದರು.<br /> <br /> ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ ಮಾತನಾಡಿ, ಅನ್ನ ನೀಡುವ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ಪರಬಾರೆ ಮಾಡಲು ಸಾಧ್ಯ ವಿಲ್ಲ. ಟಾಟಾ ಮೆಟಾಲಿಕ್ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಮುಂದಾದರೆ ತಮ್ಮ ಸಂಘಟನೆ ರೈತರ ಜತೆಗೂಡಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದರು.<br /> <br /> ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆಯಲ್ಲಿ ಚಕ್ಕಡಿಗಳ ಮೂಲಕ ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ರಸ್ತೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು. <br /> <br /> ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಹದೇವಪ್ಪ ಶಿವಣ್ಣವರ, ನೀಲಪ್ಪ ಇಚ್ಚಂಗಿ, ಯಲ್ಲಪ್ಪ ಅಗಸಿಬಾಗಿಲು, ಕರಿಯಪ್ಪ ಕಂಬಳಿ, ಶಿವಪುತ್ರಪ್ಪ ಮಡಿವಾಳರ, ಪುಟ್ಟಪ್ಪ ಕರಿಯಮ್ಮನವರ, ಗುಡ್ಡಪ್ಪ ಡಮ್ಮನಾಳ ಸೇರಿದಂತೆ ನೂರಾರು ರೈತರು ಚಕ್ಕಡಿಗಳೊಂದಿಗೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> `ಭೂಮಿಯನ್ನು ಮಾರಿದರೆ, ಜನ್ಮಕೊಟ್ಟ ತಾಯಿಯನ್ನೇ ಮಾರಿದಂತೆ, ಯಾರಾದರೂ ತಾಯಿಯನ್ನು ಮಾರಾಟ ಮಾಡುತ್ತಾರೆಯೇ, ಒಂದು ವೇಳೆ ಮಾರಾಟ ಮಾಡಿದರೆ, ಈ ಸಮಾಜದಲ್ಲಿ ಆತನಿಗೆ ತಾಯಿಗಂ... ಎಂದು ಕರೆಯುತ್ತಾರೆ. ಬದುಕು ಕಟ್ಟಿಕೊಟ್ಟ ಭೂಮಿತಾಯಿಯನ್ನು ಮಾರಾಟ ಮಾಡಿ ಜನರಿಂದ ಆ ಮಾತನ್ನು ಅನ್ನಿಸಿಕೊಳ್ಳಬೇಕೇ? ಅದು ಎಂದಿಗೂ ಸಾಧ್ಯವಿಲ್ಲ. ಪ್ರಾಣವನ್ನಾದರೂ ಬಿಡುತ್ತೇವೆ ಹೊರತು, ಜಮೀನನ್ನು ನೀಡುವುದಿಲ್ಲ...!~<br /> <br /> ಇಂತಹ ಭಾವನಾತ್ಮಕ ಹಾಗೂ ಆಕ್ರೋಶಭರಿತ ಮಾತುಗಳನ್ನು ಹೇಳಿದವರು ಬೇರಾರೂ ಅಲ್ಲ. ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುವ ಅಗಡಿ ಹಾಗೂ ಬೂದಗಟ್ಟಿ ಗ್ರಾಮಗಳ ರೈತರು.<br /> <br /> ಸುಡು ಬಿಸಿಲು ನೆತ್ತಿಯನ್ನು ಚುರಗುಡುತ್ತಿದ್ದರೂ ಅದನ್ನು ಲೆಕ್ಕಿಸದೇ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ವಿರುದ್ಧ ಹೊಟ್ಟೆಯಲ್ಲಿರುವ ಆಕ್ರೋಶವನ್ನು ಮಾತಿನ ಮೂಲಕ ಹೊರಹಾಕಿದರು.<br /> <br /> ಫ್ಯಾಕ್ಟರಿಗೆ ಹೊಲ ಕೊಡುವುದಿಲ್ಲ ಎಂದರೂ, ಅವರು ಅಲ್ಲಿಯೇ ಫ್ಯಾಕ್ಟರಿ ಕಟ್ಟಲು ಸರ್ಕಾರ ಮುಂದಾದರೆ, ನಮ್ಮ ಹೆಣದ ಮೇಲೆ ಕಟ್ಟಲಿ. ಆದರೆ, ನಾವು ಜೀವಂತವಾಗಿರುವವರೆಗೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.<br /> <br /> ಅಗಡಿ ಹಾಗೂ ಬೂದಗಟ್ಟಿ ಗ್ರಾಮದ ರೈತರ ಜಮೀನುಗಳು ನೀರಾವರಿ ಸೌಲಭ್ಯ ಹೊಂದಿದ್ದು, ಇದರಲ್ಲಿ ರೈತರು ಉತ್ತಮ ಆದಾಯ ಪಡೆಯುತ್ತಿದ್ದೆೀವೆ. ಅಲ್ಲದೇ ತಮಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗ ತಿಳಿದಿಲ್ಲ. ಈ ಕಾರಣದಿಂದ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.<br /> <br /> ಸುಮಾರು 40 ಸಾವಿರ ಕೃಷಿ ಭೂಮಿ ಅವಲಂಬಿತ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಒಂದು ವೇಳೆ ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಭೂಸ್ವಾಧೀನ ಪಡಿಸಿಕೊಂಡರೆ, ಈ ಕುಟುಂಬಗಳು ಬೀದಿ ಪಾಲಾಗಲಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.<br /> <br /> ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ರೈತರ ಹೋರಾಟವನ್ನು ಸಡಿಲಗೊಳಿಸಲು ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. <br /> <br /> ನಮ್ಮ ಮೇಲೆ ಅಪನಂಬಿಕೆ ಹುಟ್ಟಿಸುವವರ ಮಾತನ್ನು ಕೇಳದೇ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ ಅವರು, ಜನರು ಹೇಳುವಂತೆ ತಾವು ಬೇರೆ ಕಡೆಯಾವುದೇ ಭೂಮಿಯನ್ನು ಖರೀದಿಸಿಲ್ಲ. ಇದೆಲ್ಲ ವಿರೋಧಿಗಳ ಕುಂತಂತ್ರದ ಮಾತಷ್ಟೇ ಎಂದು ಸ್ಪಷ್ಟಪಡಿಸಿದರು.<br /> <br /> ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ ಮಾತನಾಡಿ, ಅನ್ನ ನೀಡುವ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ಪರಬಾರೆ ಮಾಡಲು ಸಾಧ್ಯ ವಿಲ್ಲ. ಟಾಟಾ ಮೆಟಾಲಿಕ್ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಮುಂದಾದರೆ ತಮ್ಮ ಸಂಘಟನೆ ರೈತರ ಜತೆಗೂಡಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದರು.<br /> <br /> ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆಯಲ್ಲಿ ಚಕ್ಕಡಿಗಳ ಮೂಲಕ ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ರಸ್ತೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು. <br /> <br /> ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಹದೇವಪ್ಪ ಶಿವಣ್ಣವರ, ನೀಲಪ್ಪ ಇಚ್ಚಂಗಿ, ಯಲ್ಲಪ್ಪ ಅಗಸಿಬಾಗಿಲು, ಕರಿಯಪ್ಪ ಕಂಬಳಿ, ಶಿವಪುತ್ರಪ್ಪ ಮಡಿವಾಳರ, ಪುಟ್ಟಪ್ಪ ಕರಿಯಮ್ಮನವರ, ಗುಡ್ಡಪ್ಪ ಡಮ್ಮನಾಳ ಸೇರಿದಂತೆ ನೂರಾರು ರೈತರು ಚಕ್ಕಡಿಗಳೊಂದಿಗೆ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>