‘ನಮ್ಮ ಪೂರ್ವಜರು ಭೂಮಿಯನ್ನು ದೇವರು ಮತ್ತು ತಾಯಿ ಸ್ವರೂಪಕ್ಕೆ ಹೋಲಿಕೆ ಮಾಡುತ್ತಿದ್ದರು. ಇದರಿಂದಾಗಿಯೇ ಭೂಮಿಯ ಸತ್ವ ಹಾಳು ಮಾಡುವಂತಹ ಯಾವೊಂದು ಕಾರ್ಯವನ್ನೂ ಮಾಡದೇ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೂಲಕ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಕೃಷಿ ಭೂಮಿಗೆ ರಾಸಾಯನಿಕಯುಕ್ತ ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ಭೂಮಿಯ ಸತ್ವ ಹಾಳಾಗುತ್ತಿದೆ. ಕಲಬೆರಕೆಯುಕ್ತ ಆಹಾರಗಳ ಸೇವನೆಯಿಂದ ಆರೋಗ್ಯವೂ ಕೆಡುತ್ತಿದೆ’ ಎಂದು ಹೇಳಿದರು.