‘ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಬಂಧಿಸಲು ಮೊದಲಿಗೆ ಇನ್ಸ್ಪೆಕ್ಟರ್ ರಾಘವೇಂದ್ರ ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಹಣ ನೀಡಲಿಲ್ಲ. ನಂತರ, ಆರೋಪಿಯು ಜಾಮೀನು ತೆಗೆದುಕೊಂಡ. ದೋಷಾರೋಪ ಪಟ್ಟಿಯಲ್ಲಿ ಕಠಿಣವಾದ ಸೆಕ್ಷನ್ಗಳನ್ನು ಹಾಕಬೇಕಾದರೆ, ಜಾಮೀನು ರದ್ದುಗೊಳಿಸಬೇಕಾದರೆ ಹಣ ನೀಡಲೇಬೇಕು ಎಂದು ಠಾಣೆಯ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈ ಹಂತದಲ್ಲಿ, ಸಂತ್ರಸ್ತೆಯ ಸೋದರ ವಿಷಯವನ್ನು ಎಸಿಬಿ ಗಮನಕ್ಕೆ ತಂದಿದ್ದಾರೆ. ನಗರದ ಹೊರವಲಯದ ವಸತಿ ಗೃಹವೊಂದರಲ್ಲಿ ₹75 ಸಾವಿರ ನೀಡುವಾಗ ಬಂಧಿಸಲಾಯಿತು’ ಎಂದು ಎಸಿಬಿ ಎಸ್ಪಿ ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.