<p><strong>ಚಿಂಚೋಳಿ (ಕಲಬುರಗಿ):</strong> ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 240 ಕ್ವಿಂಟಲ್ ಅನ್ನ ಭಾಗ್ಯದ ಪಡಿತರ ಅಕ್ಕಿ ಜಪ್ತಿ ಮಾಡಿ, ಒಬ್ಬರನ್ನು ಬಂಧಿಸಲಾಗಿದೆ.</p><p>ಹಸರಗುಂಡಗಿ ಗ್ರಾಮದ ಶರಣಸಿದ್ದಪ್ಪ ಶಂಕ್ರಪ್ಪ ಹೀರಾಪುರ ಬಂಧಿತ ಆರೋಪಿ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಶರಣಸಿದ್ದಪ್ಪ ಅವರ ಮನೆಯ ಎರಡು ಕೊಠಡಿಗಳಲ್ಲಿ 480 ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 240 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಅಕ್ಕಿ ದಾಸ್ತಾನಿಗೆ ಯಾವುದೇ ದಾಖಲೆ ಪತ್ರ ಹಾಗೂ ಪರವಾನಗಿ ಇರಲಿಲ್ಲ ಎಂದು ಆಹಾರ ನಿರೀಕ್ಷಕ ರಾಜು ಪಂಚಾಳ ತಿಳಿಸಿದ್ದಾರೆ. </p><p>ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 2.30ಕ್ಕೆ ಆಹಾರ ಇಲಾಖೆಯ ರಾಜು ಪಂಚಾಳ ಮತ್ತು ಚಿಂಚೋಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿದ್ದೇಶ್ವರ ಗಿರಡೆ, ರಮೇಶ, ಅಮೀರ್ ಅಲಿ, ನಾಗರಾಜ ಶೆಳಕೆ ಅವರಿದ್ದ ತಂಡ ದಾಳಿ ಮಾಡಿತು. ಈ ವೇಳೆ ಒಬ್ಬರ ಬಂಧಿನವಾಗಿದ್ದು, ಮತ್ತೊಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ (ಕಲಬುರಗಿ):</strong> ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 240 ಕ್ವಿಂಟಲ್ ಅನ್ನ ಭಾಗ್ಯದ ಪಡಿತರ ಅಕ್ಕಿ ಜಪ್ತಿ ಮಾಡಿ, ಒಬ್ಬರನ್ನು ಬಂಧಿಸಲಾಗಿದೆ.</p><p>ಹಸರಗುಂಡಗಿ ಗ್ರಾಮದ ಶರಣಸಿದ್ದಪ್ಪ ಶಂಕ್ರಪ್ಪ ಹೀರಾಪುರ ಬಂಧಿತ ಆರೋಪಿ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಶರಣಸಿದ್ದಪ್ಪ ಅವರ ಮನೆಯ ಎರಡು ಕೊಠಡಿಗಳಲ್ಲಿ 480 ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 240 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಅಕ್ಕಿ ದಾಸ್ತಾನಿಗೆ ಯಾವುದೇ ದಾಖಲೆ ಪತ್ರ ಹಾಗೂ ಪರವಾನಗಿ ಇರಲಿಲ್ಲ ಎಂದು ಆಹಾರ ನಿರೀಕ್ಷಕ ರಾಜು ಪಂಚಾಳ ತಿಳಿಸಿದ್ದಾರೆ. </p><p>ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 2.30ಕ್ಕೆ ಆಹಾರ ಇಲಾಖೆಯ ರಾಜು ಪಂಚಾಳ ಮತ್ತು ಚಿಂಚೋಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿದ್ದೇಶ್ವರ ಗಿರಡೆ, ರಮೇಶ, ಅಮೀರ್ ಅಲಿ, ನಾಗರಾಜ ಶೆಳಕೆ ಅವರಿದ್ದ ತಂಡ ದಾಳಿ ಮಾಡಿತು. ಈ ವೇಳೆ ಒಬ್ಬರ ಬಂಧಿನವಾಗಿದ್ದು, ಮತ್ತೊಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>