<p><strong>ಚಿತ್ತಾಪುರ (ಕಲಬುರ್ಗಿ ಜಿಲ್ಲೆ): </strong>ತಾಲ್ಲೂಕಿನರಾಂಪುರಹಳ್ಳಿ ಗ್ರಾಮ ಪಂಚಾಯಿತಿಗೆ 2015ರಲ್ಲಿ ಏಳು ಜನ ಸದಸ್ಯರು ಆಯ್ಕೆಯಾಗಿದ್ದರೂ, ಐದು ಸ್ಥಾನ ಖಾಲಿ ಉಳಿದಿವೆ ಎಂಬ ಕಾರಣಕ್ಕೆ ಅವರಿಗೆ ಇನ್ನೂ ‘ಅಧಿಕಾರ’ ಸಿಕ್ಕಿಲ್ಲ.</p>.<p>ಹಿಂದಿನ ಚುನಾವಣೆಗೂ ಮುನ್ನ ಗ್ರಾಮ ಪಂಚಾಯಿತಿ ವಿಭಜನೆ ಮಾಡಲಾಗಿತ್ತು. ತಾಲ್ಲೂಕಿನ ರಾಂಪುರಹಳ್ಳಿ, ಶಾಂಪುರಹಳ್ಳಿ ಮತ್ತು ತರಕಸಪೇಠ ಗ್ರಾಮಗಳನ್ನು ಒಳಗೊಂಡು ಹೊಸದಾಗಿ 11 ಸದಸ್ಯ ಬಲದ ರಾಂಪುರಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ ರಚಿಸಿತ್ತು.</p>.<p>ರಾಂಪುರಹಳ್ಳಿಯ ನಾಲ್ಕು ಸ್ಥಾನ ಮತ್ತು ಶಾಂಪುರಹಳ್ಳಿ ಮೂರು ಸ್ಥಾನಗಳಿಗೆ ಚುನಾವಣೆ ಜರುಗಿ ಏಳು ಸದಸ್ಯರು ಚುನಾಯಿತರಾಗಿದ್ದರು.</p>.<p>ಆದರೆ, ತಮ್ಮ ಗ್ರಾಮಕ್ಕೆ ಆರು ಸದಸ್ಯ ಸ್ಥಾನ ಬೇಕು, ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ತಮ್ಮೂರಿಗೆ ಕೊಡಬೇಕು ಇಲ್ಲವೆ ಮೊದಲಿದ್ದಂತೆ<br />ಗ್ರಾಮವನ್ನು ಕೊಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ತರಕಸಪೇಠ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದಆ ಗ್ರಾಮದ ನಾಲ್ಕು ಸ್ಥಾನಗಳಿಗೆ ಐದು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ.</p>.<p>ಎಲ್ಲ 11 ಸ್ಥಾನಗಳಿಗೆ ಆಯ್ಕೆ ನಡೆದಿಲ್ಲ ಎಂಬ ಕಾರಣಕ್ಕೆರಾಂಪುರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾ<br />ಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದಿಗೂ ನಡೆದಿಲ್ಲ. ಹೀಗಾಗಿ ಆಯ್ಕೆಯಾಗಿರುವ ಸದಸ್ಯರ ಅಧಿಕಾರ ಅವಧಿಯೇ ಆರಂಭವಾಗಿಲ್ಲ.</p>.<p>ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದರೂ, ತರಕಸಪೇಠ ಗ್ರಾಮಸ್ಥರು ಒಗ್ಗಟ್ಟು ತೋರಿ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆ<br />ಯಲ್ಲಿ ಮತದಾನ ಮಾಡಿದ್ದರು.</p>.<p>‘ತರಕಸಪೇಠ ಗ್ರಾಮಸ್ಥರ ಬಹಿಷ್ಕಾರ<br />ದಿಂದಾಗಿ ಅಧಿಕಾರದ ಅವಧಿ ಮುಗಿ<br />ಯದ ರಾಂಪುರಹಳ್ಳಿ ಪಂಚಾಯಿತಿ ಚುನಾವಣೆ ಕೈಬಿಡ<br />ಲಾಗಿದೆ’ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಪ್ರತಿಕ್ರಿಯಿಸಿದ್ದಾರೆ.</p>.<p class="Subhead">ಜಿಲ್ಲಾಡಳಿತದ ನಿರ್ಲಕ್ಷ್ಯ: ‘ತರಕಸಪೇಠ ಗ್ರಾಮಸ್ಥರ ಬೇಡಿಕೆಯಿಂದ ಉಂಟಾದ ಸಮಸ್ಯೆ ಪರಿಹರಿಸುವಲ್ಲಿಜಿಲ್ಲಾಡಳಿತವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಒಂದು ಗ್ರಾಮದ ಸಮಸ್ಯೆಯಿಂದ ಎರಡು ಗ್ರಾಮಗಳಿಗೆ ಅನ್ಯಾಯ ಆಗುತ್ತಿದೆ’ ಎಂದು ಮುಖಂಡರೊಬ್ಬರು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ (ಕಲಬುರ್ಗಿ ಜಿಲ್ಲೆ): </strong>ತಾಲ್ಲೂಕಿನರಾಂಪುರಹಳ್ಳಿ ಗ್ರಾಮ ಪಂಚಾಯಿತಿಗೆ 2015ರಲ್ಲಿ ಏಳು ಜನ ಸದಸ್ಯರು ಆಯ್ಕೆಯಾಗಿದ್ದರೂ, ಐದು ಸ್ಥಾನ ಖಾಲಿ ಉಳಿದಿವೆ ಎಂಬ ಕಾರಣಕ್ಕೆ ಅವರಿಗೆ ಇನ್ನೂ ‘ಅಧಿಕಾರ’ ಸಿಕ್ಕಿಲ್ಲ.</p>.<p>ಹಿಂದಿನ ಚುನಾವಣೆಗೂ ಮುನ್ನ ಗ್ರಾಮ ಪಂಚಾಯಿತಿ ವಿಭಜನೆ ಮಾಡಲಾಗಿತ್ತು. ತಾಲ್ಲೂಕಿನ ರಾಂಪುರಹಳ್ಳಿ, ಶಾಂಪುರಹಳ್ಳಿ ಮತ್ತು ತರಕಸಪೇಠ ಗ್ರಾಮಗಳನ್ನು ಒಳಗೊಂಡು ಹೊಸದಾಗಿ 11 ಸದಸ್ಯ ಬಲದ ರಾಂಪುರಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ ರಚಿಸಿತ್ತು.</p>.<p>ರಾಂಪುರಹಳ್ಳಿಯ ನಾಲ್ಕು ಸ್ಥಾನ ಮತ್ತು ಶಾಂಪುರಹಳ್ಳಿ ಮೂರು ಸ್ಥಾನಗಳಿಗೆ ಚುನಾವಣೆ ಜರುಗಿ ಏಳು ಸದಸ್ಯರು ಚುನಾಯಿತರಾಗಿದ್ದರು.</p>.<p>ಆದರೆ, ತಮ್ಮ ಗ್ರಾಮಕ್ಕೆ ಆರು ಸದಸ್ಯ ಸ್ಥಾನ ಬೇಕು, ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ತಮ್ಮೂರಿಗೆ ಕೊಡಬೇಕು ಇಲ್ಲವೆ ಮೊದಲಿದ್ದಂತೆ<br />ಗ್ರಾಮವನ್ನು ಕೊಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ತರಕಸಪೇಠ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದಆ ಗ್ರಾಮದ ನಾಲ್ಕು ಸ್ಥಾನಗಳಿಗೆ ಐದು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ.</p>.<p>ಎಲ್ಲ 11 ಸ್ಥಾನಗಳಿಗೆ ಆಯ್ಕೆ ನಡೆದಿಲ್ಲ ಎಂಬ ಕಾರಣಕ್ಕೆರಾಂಪುರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾ<br />ಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದಿಗೂ ನಡೆದಿಲ್ಲ. ಹೀಗಾಗಿ ಆಯ್ಕೆಯಾಗಿರುವ ಸದಸ್ಯರ ಅಧಿಕಾರ ಅವಧಿಯೇ ಆರಂಭವಾಗಿಲ್ಲ.</p>.<p>ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದರೂ, ತರಕಸಪೇಠ ಗ್ರಾಮಸ್ಥರು ಒಗ್ಗಟ್ಟು ತೋರಿ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆ<br />ಯಲ್ಲಿ ಮತದಾನ ಮಾಡಿದ್ದರು.</p>.<p>‘ತರಕಸಪೇಠ ಗ್ರಾಮಸ್ಥರ ಬಹಿಷ್ಕಾರ<br />ದಿಂದಾಗಿ ಅಧಿಕಾರದ ಅವಧಿ ಮುಗಿ<br />ಯದ ರಾಂಪುರಹಳ್ಳಿ ಪಂಚಾಯಿತಿ ಚುನಾವಣೆ ಕೈಬಿಡ<br />ಲಾಗಿದೆ’ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಪ್ರತಿಕ್ರಿಯಿಸಿದ್ದಾರೆ.</p>.<p class="Subhead">ಜಿಲ್ಲಾಡಳಿತದ ನಿರ್ಲಕ್ಷ್ಯ: ‘ತರಕಸಪೇಠ ಗ್ರಾಮಸ್ಥರ ಬೇಡಿಕೆಯಿಂದ ಉಂಟಾದ ಸಮಸ್ಯೆ ಪರಿಹರಿಸುವಲ್ಲಿಜಿಲ್ಲಾಡಳಿತವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಒಂದು ಗ್ರಾಮದ ಸಮಸ್ಯೆಯಿಂದ ಎರಡು ಗ್ರಾಮಗಳಿಗೆ ಅನ್ಯಾಯ ಆಗುತ್ತಿದೆ’ ಎಂದು ಮುಖಂಡರೊಬ್ಬರು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>