<p>ಕಲಬುರಗಿ: ನಗರದ ಹೊರವಲಯದ ಹೈಕೋರ್ಟ್ ಹಿಂಬದಿ ಶರಣ ಸಿರಸಗಿ ಮಡ್ಡಿಯಲ್ಲಿರುವ ಕಾಶಿ ಕಮಲ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಮಧ್ಯರಾತ್ರಿ ಸರಣಿ ಕಳವು ನಡೆದಿದ್ದು, ಎರಡು ಮನೆಗಳ ಬೀಗ ಒಡೆದು ₹ 7.90 ಲಕ್ಷದ ಚಿನ್ನಾಭರಣ ಹಾಗೂ ನಗದು ದೋಚಿ ಹೋಗಿದ್ದಾರೆ.</p>.<p>ರಮೇಶ ಮಹಾದೇವಪ್ಪ ಪಾಟೀಲ ಅವರ ಮನೆಯಲ್ಲಿರಿಸಿದ್ದ ₹ 5.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹಣ, ಡಾ. ಮಲ್ಲಿಕಾರ್ಜುನ ಕೃಷ್ಣಾಕರ್ ಎಂಬುವವರ ಮನೆಯಲ್ಲಿರಿಸಿದ್ದ ₹ 2.65 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.</p>.<p>ಅಫಜಲಪುರದ ವಿಕೆಜಿ ನಗರದ ನಿವಾಸಿ ರಮೇಶ ಮಹಾದೇವಪ್ಪ ಪಾಟೀಲ ಅವರ ಕಾಶಿ ಕಮಲ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ನುಗ್ಗಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ₹ 1.80 ಲಕ್ಷ ಮೌಲ್ಯದ 45 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 60 ಸಾವಿರ ಮೌಲ್ಯದ 15 ಗ್ರಾಂನ ಒಂದು ಬಂಗಾರದ ಗುಂಡಿನ ಸರ, ₹ 1 ಲಕ್ಷ ಮೌಲ್ಯದ 25 ಗ್ರಾಂನ ನಾಲ್ಕು ಜೊತೆ ಬಂಗಾರದ ಕಿವಿ ಓಲೆಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಎರಡು ಬಂಗಾರದ ಉಂಗುರಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ಲಾಕೇಟ್, ₹ 15 ಸಾವಿರ ಮೌಲ್ಯದ 250 ಗ್ರಾಂನ ಬೆಳ್ಳಿ ಆಭರಣಗಳು, ನಗದು ಹಣ ₹ 50 ಸಾವಿರ ಸೇರಿ ಒಟ್ಟು ₹ 5.25 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.</p>.<p>ಅದೇ ಅಪಾರ್ಟ್ಮೆಂಟ್ನ ಡಾ. ಮಲ್ಲಿಕಾರ್ಜುನ ಅವರ ಮನೆಗೆ ನುಗ್ಗಿದ ಕಳ್ಳರು ಮನೆಯ ಅಲ್ಮೇರಾದಲ್ಲಿ ಇಟ್ಟಿದ್ದ ತಲಾ ₹ 1 ಲಕ್ಷ ಮೌಲ್ಯದ 5 ಗ್ರಾಂ ತೂಕದ 4 ಬಂಗಾರದ ಸುತ್ತುಂಗುರಗಳು, ₹ 1 ಲಕ್ಷ ಮೌಲ್ಯದ ತಲಾ 10 ಗ್ರಾಂನ 2 ಬಂಗಾರದ ಲಾಕೇಟ್ಗಳು, ₹ 50 ಸಾವಿರ ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ₹ 15 ಸಾವಿರ ಮೌಲ್ಯದ 250 ಗ್ರಾಂ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ₹ 2.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತಿ ದೊಡ್ಡ ಮೊತ್ತದ ಕಳ್ಳತನ ಇದಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಅಪಾರ್ಟ್ಮೆಂಟ್ನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಇರಲಿಲ್ಲ. ಇದನ್ನು ಗಮನಿಸಿದ ಕಳ್ಳರು ಅಪಾರ್ಟ್ಮೆಂಟ್ ಹಿಂಬದಿಯ ಫ್ಲ್ಯಾಟ್ಗಳನ್ನು ಗುರಿಯಾಗಿಸಿ ಕಳ್ಳತನ ಮಾಡಿದ್ದಾರೆ. ಕಳ್ಳರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ<br />ಚೇತನ್ ಆರ್.<br />ಕಲಬುರಗಿ ಪೊಲೀಸ್ ಕಮಿಷನರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ನಗರದ ಹೊರವಲಯದ ಹೈಕೋರ್ಟ್ ಹಿಂಬದಿ ಶರಣ ಸಿರಸಗಿ ಮಡ್ಡಿಯಲ್ಲಿರುವ ಕಾಶಿ ಕಮಲ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಮಧ್ಯರಾತ್ರಿ ಸರಣಿ ಕಳವು ನಡೆದಿದ್ದು, ಎರಡು ಮನೆಗಳ ಬೀಗ ಒಡೆದು ₹ 7.90 ಲಕ್ಷದ ಚಿನ್ನಾಭರಣ ಹಾಗೂ ನಗದು ದೋಚಿ ಹೋಗಿದ್ದಾರೆ.</p>.<p>ರಮೇಶ ಮಹಾದೇವಪ್ಪ ಪಾಟೀಲ ಅವರ ಮನೆಯಲ್ಲಿರಿಸಿದ್ದ ₹ 5.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹಣ, ಡಾ. ಮಲ್ಲಿಕಾರ್ಜುನ ಕೃಷ್ಣಾಕರ್ ಎಂಬುವವರ ಮನೆಯಲ್ಲಿರಿಸಿದ್ದ ₹ 2.65 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.</p>.<p>ಅಫಜಲಪುರದ ವಿಕೆಜಿ ನಗರದ ನಿವಾಸಿ ರಮೇಶ ಮಹಾದೇವಪ್ಪ ಪಾಟೀಲ ಅವರ ಕಾಶಿ ಕಮಲ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ನುಗ್ಗಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ₹ 1.80 ಲಕ್ಷ ಮೌಲ್ಯದ 45 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 60 ಸಾವಿರ ಮೌಲ್ಯದ 15 ಗ್ರಾಂನ ಒಂದು ಬಂಗಾರದ ಗುಂಡಿನ ಸರ, ₹ 1 ಲಕ್ಷ ಮೌಲ್ಯದ 25 ಗ್ರಾಂನ ನಾಲ್ಕು ಜೊತೆ ಬಂಗಾರದ ಕಿವಿ ಓಲೆಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಎರಡು ಬಂಗಾರದ ಉಂಗುರಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ಲಾಕೇಟ್, ₹ 15 ಸಾವಿರ ಮೌಲ್ಯದ 250 ಗ್ರಾಂನ ಬೆಳ್ಳಿ ಆಭರಣಗಳು, ನಗದು ಹಣ ₹ 50 ಸಾವಿರ ಸೇರಿ ಒಟ್ಟು ₹ 5.25 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.</p>.<p>ಅದೇ ಅಪಾರ್ಟ್ಮೆಂಟ್ನ ಡಾ. ಮಲ್ಲಿಕಾರ್ಜುನ ಅವರ ಮನೆಗೆ ನುಗ್ಗಿದ ಕಳ್ಳರು ಮನೆಯ ಅಲ್ಮೇರಾದಲ್ಲಿ ಇಟ್ಟಿದ್ದ ತಲಾ ₹ 1 ಲಕ್ಷ ಮೌಲ್ಯದ 5 ಗ್ರಾಂ ತೂಕದ 4 ಬಂಗಾರದ ಸುತ್ತುಂಗುರಗಳು, ₹ 1 ಲಕ್ಷ ಮೌಲ್ಯದ ತಲಾ 10 ಗ್ರಾಂನ 2 ಬಂಗಾರದ ಲಾಕೇಟ್ಗಳು, ₹ 50 ಸಾವಿರ ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ₹ 15 ಸಾವಿರ ಮೌಲ್ಯದ 250 ಗ್ರಾಂ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ₹ 2.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತಿ ದೊಡ್ಡ ಮೊತ್ತದ ಕಳ್ಳತನ ಇದಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಅಪಾರ್ಟ್ಮೆಂಟ್ನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಇರಲಿಲ್ಲ. ಇದನ್ನು ಗಮನಿಸಿದ ಕಳ್ಳರು ಅಪಾರ್ಟ್ಮೆಂಟ್ ಹಿಂಬದಿಯ ಫ್ಲ್ಯಾಟ್ಗಳನ್ನು ಗುರಿಯಾಗಿಸಿ ಕಳ್ಳತನ ಮಾಡಿದ್ದಾರೆ. ಕಳ್ಳರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ<br />ಚೇತನ್ ಆರ್.<br />ಕಲಬುರಗಿ ಪೊಲೀಸ್ ಕಮಿಷನರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>