ನಗರದ ನಾಗನಹಳ್ಳಿ ವರ್ತುಲ ರಸ್ತೆಯಲ್ಲಿ ಮೂರು ವಾಹನಗಳಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಒಯ್ಯುತ್ತಿರುವುದನ್ನು ಗಮನಿಸಿದ ಪೊಲೀಸರು ಅವುಗಳನ್ನು ತಡೆದು ವಿಚಾರಿಸಿದ್ದಾರೆ. ವಾಹನಗಳ ಚಾಲಕರಾದ ಖಣದಾಳ ಗ್ರಾಮದ ಸಲೀಂ ಪಟೇಲ್ ಮಕ್ಬುಲ್ ಪಟೇಲ್ (23), ಹಾಗರಗಾ ಕ್ರಾಸ್ನ ಅಕ್ರಂ ಪಾಶಾ ಜಾಫರ್ ಶಹಾ (30) ಮತ್ತು ಬಸವೇಶ್ವರ ಕಾಲೊನಿಯ ಸೈಯದ್ ಅಲ್ತಾಫ್ ಸೈಯದ್ ತಾಜೋದ್ದೀನ್ ಎಂಬುವವರನ್ನು ಬಂಧಿಸಲಾಗಿದೆ. ಪೊಲೀಷ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್. ಇನಾಂದಾರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶಿವಾನಂದ ಗಾಣಿಗೇರ ನೇತೃತ್ವದಲ್ಲಿ ದಾಳಿ ನಡೆಯಿತು. ಪ್ರಕರಣ ದಾಖಲಾಗಿದೆ.