ಧಾರವಾಡ ಘಟನೆ ನೆನಪಿಸಿದ ಅಪಘಾತ: 2015ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ಮಧ್ಯೆ ನಡೆದ ರಸ್ತೆ ಅಪಘಾತವನ್ನೇ ಈ ಘಟನೆ ಹೋಲುತ್ತದೆ. ಎದುರಿನಿಂದ ಬಸ್ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರು ಎರಡು ಭಾಗಗಳಾಗಿ ತುಂಡಾಗಿ, ಅದರಲ್ಲಿದ್ದ ಐವರು ವಿದ್ಯಾರ್ಥಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಪುತ್ರ ಅನೀಶ್ ಹಾಗೂ ಬಳ್ಳಾರಿ ಹೆಚ್ಚುವರಿ ಎಸ್ಪಿಯಾಗಿದ್ದ ವಿಜಯ ಡಂಬಳ ಅವರ ಪುತ್ರ ಶಿವದೀಪ್ ಡಂಬಳ ಸೇರಿ ಐವರ ದೇಹದ ಬಿಡಿಭಾಗಗಳು 50 ಮೀಟರ್ ವಿಸ್ತೀರ್ಣದಲ್ಲಿ ಬಿದ್ದಿದ್ದವು.