ನಗರದಲ್ಲಿ ಭಾನುವಾರ ಸಂಘಟನೆಯ ರಾಜ್ಯ ಕೌನ್ಸಿಲ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ನಮ್ಮ ದೇಶದ ರಾಜರಹಿತ ಪಂಥದ ಅಗ್ರಗಣ್ಯ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕ ಕಾರ್ಯಕ್ರಮಗಳು ರಾಜ್ಯದಾದ್ಯಂತ ನಡೆದಿವೆ. ಯುವ ಯುವಜನರಲ್ಲಿ ಹೊಸ ಸ್ಪೂರ್ತಿ ತಂದಿವೆ. ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು ಅಧಿಕಾರಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಹರಸಾಹಸಪಡುತ್ತಿವೆ. ಜನರ ಸಮಸ್ಯೆ ಪರಿಹಾರ ಮಾಡದೆ ಬರಿ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿವೆ. ಇದನ್ನು ಯುವಜನರು ಅರಿಯಬೇಕು. ಚುನಾವಣೆಯಿಂದ ನಿರುದ್ಯೋಗ ಸಮಸ್ಯೆ ಪರಿಹಾರ ಆಗುವುದಿಲ್ಲ. ಸಂಘಟಿತ ಹೋರಾಟವೊಂದೇ ಅದಕ್ಕೆ ಪರಿಹಾರ’ ಎಂದರು.