<p><strong>ಆಳಂದ</strong>: ಪಟ್ಟಣದಲ್ಲಿ ಮಹಾರಾಷ್ಟ್ರದ ನಾಣೇಜಧಾಮದ ನರೇಂದ್ರಾಚಾರ್ಯ ಮಹಾರಾಜರ ಪಾದುಕೆ ದರ್ಶನ ಕಾರ್ಯ ಕ್ರಮವು ಅದ್ದೂರಿಯಾಗಿ ಜರುಗಿತು.</p>.<p>ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ವಿವಿಧೆಡೆಯಿಂದ ಭಕ್ತರು ಈ ಪಾದುಕೆ ದರ್ಶನದಲ್ಲಿ ಸಮ್ಮೀಲನಗೊಂಡಿರುವದು ವಿಶೇಷವಾಗಿತ್ತು.</p>.<p>ಪಟ್ಟಣದ ಶ್ರೀರಾಮ ಮಾರುಕಟ್ಟೆ ಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಎಸ್ಆರ್ಜಿ ಆಂಗ್ಲಮಾಧ್ಯಮ ಶಾಲೆ ಆವರಣದವರೆಗೂ ಭವ್ಯ ಮೆರವಣಿಗೆ ಸಾಗಿತು.</p>.<p>ಮಹಿಳೆಯರು ನೃತ್ಯ, ಹರಿಭಜನೆ, ಡೊಳ್ಳು ಕುಣಿತ ಮತ್ತಿತರ ವಾದ್ಯಗಳ ಸಡಗರವು ಮೆರವಣಿಗೆಗೆ ಕಳೆ ಕಟ್ಟಿತು. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪಾದುಕೆ ದರ್ಶನ ಕೈಗೊಂಡರು.</p>.<p>ನಾಣೇಜಧಾಮದ ರಾಣಾ ಬರೇ ಮಾತನಾಡಿ,‘ಭಕ್ತಿಯಿಂದ ಪರೋಪ ಕಾರ, ಮಾನವೀಯತೆ ಹಾಗೂ ಸದ್ಗು ಣಗಳು ಅರಳುವವು, ಹೀಗಾಗಿ ನಮ್ಮ ಮನಸ್ಸು ಹಾಗೂ ಇಂದ್ರೀಯಗಳನ್ನು ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.</p>.<p>ಅಂಧಶ್ರದ್ಧೆ ಮನುಷ್ಯನನ್ನು ಅಜ್ಞಾನ ದತ್ತ ಕರೆದುಕೊಂಡು ಹೋಗಲಿದೆ, ಅಧ್ಯಾತ್ಮ, ಯೋಗ, ಜ್ಞಾನಗಳು ಸನ್ಮಾರ್ಗದತ್ತ ಕರೆದುಕೊಂಡು ಹೋಗಲಿವೆ, ನರೇಂದ್ರಾಚಾರ್ಯ ಸ್ವಾಮೀಜಿ ಅವರ ಅಧ್ಯಾತ್ಮ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.</p>.<p>ಉದಗೀರ್ನ ಸುಶೀಲ ಪಾಟೀಲ, ಕಲಬುರಗಿಯ ವಿಠಲ ಕಾಳೆ, ನಾಗನಾಥ ಏಟೆ, ಅಂಬಾದಾಸ ಸಿಂಧೆ, ತಾನಾಜಿ ಪವಾರ, ಹರ್ಷಾನಂದ ಗುತ್ತೇದಾರ, ದತ್ತಾ ಬಾಬರೆ, ಪಂಡಿತ ಶೇರಿಕಾರ, ರಾಹುಲ ಚಿಟ್ಟೆಕರ್, ನರೇಶ ಬೋಸಲೆ, ಸೋಮನಾಥ ನಾಗಬುಜಂಗೆ, ಮನೋಹರ ಮಾನೆ, ನಂದಕುಮಾರ ಹಂಚಾಟೆ ಇದ್ದರು.</p>.<p>ಕಲಬುರಗಿ, ಆಳಂದ, ಕಮಲಾ ಪುರ, ಉಮರ್ಗಾ, ಸೋಲಾಪುರ, ನಾಂದೇಡ ಮತ್ತಿತರ ತಾಲ್ಲೂಕಿನಿಂದ ಭಕ್ತರು ಪಾದುಕೆ ದರ್ಶನದಲ್ಲಿ ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ಪಟ್ಟಣದಲ್ಲಿ ಮಹಾರಾಷ್ಟ್ರದ ನಾಣೇಜಧಾಮದ ನರೇಂದ್ರಾಚಾರ್ಯ ಮಹಾರಾಜರ ಪಾದುಕೆ ದರ್ಶನ ಕಾರ್ಯ ಕ್ರಮವು ಅದ್ದೂರಿಯಾಗಿ ಜರುಗಿತು.</p>.<p>ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ವಿವಿಧೆಡೆಯಿಂದ ಭಕ್ತರು ಈ ಪಾದುಕೆ ದರ್ಶನದಲ್ಲಿ ಸಮ್ಮೀಲನಗೊಂಡಿರುವದು ವಿಶೇಷವಾಗಿತ್ತು.</p>.<p>ಪಟ್ಟಣದ ಶ್ರೀರಾಮ ಮಾರುಕಟ್ಟೆ ಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಎಸ್ಆರ್ಜಿ ಆಂಗ್ಲಮಾಧ್ಯಮ ಶಾಲೆ ಆವರಣದವರೆಗೂ ಭವ್ಯ ಮೆರವಣಿಗೆ ಸಾಗಿತು.</p>.<p>ಮಹಿಳೆಯರು ನೃತ್ಯ, ಹರಿಭಜನೆ, ಡೊಳ್ಳು ಕುಣಿತ ಮತ್ತಿತರ ವಾದ್ಯಗಳ ಸಡಗರವು ಮೆರವಣಿಗೆಗೆ ಕಳೆ ಕಟ್ಟಿತು. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪಾದುಕೆ ದರ್ಶನ ಕೈಗೊಂಡರು.</p>.<p>ನಾಣೇಜಧಾಮದ ರಾಣಾ ಬರೇ ಮಾತನಾಡಿ,‘ಭಕ್ತಿಯಿಂದ ಪರೋಪ ಕಾರ, ಮಾನವೀಯತೆ ಹಾಗೂ ಸದ್ಗು ಣಗಳು ಅರಳುವವು, ಹೀಗಾಗಿ ನಮ್ಮ ಮನಸ್ಸು ಹಾಗೂ ಇಂದ್ರೀಯಗಳನ್ನು ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.</p>.<p>ಅಂಧಶ್ರದ್ಧೆ ಮನುಷ್ಯನನ್ನು ಅಜ್ಞಾನ ದತ್ತ ಕರೆದುಕೊಂಡು ಹೋಗಲಿದೆ, ಅಧ್ಯಾತ್ಮ, ಯೋಗ, ಜ್ಞಾನಗಳು ಸನ್ಮಾರ್ಗದತ್ತ ಕರೆದುಕೊಂಡು ಹೋಗಲಿವೆ, ನರೇಂದ್ರಾಚಾರ್ಯ ಸ್ವಾಮೀಜಿ ಅವರ ಅಧ್ಯಾತ್ಮ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.</p>.<p>ಉದಗೀರ್ನ ಸುಶೀಲ ಪಾಟೀಲ, ಕಲಬುರಗಿಯ ವಿಠಲ ಕಾಳೆ, ನಾಗನಾಥ ಏಟೆ, ಅಂಬಾದಾಸ ಸಿಂಧೆ, ತಾನಾಜಿ ಪವಾರ, ಹರ್ಷಾನಂದ ಗುತ್ತೇದಾರ, ದತ್ತಾ ಬಾಬರೆ, ಪಂಡಿತ ಶೇರಿಕಾರ, ರಾಹುಲ ಚಿಟ್ಟೆಕರ್, ನರೇಶ ಬೋಸಲೆ, ಸೋಮನಾಥ ನಾಗಬುಜಂಗೆ, ಮನೋಹರ ಮಾನೆ, ನಂದಕುಮಾರ ಹಂಚಾಟೆ ಇದ್ದರು.</p>.<p>ಕಲಬುರಗಿ, ಆಳಂದ, ಕಮಲಾ ಪುರ, ಉಮರ್ಗಾ, ಸೋಲಾಪುರ, ನಾಂದೇಡ ಮತ್ತಿತರ ತಾಲ್ಲೂಕಿನಿಂದ ಭಕ್ತರು ಪಾದುಕೆ ದರ್ಶನದಲ್ಲಿ ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>