<p><strong>ಅಫಜಲಪುರ</strong>: ‘ಆಯುರ್ವೇದವು 5 ಸಾವಿರ ವರ್ಷಗಳಿಗಿಂತಲೂ ಹಳೆಯದಾದ, ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಭಾರತೀಯ ಜ್ಞಾನವಾಗಿದೆ. ಇದು ನೈಸರ್ಗಿಕ ಮೂಲಿಕೆಗಳು, ಯೋಗ ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ರೋಗಗಳನ್ನು ತಡೆಗಟ್ಟುವ ಸಮಗ್ರ ವೈದ್ಯಕೀಯ ಪದ್ಧತಿಯಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಶನಿವಾರ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಮಧುಮೇಹ ನಿಯಂತ್ರಣದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಶಿಬಿರದಲ್ಲಿ ಮಾತನಾಡಿದರು.</p>.<p>ಘತ್ತರಗಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಪ್ರಮೋದಾದೇವಿ ಅವರು ಮಾತನಾಡಿ, ‘ಭೂಮಿಯ ಮೇಲೆ ಬೆಳೆಯುವ ಪ್ರತಿಯೊಂದು ಸಸಿಗಳು ಒಂದೊಂದು ಕಾಯಿಲೆ ವಾಸಿ ಪಡಿಸಲು ಉಪಯೋಗವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ಆಹಾರದಲ್ಲಿ ಸಿರಿಧಾನ್ಯ ಹಾಗೂ ತರಕಾರಿಗಳು ಬಳಸಬೇಕು’ ಎಂದರು.</p>.<p>‘ಬಳೂರ್ಗಿ ಗ್ರಾಮದಲ್ಲಿ ಮೂರು ತಿಂಗಳ ಕಾಲ ಶಿಬಿರ ನಡೆಯಲಿದೆ’ ಎಂದು ಸರ್ಕಾರಿ ಆಯುರ್ವೇದಿಕ ಆಸ್ಪತ್ರೆ ಬಳೂರ್ಗಿ ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ಮಾಹಿತಿ ನೀಡಿದರು.</p>.<p>ನಂತರ ಆಯುರ್ವೇದ ಆಸ್ಪತ್ರೆಯ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಅವರು ಮಾತನಾಡಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ರೋಗಿಗಳಿಗೆ ಪರೀಕ್ಷೆ ಮಾಡಿ, ಅವರಿಗೆ ಆಹಾರ ಪದ್ಧತಿ, ಯೋಗದ ಬಗ್ಗೆ ತಿಳಿಸಿಕೊಡಲಾಯಿತು.</p>.<p>ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಣಮಯ್ಯ ಗುತ್ತೇದಾರ, ಮುಖಂಡರಾದ ಶಿವಾನಂದ ಸ್ಥಾವರಮಠ, ಬಸಣ್ಣ ನಾವಿ, ನೆಹರು ಮಠಪತಿ, ವಿಜಯಕುಮಾರ ಪಾಟೀಲ, ಸುರೇಶ್ ಕ್ಷತ್ರಿ, ಶಿವಯ್ಯ ಗುತ್ತೇದಾರ, ಶ್ರೀಶೈಲ ಮೇತ್ರಿ , ಪ್ರತಿಭಾ ಮಹೇಂದ್ರಕರ ಸೇರಿದಂತೆ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ</strong>: ‘ಆಯುರ್ವೇದವು 5 ಸಾವಿರ ವರ್ಷಗಳಿಗಿಂತಲೂ ಹಳೆಯದಾದ, ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಭಾರತೀಯ ಜ್ಞಾನವಾಗಿದೆ. ಇದು ನೈಸರ್ಗಿಕ ಮೂಲಿಕೆಗಳು, ಯೋಗ ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ರೋಗಗಳನ್ನು ತಡೆಗಟ್ಟುವ ಸಮಗ್ರ ವೈದ್ಯಕೀಯ ಪದ್ಧತಿಯಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಶನಿವಾರ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಮಧುಮೇಹ ನಿಯಂತ್ರಣದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಶಿಬಿರದಲ್ಲಿ ಮಾತನಾಡಿದರು.</p>.<p>ಘತ್ತರಗಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಪ್ರಮೋದಾದೇವಿ ಅವರು ಮಾತನಾಡಿ, ‘ಭೂಮಿಯ ಮೇಲೆ ಬೆಳೆಯುವ ಪ್ರತಿಯೊಂದು ಸಸಿಗಳು ಒಂದೊಂದು ಕಾಯಿಲೆ ವಾಸಿ ಪಡಿಸಲು ಉಪಯೋಗವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ಆಹಾರದಲ್ಲಿ ಸಿರಿಧಾನ್ಯ ಹಾಗೂ ತರಕಾರಿಗಳು ಬಳಸಬೇಕು’ ಎಂದರು.</p>.<p>‘ಬಳೂರ್ಗಿ ಗ್ರಾಮದಲ್ಲಿ ಮೂರು ತಿಂಗಳ ಕಾಲ ಶಿಬಿರ ನಡೆಯಲಿದೆ’ ಎಂದು ಸರ್ಕಾರಿ ಆಯುರ್ವೇದಿಕ ಆಸ್ಪತ್ರೆ ಬಳೂರ್ಗಿ ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ಮಾಹಿತಿ ನೀಡಿದರು.</p>.<p>ನಂತರ ಆಯುರ್ವೇದ ಆಸ್ಪತ್ರೆಯ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಅವರು ಮಾತನಾಡಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ರೋಗಿಗಳಿಗೆ ಪರೀಕ್ಷೆ ಮಾಡಿ, ಅವರಿಗೆ ಆಹಾರ ಪದ್ಧತಿ, ಯೋಗದ ಬಗ್ಗೆ ತಿಳಿಸಿಕೊಡಲಾಯಿತು.</p>.<p>ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಣಮಯ್ಯ ಗುತ್ತೇದಾರ, ಮುಖಂಡರಾದ ಶಿವಾನಂದ ಸ್ಥಾವರಮಠ, ಬಸಣ್ಣ ನಾವಿ, ನೆಹರು ಮಠಪತಿ, ವಿಜಯಕುಮಾರ ಪಾಟೀಲ, ಸುರೇಶ್ ಕ್ಷತ್ರಿ, ಶಿವಯ್ಯ ಗುತ್ತೇದಾರ, ಶ್ರೀಶೈಲ ಮೇತ್ರಿ , ಪ್ರತಿಭಾ ಮಹೇಂದ್ರಕರ ಸೇರಿದಂತೆ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>