<p><strong>ಕಲಬುರ್ಗಿ:</strong> ‘ಆಳಂದ ತಾಲ್ಲೂಕಿನ ಭೂಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯು ರೈತರು ಪೂರೈಸಿದ ಪ್ರತಿ ಟನ್ ಕಬ್ಬಿಗೆ ₹ 2200 ನೀಡುವಂತೆ ಹೈಕೋರ್ಟ್ನ ಕಲಬುರ್ಗಿ ಪೀಠ ಆದೇಶ ನೀಡಿದ್ದರೂ ಕಾರ್ಖಾನೆಯವರು ₹ 2100 ನೀಡುವ ಮೂಲಕ ಆದೇಶವನ್ನು ಉಲ್ಲಂಘಿಸಿದೆ’ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಟೀಕಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016ರ ಫೆಬ್ರುವರಿಯಲ್ಲಿ ಈ ಸಂಬಂಧ ಆದೇಶವಾಗಿದ್ದು, 2012–13ನೇ ಸಾಲಿನಲ್ಲಿ ರೈತರಿಗೆ ಅಂದಾಜು ₹ 6 ಕೋಟಿ ಬಾಕಿ ನೀಡಬೇಕಿದೆ’ ಎಂದರು.</p>.<p>200 ರೈತರ ಜಮೀನಿನ ಮೇಲೆ ಕಾನೂನುಬಾಹಿರವಾಗಿ ರೈತರ ಗಮನಕ್ಕೆ ತರದೇ ಕಾರ್ಖಾನೆಯವರು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ನಲ್ಲಿ ₹ 10 ಕೋಟಿ ಸಾಲ ಪಡೆದು ಮರುಪಾವತಿ ಮಾಡಿಲ್ಲ. ಇದರಿಂದಾಗಿ ಬ್ಯಾಂಕ್ನಿಂದ ರೈತರಿಗೆ ಸಾಲ ಮರುಪಾವತಿಗಾಗಿ ನೋಟಿಸ್ ಜಾರಿಯಾಗುತ್ತಿವೆ. ವಂಚನೆ ಮಾಡಿದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.</p>.<p>2018–19ನೇ ಸಾಲಿನಲ್ಲಿ ಎನ್ಎಸ್ಎಲ್ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ದರವನ್ನು ₹ 2943 ನಿಗದಿಪಡಿಸಿದೆ. ಇದರಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ₹ 700 ಹೊರತುಪಡಿಸಿ ರೈತರಿಗೆ ₹ 2243 ನಂತೆ ಪಾವತಿಯಾಗಬೇಕಿತ್ತು. ಆದರೆ, ಕೇವಲ ₹ 1500ರಂತೆ ಪಾವತಿಸಿ ಉಳಿದ ₹ 140 ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಬಾಕಿ ಮರುಪಾವತಿಸದ ಕಾರ್ಖಾನೆಗಳ ಮೇಲೆ ಅಲ್ಲಿನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಇಲ್ಲಿಯೂ ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕು ಎಂದರು.</p>.<p>ಕಾರ್ಖಾನೆಯು 2013ರಿಂದಲೇ ಪರವಾನಗಿ ನವೀಕರಿಸದೇ, ಭೂಸನೂರು ಗ್ರಾಮ ಪಂಚಾಯಿತಿಗೆ ₹ 5 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯು ಭೂಮಿ ಮೇಲಿನ ನೀರನ್ನು ಬಳಕೆ ಮಾಡಲು ಪರವಾನಗಿ ಪಡೆದುಕೊಂಡಿದೆ. ಆದಾಗ್ಯೂ, ಕಾನೂನು ಬಾಹಿರವಾಗಿ 22 ಕೊಳವೆಬಾವಿಗಳನ್ನು ಕೊರೆಸಿ ಬರಿದು ಮಾಡಿದೆ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ಆಳಂದ ತಾಲ್ಲೂಕಿನ ಭೂಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯು ರೈತರು ಪೂರೈಸಿದ ಪ್ರತಿ ಟನ್ ಕಬ್ಬಿಗೆ ₹ 2200 ನೀಡುವಂತೆ ಹೈಕೋರ್ಟ್ನ ಕಲಬುರ್ಗಿ ಪೀಠ ಆದೇಶ ನೀಡಿದ್ದರೂ ಕಾರ್ಖಾನೆಯವರು ₹ 2100 ನೀಡುವ ಮೂಲಕ ಆದೇಶವನ್ನು ಉಲ್ಲಂಘಿಸಿದೆ’ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಟೀಕಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016ರ ಫೆಬ್ರುವರಿಯಲ್ಲಿ ಈ ಸಂಬಂಧ ಆದೇಶವಾಗಿದ್ದು, 2012–13ನೇ ಸಾಲಿನಲ್ಲಿ ರೈತರಿಗೆ ಅಂದಾಜು ₹ 6 ಕೋಟಿ ಬಾಕಿ ನೀಡಬೇಕಿದೆ’ ಎಂದರು.</p>.<p>200 ರೈತರ ಜಮೀನಿನ ಮೇಲೆ ಕಾನೂನುಬಾಹಿರವಾಗಿ ರೈತರ ಗಮನಕ್ಕೆ ತರದೇ ಕಾರ್ಖಾನೆಯವರು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ನಲ್ಲಿ ₹ 10 ಕೋಟಿ ಸಾಲ ಪಡೆದು ಮರುಪಾವತಿ ಮಾಡಿಲ್ಲ. ಇದರಿಂದಾಗಿ ಬ್ಯಾಂಕ್ನಿಂದ ರೈತರಿಗೆ ಸಾಲ ಮರುಪಾವತಿಗಾಗಿ ನೋಟಿಸ್ ಜಾರಿಯಾಗುತ್ತಿವೆ. ವಂಚನೆ ಮಾಡಿದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.</p>.<p>2018–19ನೇ ಸಾಲಿನಲ್ಲಿ ಎನ್ಎಸ್ಎಲ್ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ದರವನ್ನು ₹ 2943 ನಿಗದಿಪಡಿಸಿದೆ. ಇದರಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ₹ 700 ಹೊರತುಪಡಿಸಿ ರೈತರಿಗೆ ₹ 2243 ನಂತೆ ಪಾವತಿಯಾಗಬೇಕಿತ್ತು. ಆದರೆ, ಕೇವಲ ₹ 1500ರಂತೆ ಪಾವತಿಸಿ ಉಳಿದ ₹ 140 ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಬಾಕಿ ಮರುಪಾವತಿಸದ ಕಾರ್ಖಾನೆಗಳ ಮೇಲೆ ಅಲ್ಲಿನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಇಲ್ಲಿಯೂ ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕು ಎಂದರು.</p>.<p>ಕಾರ್ಖಾನೆಯು 2013ರಿಂದಲೇ ಪರವಾನಗಿ ನವೀಕರಿಸದೇ, ಭೂಸನೂರು ಗ್ರಾಮ ಪಂಚಾಯಿತಿಗೆ ₹ 5 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯು ಭೂಮಿ ಮೇಲಿನ ನೀರನ್ನು ಬಳಕೆ ಮಾಡಲು ಪರವಾನಗಿ ಪಡೆದುಕೊಂಡಿದೆ. ಆದಾಗ್ಯೂ, ಕಾನೂನು ಬಾಹಿರವಾಗಿ 22 ಕೊಳವೆಬಾವಿಗಳನ್ನು ಕೊರೆಸಿ ಬರಿದು ಮಾಡಿದೆ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>