ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಹಾಗೂ ಮಾದನ ಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ ಲೋಹಾರ, ಅಂಬರಾಯ ಚಲಗೇರಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಚಂದ್ರ ಸೂರ್ಯವಂಶಿ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಗುರುಶರಣ ಪಾಟೀಲ, ವೈಜುನಾಥ ಝಳಕಿ, ಮಹಾಂತಪ್ಪ ಸಾಲೇಗಾಂವ, ಪುರಸಭೆ ಸದಸ್ಯ ಸಂದೀಪ ಪಾತ್ರೆ, ಚೆನ್ನಪ್ಪ ಮಾದನ ಹಿಪ್ಪರಗಿ, ರಾಜೇಂದ್ರ ಪಡಸಾವಳಿ, ರಾಜೇಂದ್ರ ಕಟ್ಟಿಮನಿ, ಬಸಣ್ಣಾ ಕಟ್ಟಿಮನಿ ಇದ್ದರು.