ಕಲಬುರ್ಗಿ: ಕೋವಿಡ್ ಲಾಕ್ಡೌನ್ ನಿಮಿತ್ತ ಪ್ರಯಾಣಿಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೈಸೂರು–ಬಾಗಲಕೋಟೆ ಬಸವ ಎಕ್ಸ್ಪ್ರೆಸ್ (7307) ರೈಲನ್ನು ಇದೇ 20ರಿಂದ ಪುನರಾರಂಭಿಸಲಾಗುತ್ತಿದೆ. ಅಲ್ಲದೇ, ಯಶವಂತಪುರ–ಬೀದರ್ (6271) ರೈಲು ಇದೇ 21ರಿಂದ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.