<p><strong>ಚಿತ್ತಾಪುರ</strong> <strong>(ಕಲಬುರಗಿ ಜಿಲ್ಲೆ):</strong> ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 2.40ಕ್ಕೆ ‘ಭೀಮನಡೆ’ ಪಥ ಸಂಚಲನ ಆರಂಭವಾಯಿತು.</p><p>ನ.16ರಂದು ಆರ್ಎಸ್ಎಸ್ ನಡೆಸಿದ ಗಣವೇಷಧಾರಿಗಳ ಪಥಸಂಚಲನಕ್ಕೆ ಪರ್ಯಾಯ ಎಂಬಂತೆ ನಡೆದ ಈ ‘ಭೀಮ ನಡೆ’ ಪಥಸಂಚಲನವು ‘ನೀಲಿ ಶಕ್ತಿ’, ಸರ್ವಧರ್ಮ ಭಾವೈಕ್ಯ ಸಂದೇಶ ಸಾರಿತು.</p><p>ಬೆಳಿಗ್ಗೆ 11.30 ಗಂಟೆಗೆ ಶುರುವಾಗಬೇಕಿದ್ದ ಪಥಸಂಚಲನವು ಇಲ್ಲಿನ ಚಿತ್ತಾವಲಿ ಚೌಕ್ನಲ್ಲಿ ಮಧ್ಯಾಹ್ನ 2.40ಕ್ಕೆ ಆರಂಭವಾಯಿತು. ಸಂವಿಧಾನ, ಅಂಬೇಡ್ಕರ್ ಪರ ಘೋಷಣೆಗಳು ಮೊಳಗಿದವು.</p>.<p>ಬಿಳಿ ಅಂಗಿ, ಖಾಕಿ ಪ್ಯಾಂಟು, ನೀಲಿ ಟೊಪ್ಪಿಗೆ ಧರಿಸಿದ್ದ ನೂರಾರು ಮಂದಿ ಪಥಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆಹಾಕಿದರು. ಅವರ ಮೇಲೆ ಮಹಿಳೆಯರು ಏರಿದಂತೆ ಸಾರ್ವಜನಿಕರು ಪುಷ್ಪವೃಷ್ಟಿಗೈದು ಗೌರವಿಸಿದರು.</p><p>ಸಾರ್ವಜನಿಕರು ಪಥ ಸಂಚಲನ ಸಾಗುವ ರಸ್ತೆಯ ಮಾರ್ಗದ ಇಕ್ಕೇಲಗಳಲ್ಲಿ ನಿಂತು ಸಡಗರವನ್ನು ಕಣ್ತುಂಬಿಕೊಂಡರು.</p><p><strong>ವೇದಿಕೆ ಸಿದ್ಧ:</strong> ಪಥಸಂಚಲನದ ಬಳಿಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಚಿತ್ತಾಪುರ ಪಟ್ಟಣದಲ್ಲಿ ಭೀಮನಡೆ ಕಾರ್ಯಕ್ರಮವು ಐತಿಹಾಸಿಕವಾಗಿ ದಾಖಲಾಗಲಿದೆ ಎಂದು ದಲಿತ ಮುಖಂಡ ಶಿವರುದ್ರ ಭೀಣಿ ಪ್ರತಿಕ್ರಿಯಿಸಿದ್ದಾರೆ.</p><p>ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ</strong> <strong>(ಕಲಬುರಗಿ ಜಿಲ್ಲೆ):</strong> ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 2.40ಕ್ಕೆ ‘ಭೀಮನಡೆ’ ಪಥ ಸಂಚಲನ ಆರಂಭವಾಯಿತು.</p><p>ನ.16ರಂದು ಆರ್ಎಸ್ಎಸ್ ನಡೆಸಿದ ಗಣವೇಷಧಾರಿಗಳ ಪಥಸಂಚಲನಕ್ಕೆ ಪರ್ಯಾಯ ಎಂಬಂತೆ ನಡೆದ ಈ ‘ಭೀಮ ನಡೆ’ ಪಥಸಂಚಲನವು ‘ನೀಲಿ ಶಕ್ತಿ’, ಸರ್ವಧರ್ಮ ಭಾವೈಕ್ಯ ಸಂದೇಶ ಸಾರಿತು.</p><p>ಬೆಳಿಗ್ಗೆ 11.30 ಗಂಟೆಗೆ ಶುರುವಾಗಬೇಕಿದ್ದ ಪಥಸಂಚಲನವು ಇಲ್ಲಿನ ಚಿತ್ತಾವಲಿ ಚೌಕ್ನಲ್ಲಿ ಮಧ್ಯಾಹ್ನ 2.40ಕ್ಕೆ ಆರಂಭವಾಯಿತು. ಸಂವಿಧಾನ, ಅಂಬೇಡ್ಕರ್ ಪರ ಘೋಷಣೆಗಳು ಮೊಳಗಿದವು.</p>.<p>ಬಿಳಿ ಅಂಗಿ, ಖಾಕಿ ಪ್ಯಾಂಟು, ನೀಲಿ ಟೊಪ್ಪಿಗೆ ಧರಿಸಿದ್ದ ನೂರಾರು ಮಂದಿ ಪಥಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆಹಾಕಿದರು. ಅವರ ಮೇಲೆ ಮಹಿಳೆಯರು ಏರಿದಂತೆ ಸಾರ್ವಜನಿಕರು ಪುಷ್ಪವೃಷ್ಟಿಗೈದು ಗೌರವಿಸಿದರು.</p><p>ಸಾರ್ವಜನಿಕರು ಪಥ ಸಂಚಲನ ಸಾಗುವ ರಸ್ತೆಯ ಮಾರ್ಗದ ಇಕ್ಕೇಲಗಳಲ್ಲಿ ನಿಂತು ಸಡಗರವನ್ನು ಕಣ್ತುಂಬಿಕೊಂಡರು.</p><p><strong>ವೇದಿಕೆ ಸಿದ್ಧ:</strong> ಪಥಸಂಚಲನದ ಬಳಿಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಚಿತ್ತಾಪುರ ಪಟ್ಟಣದಲ್ಲಿ ಭೀಮನಡೆ ಕಾರ್ಯಕ್ರಮವು ಐತಿಹಾಸಿಕವಾಗಿ ದಾಖಲಾಗಲಿದೆ ಎಂದು ದಲಿತ ಮುಖಂಡ ಶಿವರುದ್ರ ಭೀಣಿ ಪ್ರತಿಕ್ರಿಯಿಸಿದ್ದಾರೆ.</p><p>ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>