<p><strong>ಕಲಬುರಗಿ:</strong> ‘ಕಲಾವಿದರು ರೇಖೆ, ಆಕಾರ, ಬಣ್ಣಗಳ ಮೂಲಕ ಕ್ಯಾನ್ವಾಸ್ ತುಂಬುವುದಲ್ಲ. ಪ್ರಮಾಣಬದ್ಧತೆ, ಲಾವಣ್ಯ ಯೋಜನೆ, ಸಾದೃಶ್ಯ ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಕಲಾಕೃತಿ ರಚಿಸಬೇಕು. ಮುಖ್ಯವಾಗಿ ಕಲಾಕೃತಿಯಲ್ಲಿ ಮೌಲ್ಯಗಳಿರಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್.ಜಾನೆ ಹೇಳಿದರು.</p>.<p>ನಗರದ ಅಗ್ನಿಶಾಮಕ ದಳದ ಎದುರಿಗೆ ಇರುವ ಕಾಳೆ ಲೇಔಟ್ನ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾವಿದ ಬಿ.ಎನ್.ಪಾಟೀಲ ಅವರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಾವಿದರು ತಮ್ಮ ಅನುಭವವನ್ನು ಕ್ಯಾನ್ವಾಸ್ ಮೇಲೆ ರೇಖೆ, ಆಕಾರ, ಬಣ್ಣಗಳಿಂದ ಅನುಭೂತಿಗೊಳಿಸುವ ಸಾಮರ್ಥ್ಯವಿರಬೇಕು. ಅಂದಾಗ ಮಾತ್ರ ಕಲಾಕೃತಿಗೆ ಮೌಲ್ಯ ಬರುತ್ತದೆ. ಅದೇ ದಾರಿಯಲ್ಲಿ ಬಿ.ಎನ್. ಪಾಟೀಲ ಸಾಗುತ್ತಿದ್ದಾರೆ’ ಎಂದರು.</p>.<p>‘ಕಲಾಕೃತಿಗಳು ಇಂದು ಬಹಳಷ್ಟು ರಚನೆಯಾಗುತ್ತಿವೆ. ಆದರೆ, ಕಲಾಕೃತಿ ನೋಡಿ ತಿಳಿದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.</p>.<p>ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮಾತನಾಡಿ, ‘ಸಾಧನೆ ಒಂದು ಅಥವಾ ಎರಡು ವರ್ಷಗಳಲ್ಲಿ ಸಿಗುವಂತಹದಲ್ಲ. ಅದಕ್ಕೆ ಬಹಳ ವರ್ಷಗಳ ಸತತ ಪ್ರಯತ್ನ ಬೇಕಾಗುತ್ತದೆ. ಸಕ್ಸಸ್ಫುಲ್ ಜೀವನಕ್ಕಿಂತ ಸಂತೃಪ್ತಿ ಜೀವನ ಮುಖ್ಯ. ಹಾಗಾಗಿ, ಕಲಾವಿದರು ಹಣಕ್ಕಿಂತ ಸಂತೃಪ್ತಿ ಜೀವನ ಇಷ್ಟಪಡುತ್ತಾರೆ’ ಎಂದು ತಿಳಿಸಿದರು.</p>.<p>ದಿ ಆರ್ಟ್ ಇಂಟಿಗ್ರೇಶನ್ ಸೊಸೈಟಿ ನಿರ್ದೇಶಕಿ ನೀಲಮ್ಮ ಎಂ.ಬೆಳಮಗಿ, ‘ಜೀವನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದರೂ ನಮ್ಮ ಗುರಿಯೆಡೆಗೆ ಮಾತ್ರ ಗಮನ ಇರಬೇಕು. ಇದರಿಂದ ಜೀವನದಲ್ಲಿ ಸಾಧನೆ ಸಾಧ್ಯ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ’ ಎಂದರು.</p>.<p>ಕಲಾವಿದ ಬಿ.ಎನ್.ಪಾಟೀಲ ಅವರು ತಮ್ಮ ಜೀವನದ ನೋವು–ನಲಿವು, ಏಳು–ಬೀಳುಗಳನ್ನು ಹಂಚಿಕೊಂಡರು. ತಮ್ಮ ಕರೆಗೆ ಓಗೊಟ್ಟು ಎ.ಎಸ್.ಪಾಟೀಲ ಸೇರಿದಂತೆ ಬಹಳಷ್ಟು ಜನ ಹಿರಿಯ ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು.</p>.<p>ಉಪನ್ಯಾಸಕ ಅಶೋಕ ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಚ್.ಬೆಳಮಗಿ ಮತ್ತು ನೀಲಮ್ಮ ಎಂ.ಬೆಳಮಗಿ ಅವರನ್ನು ಸತ್ಕರಿಸಲಾಯಿತು.</p>.<p>ಕಾವ್ಯ ಮತ್ತು ಗೌರಿ ಪ್ರಾರ್ಥಿಸಿದರು. ಚಿದಾನಂದ ಚಿಣಮಗೇರಿ ಸ್ವಾಗತಿಸಿದರು. ದೌಲತರಾಯ ದೇಸಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಸಿ.ಎಂ ವಂದಿಸಿದರು. ಪ್ರದರ್ಶನವು ನ.12ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.</p>.<div><blockquote>ಕಲೆ ಮತ್ತು ಸಂಸ್ಕೃತಿ ಇಲ್ಲದ ದೇಶ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಗರಿಕತೆ ಬೆಳೆಯುವುದಕ್ಕಿಂತ ಮೊದಲು ಸಹ ಚಿತ್ರಕಲೆ ಇತ್ತು </blockquote><span class="attribution">ಅಶೋಕ ಶೆಟಕಾರ ಕಲಾವಿದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಕಲಾವಿದರು ರೇಖೆ, ಆಕಾರ, ಬಣ್ಣಗಳ ಮೂಲಕ ಕ್ಯಾನ್ವಾಸ್ ತುಂಬುವುದಲ್ಲ. ಪ್ರಮಾಣಬದ್ಧತೆ, ಲಾವಣ್ಯ ಯೋಜನೆ, ಸಾದೃಶ್ಯ ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಕಲಾಕೃತಿ ರಚಿಸಬೇಕು. ಮುಖ್ಯವಾಗಿ ಕಲಾಕೃತಿಯಲ್ಲಿ ಮೌಲ್ಯಗಳಿರಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್.ಜಾನೆ ಹೇಳಿದರು.</p>.<p>ನಗರದ ಅಗ್ನಿಶಾಮಕ ದಳದ ಎದುರಿಗೆ ಇರುವ ಕಾಳೆ ಲೇಔಟ್ನ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾವಿದ ಬಿ.ಎನ್.ಪಾಟೀಲ ಅವರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಾವಿದರು ತಮ್ಮ ಅನುಭವವನ್ನು ಕ್ಯಾನ್ವಾಸ್ ಮೇಲೆ ರೇಖೆ, ಆಕಾರ, ಬಣ್ಣಗಳಿಂದ ಅನುಭೂತಿಗೊಳಿಸುವ ಸಾಮರ್ಥ್ಯವಿರಬೇಕು. ಅಂದಾಗ ಮಾತ್ರ ಕಲಾಕೃತಿಗೆ ಮೌಲ್ಯ ಬರುತ್ತದೆ. ಅದೇ ದಾರಿಯಲ್ಲಿ ಬಿ.ಎನ್. ಪಾಟೀಲ ಸಾಗುತ್ತಿದ್ದಾರೆ’ ಎಂದರು.</p>.<p>‘ಕಲಾಕೃತಿಗಳು ಇಂದು ಬಹಳಷ್ಟು ರಚನೆಯಾಗುತ್ತಿವೆ. ಆದರೆ, ಕಲಾಕೃತಿ ನೋಡಿ ತಿಳಿದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.</p>.<p>ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮಾತನಾಡಿ, ‘ಸಾಧನೆ ಒಂದು ಅಥವಾ ಎರಡು ವರ್ಷಗಳಲ್ಲಿ ಸಿಗುವಂತಹದಲ್ಲ. ಅದಕ್ಕೆ ಬಹಳ ವರ್ಷಗಳ ಸತತ ಪ್ರಯತ್ನ ಬೇಕಾಗುತ್ತದೆ. ಸಕ್ಸಸ್ಫುಲ್ ಜೀವನಕ್ಕಿಂತ ಸಂತೃಪ್ತಿ ಜೀವನ ಮುಖ್ಯ. ಹಾಗಾಗಿ, ಕಲಾವಿದರು ಹಣಕ್ಕಿಂತ ಸಂತೃಪ್ತಿ ಜೀವನ ಇಷ್ಟಪಡುತ್ತಾರೆ’ ಎಂದು ತಿಳಿಸಿದರು.</p>.<p>ದಿ ಆರ್ಟ್ ಇಂಟಿಗ್ರೇಶನ್ ಸೊಸೈಟಿ ನಿರ್ದೇಶಕಿ ನೀಲಮ್ಮ ಎಂ.ಬೆಳಮಗಿ, ‘ಜೀವನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದರೂ ನಮ್ಮ ಗುರಿಯೆಡೆಗೆ ಮಾತ್ರ ಗಮನ ಇರಬೇಕು. ಇದರಿಂದ ಜೀವನದಲ್ಲಿ ಸಾಧನೆ ಸಾಧ್ಯ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ’ ಎಂದರು.</p>.<p>ಕಲಾವಿದ ಬಿ.ಎನ್.ಪಾಟೀಲ ಅವರು ತಮ್ಮ ಜೀವನದ ನೋವು–ನಲಿವು, ಏಳು–ಬೀಳುಗಳನ್ನು ಹಂಚಿಕೊಂಡರು. ತಮ್ಮ ಕರೆಗೆ ಓಗೊಟ್ಟು ಎ.ಎಸ್.ಪಾಟೀಲ ಸೇರಿದಂತೆ ಬಹಳಷ್ಟು ಜನ ಹಿರಿಯ ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು.</p>.<p>ಉಪನ್ಯಾಸಕ ಅಶೋಕ ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಚ್.ಬೆಳಮಗಿ ಮತ್ತು ನೀಲಮ್ಮ ಎಂ.ಬೆಳಮಗಿ ಅವರನ್ನು ಸತ್ಕರಿಸಲಾಯಿತು.</p>.<p>ಕಾವ್ಯ ಮತ್ತು ಗೌರಿ ಪ್ರಾರ್ಥಿಸಿದರು. ಚಿದಾನಂದ ಚಿಣಮಗೇರಿ ಸ್ವಾಗತಿಸಿದರು. ದೌಲತರಾಯ ದೇಸಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಸಿ.ಎಂ ವಂದಿಸಿದರು. ಪ್ರದರ್ಶನವು ನ.12ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.</p>.<div><blockquote>ಕಲೆ ಮತ್ತು ಸಂಸ್ಕೃತಿ ಇಲ್ಲದ ದೇಶ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಗರಿಕತೆ ಬೆಳೆಯುವುದಕ್ಕಿಂತ ಮೊದಲು ಸಹ ಚಿತ್ರಕಲೆ ಇತ್ತು </blockquote><span class="attribution">ಅಶೋಕ ಶೆಟಕಾರ ಕಲಾವಿದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>