ಇಬ್ಬರು ಬಾಲಕರು ಮೀನು ಹಿಡಿಯಲು ಕೆರೆಗೆ ಇಳಿದಿದ್ದರು. ಆಳಕ್ಕೆ ಹೋದಾಗ ಒಬ್ಬ ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಇನ್ನೊಬ್ಬ ಬಾಲಕ ಪರಾರಿಯಾಗಿದ್ದಾನೆ. ಇದೇ ಸಂದರ್ಭದಲ್ಲಿ ಪಾದಚಾರಿಗಳು ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕಂಡು, ರಕ್ಷಿಸಲು ಮುಂದಾದರು. ಆದರೂ ಪ್ರಯತ್ನ ಫಲ ನೀಡಲಿಲ್ಲ. ನೋಡನೋಡಿತ್ತಿದ್ದಂತೆಯೇ ಜನರ ಕಣ್ಣ ಮುಂದೆಯೇ ಬಾಲಕ ಜಲಸಮಾಧಿಯಾದ.