<p><strong>ಚಿಂಚೋಳಿ</strong>: ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಕಳೆದ 5 ವರ್ಷಗಳಿಂದ ರೈತರಿಗೆ ಸಹಾಯಧನ ಸಿಕ್ಕಿಲ್ಲ’ ಎಂದು ಬಹುಜನ ಮೂಲ ನಿವಾಸಿಗಳ ಸಂಘದ ಮುಖಂಡ ಗೋಪಾಲ ಎಂ. ಪೂಜಾರಿ ದೂರಿದ್ದಾರೆ.</p>.<p>‘ಅರಣ್ಯ ಇಲಾಖೆಯ ಪ್ರೋತ್ಸಾಹ ಧನ ಸಿಗಲಿದೆ ಎಂದು ಎಲ್ಲಾ ಕೆಲಸ ಬಿಟ್ಟು ಸಸಿಗಳನ್ನು ನೆಟ್ಟು ಪೋಷಿಸಿದ್ದೇನೆ. ಹೊಲದಲ್ಲಿ ಬೇರೆ ಬೆಳೆಗಳನ್ನು ಬೆಳೆಯದೇ ಸಸಿಗಳನ್ನು ಉಳಿಸಿಕೊಂಡಿದ್ದೇನೆ. ಆದರೆ ಅರಣ್ಯ ಇಲಾಖೆ ಸಕಾಲದಲ್ಲಿ ರೈತ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ’ ಎಂದು ಆರೋಪಿಸಿದ್ದಾರೆ.</p>.<p>2019-20ರಲ್ಲಿ 47 ರೈತರು 23,944 ಸಸಿಗಳನ್ನು, 2020-21ರಲ್ಲಿ 106 ರೈತರು 41,667 ಸಸಿಗಳನ್ನು, 2021-22ರಲ್ಲಿ 50 ರೈತರು 16,200 ಸಸಿಗಳನ್ನು 2022-23ರಲ್ಲಿ 41 ರೈತರು 16,705 ಸಸಿಗಳನ್ನು, 2023-24ರಲ್ಲಿ 33 ರೈತರು 17,277 ಸಸಿಗಳನ್ನು ನೆಟ್ಟಿದ್ದಾರೆ.</p>.<p>‘ಇವರಿಗೆ ಮೊದಲ ವರ್ಷ ಬದುಕುಳಿದ ಪ್ರತಿಗೆ ₹10, ಎರಡನೇ ವರ್ಷ ₹15, ಮೂರನೇ ವರ್ಷ ₹20 ಹೀಗೆ ರೈತರಿಗೆ ಪ್ರೋತ್ಸಾಹ ಧನ ಅರಣ್ಯ ಇಲಾಖೆಯಿಂದ ನೀಡಲಾಗತ್ತದೆ. ಇದನ್ನು ನಂಬಿ ಸಸಿ ನೆಟ್ಟು ಬೆಳೆಸಿಕೊಂಡ ರೈತರು ಅನ್ಯ ಬೆಳೆ ಬೆಳೆಯದೇ ಕೈ ಸುಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಳೆದ 5 ವರ್ಷಗಳಿಂದ ಅನುದಾನ ಬಂದಿಲ್ಲ ಬಂದ ಮೇಲೆ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.</p>.<div><blockquote>ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಸಹಾಯಧನ ಬಿಡುಗಡೆಗೆ ಮೇಲಧಿಕಾರಿಗಳಿಗೆ ವಿವರವಾದ ವರದಿ ನೀಡಿದ್ದೇವೆ. ಅನುದಾನ ಬಂದ ತಕ್ಷಣ ರೈತರ ಖಾತೆಗೆ ಜಮೆ ಮಾಡುತ್ತೇವೆ </blockquote><span class="attribution">ಜಗನ್ನಾಥ ಕೊರಳ್ಳಿ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಅರಣ್ಯ ವಲಯ ಚಿಂಚೋಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಕಳೆದ 5 ವರ್ಷಗಳಿಂದ ರೈತರಿಗೆ ಸಹಾಯಧನ ಸಿಕ್ಕಿಲ್ಲ’ ಎಂದು ಬಹುಜನ ಮೂಲ ನಿವಾಸಿಗಳ ಸಂಘದ ಮುಖಂಡ ಗೋಪಾಲ ಎಂ. ಪೂಜಾರಿ ದೂರಿದ್ದಾರೆ.</p>.<p>‘ಅರಣ್ಯ ಇಲಾಖೆಯ ಪ್ರೋತ್ಸಾಹ ಧನ ಸಿಗಲಿದೆ ಎಂದು ಎಲ್ಲಾ ಕೆಲಸ ಬಿಟ್ಟು ಸಸಿಗಳನ್ನು ನೆಟ್ಟು ಪೋಷಿಸಿದ್ದೇನೆ. ಹೊಲದಲ್ಲಿ ಬೇರೆ ಬೆಳೆಗಳನ್ನು ಬೆಳೆಯದೇ ಸಸಿಗಳನ್ನು ಉಳಿಸಿಕೊಂಡಿದ್ದೇನೆ. ಆದರೆ ಅರಣ್ಯ ಇಲಾಖೆ ಸಕಾಲದಲ್ಲಿ ರೈತ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ’ ಎಂದು ಆರೋಪಿಸಿದ್ದಾರೆ.</p>.<p>2019-20ರಲ್ಲಿ 47 ರೈತರು 23,944 ಸಸಿಗಳನ್ನು, 2020-21ರಲ್ಲಿ 106 ರೈತರು 41,667 ಸಸಿಗಳನ್ನು, 2021-22ರಲ್ಲಿ 50 ರೈತರು 16,200 ಸಸಿಗಳನ್ನು 2022-23ರಲ್ಲಿ 41 ರೈತರು 16,705 ಸಸಿಗಳನ್ನು, 2023-24ರಲ್ಲಿ 33 ರೈತರು 17,277 ಸಸಿಗಳನ್ನು ನೆಟ್ಟಿದ್ದಾರೆ.</p>.<p>‘ಇವರಿಗೆ ಮೊದಲ ವರ್ಷ ಬದುಕುಳಿದ ಪ್ರತಿಗೆ ₹10, ಎರಡನೇ ವರ್ಷ ₹15, ಮೂರನೇ ವರ್ಷ ₹20 ಹೀಗೆ ರೈತರಿಗೆ ಪ್ರೋತ್ಸಾಹ ಧನ ಅರಣ್ಯ ಇಲಾಖೆಯಿಂದ ನೀಡಲಾಗತ್ತದೆ. ಇದನ್ನು ನಂಬಿ ಸಸಿ ನೆಟ್ಟು ಬೆಳೆಸಿಕೊಂಡ ರೈತರು ಅನ್ಯ ಬೆಳೆ ಬೆಳೆಯದೇ ಕೈ ಸುಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಳೆದ 5 ವರ್ಷಗಳಿಂದ ಅನುದಾನ ಬಂದಿಲ್ಲ ಬಂದ ಮೇಲೆ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.</p>.<div><blockquote>ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಸಹಾಯಧನ ಬಿಡುಗಡೆಗೆ ಮೇಲಧಿಕಾರಿಗಳಿಗೆ ವಿವರವಾದ ವರದಿ ನೀಡಿದ್ದೇವೆ. ಅನುದಾನ ಬಂದ ತಕ್ಷಣ ರೈತರ ಖಾತೆಗೆ ಜಮೆ ಮಾಡುತ್ತೇವೆ </blockquote><span class="attribution">ಜಗನ್ನಾಥ ಕೊರಳ್ಳಿ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಅರಣ್ಯ ವಲಯ ಚಿಂಚೋಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>