ಸದ್ಯಕ್ಕೆ ಶೇಂಗಾ ಕಾಯಿಕಟ್ಟುವ ಹಂತದಲ್ಲಿದ್ದು ರೋಗ ಕಾಣಿಸಿಕೊಂಡಿದ್ದರಿಂದ ಕಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಕಾಯಿಗಳು ಹೆಚ್ಚು ಗಟ್ಟಿ ಆಗುವುದಿಲ್ಲ ಎಂದು ಶೇಂಗಾ ಬೆಳೆಗಾರರು ಹೇಳುತ್ತಾರೆ. ಮಳೆ ಪ್ರಮಾಣ ಅಧಿಕವಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಎಲೆಗಳು ಹಳದಿ ಆಗುತ್ತವೆ ಮತ್ತು ಎಲೆಗಳು ಕೆಂಪಾಗುತ್ತವೆ. ಅದಕ್ಕಾಗಿ ರೈತರು 19:19:19 ಗೊಬ್ಬರವನ್ನು ಸಿಂಪರಣೆ ಮಾಡಬೇಕು, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದರು .