<p><strong>ಕಲಬುರ್ಗಿ:</strong> ‘ಆಮ್ಲಜನಕ ಪೂರೈಕೆಗೆ ಅನುಕೂಲವಾಗುವಂಥ ‘ಆಕ್ಸಿಜನ್ ಕಾನ್ಸಂಟ್ರೇಟರ್’ ಖರೀದಿಗೆ ಈಗಾಗಲೇ ಶಾಂಘೈ ಸರ್ಕಾರದ ಜತೆಗೆ ಮಾತನಾಡಿದ್ದೇನೆ. ಬುಧವಾರ 100 ಕಾನ್ಸಂಟ್ರೇಟರ್ಗಳು ಕಲಬುರ್ಗಿಗೆ ಬರಲಿವೆ. ಇನ್ನೂ 500 ಸರಬರಾಜು ಮಾಡಲು ಕೋರಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.</p>.<p>‘ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಿ, ಸಾವಿನ ಸಂಖ್ಯೆ ಕಡಿಮೆ ಮಾಡಲು ಆದ್ಯತೆ ನೀಡಿದ್ದೇನೆ. ಕಾನ್ಸಂಟ್ರೇಟರ್ನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಪೂರೈಕೆ ಮಾಡಲು ಅನುಕೂಲವಾಗುತ್ತದೆ. ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ತರಲಾಗುತ್ತದೆ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ವಿಶೇಷವಾಗಿ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲೆಗಾಗಿಯೇ ಒಂದು ಪ್ರತ್ಯೇಕ ವಾಹನ ಪಡೆಯಲು ಏಜೆನ್ಸಿ ಜತೆಗೆ ಮಾತನಾಡಿದ್ದೇನೆ. ಬುಧವಾರವೇ ವಾಹನ ಇಲ್ಲಿಗೆ ಬರಲಿದೆ. ಆಮ್ಲಜನಕ ತುಂಬಿದ ಈ ಟ್ಯಾಂಕರ್ ಇಡೀ ದಿನ ಇಲ್ಲೇ ಇರಲಿದೆ. ಖಾಲಿ ಆದ ತಕ್ಷಣ ಮತ್ತೆ ತುಂಬಿಕೊಂಡು ಬರಲಿದೆ. ಅಗತ್ಯದಷ್ಟು ಆಮ್ಲಜನಕ ಪೂರೈಸಲು ಬಳ್ಳಾರಿಯ ಜಿಂದಾಲ್ ಕಂಪನಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದರು.</p>.<p>ಕಲಬುರ್ಗಿಯ ಮೂರು ಸಿಮೆಂಟ್ ಕಾರ್ಖಾನೆಗಳಲ್ಲಿ ಇರುವ ಎಲ್ಲ ಆಮ್ಲಜನಕ ಸಿಲಿಂಡರ್ಗಳನ್ನೂ ಕಲಬುರ್ಗಿಯ ಜಿಮ್ಸ್ಗೆ ನೀಡಲು ಸೂಚಿಸಿದ್ದೇನೆ. ಕಾರ್ಖಾನೆಗಳ ಮಾಲೀಕರೂ ಒಪ್ಪಿದ್ದಾರೆ. ಮಂಗಳವಾರವೇ ಇವು ಜಿಮ್ಸ್ ತಲುಪಲಿವೆ’ ಎಂದೂ ಹೇಳಿದರು.</p>.<p>ರಾಜಕೀಯ ಬೇಡ: ಚಾಮರಾಜನಗರದಲ್ಲಿ ಸಂಭವಿಸಿದ ಸಾವು ದುರದೃಷ್ಟಕರ. ಇದೇ ವಿಷಯ ಇಟ್ಟುಕೊಂಡು ಈಗ ರಾಜಕೀಯ ಮಾಡುವುದು ಬೇಡ. ಮುಂದೇನಾಗಬೇಕು ಎಂಬುದನ್ನು ನೋಡಬೇಕು. ಮುಖ್ಯಮಂತ್ರಿ ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ಆಮ್ಲಜನಕ ಪೂರೈಕೆಗೆ ಅನುಕೂಲವಾಗುವಂಥ ‘ಆಕ್ಸಿಜನ್ ಕಾನ್ಸಂಟ್ರೇಟರ್’ ಖರೀದಿಗೆ ಈಗಾಗಲೇ ಶಾಂಘೈ ಸರ್ಕಾರದ ಜತೆಗೆ ಮಾತನಾಡಿದ್ದೇನೆ. ಬುಧವಾರ 100 ಕಾನ್ಸಂಟ್ರೇಟರ್ಗಳು ಕಲಬುರ್ಗಿಗೆ ಬರಲಿವೆ. ಇನ್ನೂ 500 ಸರಬರಾಜು ಮಾಡಲು ಕೋರಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.</p>.<p>‘ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಿ, ಸಾವಿನ ಸಂಖ್ಯೆ ಕಡಿಮೆ ಮಾಡಲು ಆದ್ಯತೆ ನೀಡಿದ್ದೇನೆ. ಕಾನ್ಸಂಟ್ರೇಟರ್ನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಪೂರೈಕೆ ಮಾಡಲು ಅನುಕೂಲವಾಗುತ್ತದೆ. ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ತರಲಾಗುತ್ತದೆ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ವಿಶೇಷವಾಗಿ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲೆಗಾಗಿಯೇ ಒಂದು ಪ್ರತ್ಯೇಕ ವಾಹನ ಪಡೆಯಲು ಏಜೆನ್ಸಿ ಜತೆಗೆ ಮಾತನಾಡಿದ್ದೇನೆ. ಬುಧವಾರವೇ ವಾಹನ ಇಲ್ಲಿಗೆ ಬರಲಿದೆ. ಆಮ್ಲಜನಕ ತುಂಬಿದ ಈ ಟ್ಯಾಂಕರ್ ಇಡೀ ದಿನ ಇಲ್ಲೇ ಇರಲಿದೆ. ಖಾಲಿ ಆದ ತಕ್ಷಣ ಮತ್ತೆ ತುಂಬಿಕೊಂಡು ಬರಲಿದೆ. ಅಗತ್ಯದಷ್ಟು ಆಮ್ಲಜನಕ ಪೂರೈಸಲು ಬಳ್ಳಾರಿಯ ಜಿಂದಾಲ್ ಕಂಪನಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದರು.</p>.<p>ಕಲಬುರ್ಗಿಯ ಮೂರು ಸಿಮೆಂಟ್ ಕಾರ್ಖಾನೆಗಳಲ್ಲಿ ಇರುವ ಎಲ್ಲ ಆಮ್ಲಜನಕ ಸಿಲಿಂಡರ್ಗಳನ್ನೂ ಕಲಬುರ್ಗಿಯ ಜಿಮ್ಸ್ಗೆ ನೀಡಲು ಸೂಚಿಸಿದ್ದೇನೆ. ಕಾರ್ಖಾನೆಗಳ ಮಾಲೀಕರೂ ಒಪ್ಪಿದ್ದಾರೆ. ಮಂಗಳವಾರವೇ ಇವು ಜಿಮ್ಸ್ ತಲುಪಲಿವೆ’ ಎಂದೂ ಹೇಳಿದರು.</p>.<p>ರಾಜಕೀಯ ಬೇಡ: ಚಾಮರಾಜನಗರದಲ್ಲಿ ಸಂಭವಿಸಿದ ಸಾವು ದುರದೃಷ್ಟಕರ. ಇದೇ ವಿಷಯ ಇಟ್ಟುಕೊಂಡು ಈಗ ರಾಜಕೀಯ ಮಾಡುವುದು ಬೇಡ. ಮುಂದೇನಾಗಬೇಕು ಎಂಬುದನ್ನು ನೋಡಬೇಕು. ಮುಖ್ಯಮಂತ್ರಿ ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>