<p><strong>ಕಲಬುರ್ಗಿ</strong>:ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡಿದ ಎಂಟು ಜನರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿದೆ.</p>.<p>ಇರ್ಫಾನ್ ಉಸ್ಮಾನ್ ಪಟೇಲ್, ಗಣೇಶ ಶರಣಪ್ಪ, ರಾಜಶೇಖರ ಸಿದ್ದಣ್ಣ, ಶಿವಕುಮಾರ ಪಡಶೆಟ್ಟಿ, ಶ್ರೀನಿವಾಸ ದೇವೇಂದ್ರಪ್ಪ, ಮೆಹಬೂಬ ಖಾಜಾಮಿಯಾ, ರಾಚಯ್ಯ ಅಲಿಯಾಸ್ ಬಸ್ಸಯ್ಯ ಮೊಘಲಯ್ಯ, ಜಯತೀರ್ಥ ಅಲಿಯಾಸ್ ಜಯಪ್ರಕಾಶ ಶಿಕ್ಷೆಗೆ ಗುರಿಯಾದವರು.</p>.<p>ಇರ್ಫಾನ್ ಹಾಗೂ ಇತರರು ನಗರದ ಆಳಂದ ರಸ್ತೆಯಲ್ಲಿರುವ ರಾಣಿ ಷಫೀರ್ ದರ್ಗಾ ಹತ್ತಿರದ ಆಲದ ಮರದ ಕಟ್ಟೆಯ ಮೇಲೆ ಕುಳಿತುಕೊಂಡು ಮಾದಕ ಪದಾರ್ಥವಾಗಿರುವ ಮೆಥಾಪೆಟಾಮಿನ್ 2013ರ ಡಿಸೆಂಬರ್ 1ರಂದು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿ 3 ಕೆ.ಜಿ ತೂಕದ ಮಾದಕ ದ್ರವ್ಯ ಜಪ್ತಿ ಮಾಡಿಕೊಂಡಿದ್ದರು.</p>.<p>ಆಗ ಹೆಚ್ಚುವರಿ ಎಸ್ಪಿ ಆಗಿದ್ದ ಸಂತೋಷ ಬಾಬು ಅವರ ವರದಿಯಂತೆ ಪಿಎಸ್ಐ ಹುಸೇನಬಾಷಾ, ಎಎಸ್ಐ ಭಗತಸಿಂಗ್ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಆರ್.ಜೆ.ಸತೀಶಸಿಂಗ್ ಅವರು ಸಾಕ್ಷಿಗಳನ್ನು, ವಾದ ಪ್ರತಿವಾದ ಆಲಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.</p>.<p>ಸರ್ಕಾರದ ಪರವಾಗಿ ಅಭಿಯೋಜಕರಾದ ಅಂಜನಾ ಚವ್ಹಾಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>:ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡಿದ ಎಂಟು ಜನರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿದೆ.</p>.<p>ಇರ್ಫಾನ್ ಉಸ್ಮಾನ್ ಪಟೇಲ್, ಗಣೇಶ ಶರಣಪ್ಪ, ರಾಜಶೇಖರ ಸಿದ್ದಣ್ಣ, ಶಿವಕುಮಾರ ಪಡಶೆಟ್ಟಿ, ಶ್ರೀನಿವಾಸ ದೇವೇಂದ್ರಪ್ಪ, ಮೆಹಬೂಬ ಖಾಜಾಮಿಯಾ, ರಾಚಯ್ಯ ಅಲಿಯಾಸ್ ಬಸ್ಸಯ್ಯ ಮೊಘಲಯ್ಯ, ಜಯತೀರ್ಥ ಅಲಿಯಾಸ್ ಜಯಪ್ರಕಾಶ ಶಿಕ್ಷೆಗೆ ಗುರಿಯಾದವರು.</p>.<p>ಇರ್ಫಾನ್ ಹಾಗೂ ಇತರರು ನಗರದ ಆಳಂದ ರಸ್ತೆಯಲ್ಲಿರುವ ರಾಣಿ ಷಫೀರ್ ದರ್ಗಾ ಹತ್ತಿರದ ಆಲದ ಮರದ ಕಟ್ಟೆಯ ಮೇಲೆ ಕುಳಿತುಕೊಂಡು ಮಾದಕ ಪದಾರ್ಥವಾಗಿರುವ ಮೆಥಾಪೆಟಾಮಿನ್ 2013ರ ಡಿಸೆಂಬರ್ 1ರಂದು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿ 3 ಕೆ.ಜಿ ತೂಕದ ಮಾದಕ ದ್ರವ್ಯ ಜಪ್ತಿ ಮಾಡಿಕೊಂಡಿದ್ದರು.</p>.<p>ಆಗ ಹೆಚ್ಚುವರಿ ಎಸ್ಪಿ ಆಗಿದ್ದ ಸಂತೋಷ ಬಾಬು ಅವರ ವರದಿಯಂತೆ ಪಿಎಸ್ಐ ಹುಸೇನಬಾಷಾ, ಎಎಸ್ಐ ಭಗತಸಿಂಗ್ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಆರ್.ಜೆ.ಸತೀಶಸಿಂಗ್ ಅವರು ಸಾಕ್ಷಿಗಳನ್ನು, ವಾದ ಪ್ರತಿವಾದ ಆಲಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.</p>.<p>ಸರ್ಕಾರದ ಪರವಾಗಿ ಅಭಿಯೋಜಕರಾದ ಅಂಜನಾ ಚವ್ಹಾಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>