ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ಸಿಎಸ್‌ಆರ್‌ ನಿಧಿ ಸೆಳೆಯಲು ಚಿಂತನೆ: ಸೋಮಣ್ಣ ಬೇವಿನಮರದ

Published : 21 ಜುಲೈ 2025, 6:57 IST
Last Updated : 21 ಜುಲೈ 2025, 6:57 IST
ಫಾಲೋ ಮಾಡಿ
Comments
ಸಭಿಕರೊಂದಿಗೆ ಸಂವಾದ...
‘ಮಾತುಕತೆ’ಯಲ್ಲಿ ಹಲವು ಸಭಿಕರ ಪ್ರಶ್ನೆಗಳಿಗೆ ಸೋಮಣ್ಣ ಬೇವಿನಮರದ ಉತ್ತರಿಸಿದರು. ‘ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಘೋಷಿಸಿದ್ದ ₹150 ಸಹಾಯಧನವು ಮಹಾರಾಷ್ಟ್ರಕ್ಕೆ ಕಬ್ಬು ಪೂರೈಸಿದ ಗಡಿನಾಡಿನ ರೈತರಿಗೂ ಪೂರೈಸುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕೆಕೆಆರ್‌ಡಿಬಿ ಅನುದಾನದ ನಿರೀಕ್ಷೆ’
‘ಪ್ರಾಧಿಕಾರಕ್ಕೆ ಕೆಕೆಆರ್‌ಡಿಬಿ ಅನುದಾನದಲ್ಲಿ ಶೇ 5ರಿಂದ ಶೇ 10ರಷ್ಟು ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅಂದಾಜು ₹100 ಕೋಟಿ ಅನುದಾನ ನೀಡುವ ಭರವಸೆ ದೊರೆತಿದೆ. ಅದು ಸಿಕ್ಕರೆ ಕಲ್ಯಾಣ ಕರ್ನಾಟಕ ಭಾಗದ ಐದು ಜಿಲ್ಲೆಗಳ 23 ತಾಲ್ಲೂಕುಗಳ ಸರ್ಕಾರಿ ಶಾಲೆಗಳ ಸಬಲೀಕರಣ ಗ್ರಂಥಾಲಯ ಕನ್ನಡ ದಿನಪತ್ರಿಕೆಗಳ ಪೂರೈಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವಂಥ ಚಟುವಟಿಕೆಗೆ ವಿನಿಯೋಗಿಸಲಾಗುವುದು’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT