ಶಾಸಕರ ಕೋರಿಕೆಯಂತೆ ಊರೊಳಗಿನ ಮುತ್ಯಾನಕಟ್ಟೆಯಲ್ಲಿ ಶುದ್ಧ ನೀರಿನ ಘಟಕ ಸಿದ್ಧವಾಗಿದ್ದು ಜನರಿಗೆ ಅನುಕೂಲವಾಗಿದೆ. ಅದರಂತೆ, ರಾಮನಗರ ಪ್ರದೇಶದ ಜನತೆಗೆ ಅನುಕೂಲವಾಗಲು ಕಳೆದ ವರ್ಷ ಸುಗೂರ ರಸ್ತೆ ಬದಿಯಲ್ಲಿ ಶುದ್ಧ ನೀರಿನ ಘಟಕದ ನಿರ್ಮಾಣಕ್ಕೆ ಚಾಲನೆ ದೊರಕಿದೆ. ವಿದ್ಯುತ್ ಸಂಪರ್ಕ, ಯಂತ್ರ ಜೋಡಣೆ, ಸಿಂಟೆಕ್ಸ್ ಟ್ಯಾಂಕ್ ಅಳವಡಿಕೆ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇಲ್ಲಿಯ ವರೆಗೂ ಹನಿ ಶುದ್ಧ ನೀರು ಸಿಗದಾಗಿದೆ ಎನ್ನುವುದು ಜನರ ಗೋಳು.