ದೇವಾನಂದ್ ಎಸ್.ಪಿ. ಅವರ ಸುಮಧುರ ಗಾಯನ ಪ್ರೇಕ್ಷಕರನ್ನು ಆಕರ್ಷಿಸಿತು. ನಿಖಿಲ್ , ಶ್ರದ್ಧಾ, ಪ್ರದೀಪ, ಶಾಂತಕುಮಾರ, ಸ್ನೇಹಾ, ಸಮೀಕ್ಷಾ, ಆರಾಧ್ಯ, ಬಸಯ್ಯ, ಶೇಖರ್ ಮುಂತಾದ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ಚಿರಂಜೀವಿ ಗುತ್ತೇದಾರ ಅವರ ಸಂಯೋಜನೆಯಲ್ಲಿ ಮಕ್ಕಳ ನೃತ್ಯ ಮೂಡಿಬಂದಿತು. ಸೋಮಶಂಕರ್ ಜಿ. ಬಿರಾದರ ಅವರ ಬೆಳಕಿನ ನಿರ್ವಹಣೆ ಅಚ್ಚುಕಟ್ಟಾಗಿತ್ತು.