<p><strong>ಕಲಬುರಗಿ:</strong> ರೈತರೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರ ನೀಡಲು ವಿಫಲವಾದ ಜಿಲ್ಲಾಡಳಿತದ ಕ್ರಮಕ್ಕೆ ಬೇಸರಗೊಂಡ ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯವು, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರು ಜಪ್ತಿಗೆ ಆದೇಶ ನೀಡಿದೆ.</p>.<p>ಅಫಜಲಪುರ ತಾಲ್ಲೂಕಿನ ಉಡಚಣದ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನನ್ನು 2008ರಲ್ಲಿ ಭೀಮಾ ಏತ ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪರಿಹಾರ ರೂಪವಾಗಿ ₹ 7.41 ಲಕ್ಷ ನೀಡಬೇಕಿತ್ತು. ಆದರೆ, ಮೂರು ವರ್ಷ ಕಳೆದರೂ ಹಣ ಬಂದಿರಲಿಲ್ಲ. ಹೀಗಾಗಿ ರೈತ ಕಲ್ಲಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದ ಅಧಿಕಾರಿಗಳು, ವಕೀಲರು ಕಾರು ಜಪ್ತಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಕ್ಷಣ ಚೆಕ್ ಹಸ್ತಾಂತರಕ್ಕೆ ಮುಂದಾದರು. ಆದರೆ, ಚೆಕ್ ಗೆ ಸಹಿ ಮಾಡಬೇಕಿದ್ದ ಭೂಸ್ವಾಧೀನ ಅಧಿಕಾರಿ ಬೇರೆ ಜಿಲ್ಲೆಗೆ ತೆರಳಿದ್ದರು. ಹೀಗಾಗಿ, ಅವರ ಸಹಿ ಪಡೆದು ಚೆಕ್ ನೀಡುವುದಾಗಿ ತಿಳಿಸಿದರು.</p>.<p>ಇದಕ್ಕೆ ರೈತ ಹಾಗೂ ವಕೀಲರು ಒಪ್ಪಿದರು. ಹೀಗಾಗಿ ಕಾರು ಜಪ್ತಿ ಮಾಡದೇ ವಾಪಸಾದರು.</p>.<p>ನೋಟಿಸ್ ಅಂಟಿಸಲಾದ ಕಾರನ್ನೇ ಜಿಲ್ಲಾಧಿಕಾರಿ ತೆಗೆದುಕೊಂಡು ಹೋದರು. ಅದನ್ನು ತೆಗೆಯಲು ಮುಂದಾದ ಸಿಬ್ಬಂದಿಗೆ ತೆಗೆಯಬೇಡಿ ಎಂದು ಡಿ.ಸಿ. ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ರೈತರೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರ ನೀಡಲು ವಿಫಲವಾದ ಜಿಲ್ಲಾಡಳಿತದ ಕ್ರಮಕ್ಕೆ ಬೇಸರಗೊಂಡ ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯವು, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರು ಜಪ್ತಿಗೆ ಆದೇಶ ನೀಡಿದೆ.</p>.<p>ಅಫಜಲಪುರ ತಾಲ್ಲೂಕಿನ ಉಡಚಣದ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನನ್ನು 2008ರಲ್ಲಿ ಭೀಮಾ ಏತ ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪರಿಹಾರ ರೂಪವಾಗಿ ₹ 7.41 ಲಕ್ಷ ನೀಡಬೇಕಿತ್ತು. ಆದರೆ, ಮೂರು ವರ್ಷ ಕಳೆದರೂ ಹಣ ಬಂದಿರಲಿಲ್ಲ. ಹೀಗಾಗಿ ರೈತ ಕಲ್ಲಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದ ಅಧಿಕಾರಿಗಳು, ವಕೀಲರು ಕಾರು ಜಪ್ತಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಕ್ಷಣ ಚೆಕ್ ಹಸ್ತಾಂತರಕ್ಕೆ ಮುಂದಾದರು. ಆದರೆ, ಚೆಕ್ ಗೆ ಸಹಿ ಮಾಡಬೇಕಿದ್ದ ಭೂಸ್ವಾಧೀನ ಅಧಿಕಾರಿ ಬೇರೆ ಜಿಲ್ಲೆಗೆ ತೆರಳಿದ್ದರು. ಹೀಗಾಗಿ, ಅವರ ಸಹಿ ಪಡೆದು ಚೆಕ್ ನೀಡುವುದಾಗಿ ತಿಳಿಸಿದರು.</p>.<p>ಇದಕ್ಕೆ ರೈತ ಹಾಗೂ ವಕೀಲರು ಒಪ್ಪಿದರು. ಹೀಗಾಗಿ ಕಾರು ಜಪ್ತಿ ಮಾಡದೇ ವಾಪಸಾದರು.</p>.<p>ನೋಟಿಸ್ ಅಂಟಿಸಲಾದ ಕಾರನ್ನೇ ಜಿಲ್ಲಾಧಿಕಾರಿ ತೆಗೆದುಕೊಂಡು ಹೋದರು. ಅದನ್ನು ತೆಗೆಯಲು ಮುಂದಾದ ಸಿಬ್ಬಂದಿಗೆ ತೆಗೆಯಬೇಡಿ ಎಂದು ಡಿ.ಸಿ. ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>