ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದ ಅಧಿಕಾರಿಗಳು, ವಕೀಲರು ಕಾರು ಜಪ್ತಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಕ್ಷಣ ಚೆಕ್ ಹಸ್ತಾಂತರಕ್ಕೆ ಮುಂದಾದರು. ಆದರೆ, ಚೆಕ್ ಗೆ ಸಹಿ ಮಾಡಬೇಕಿದ್ದ ಭೂಸ್ವಾಧೀನ ಅಧಿಕಾರಿ ಬೇರೆ ಜಿಲ್ಲೆಗೆ ತೆರಳಿದ್ದರು. ಹೀಗಾಗಿ, ಅವರ ಸಹಿ ಪಡೆದು ಚೆಕ್ ನೀಡುವುದಾಗಿ ತಿಳಿಸಿದರು.