ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಶರಣರ ನಾಡು ಕಲಬುರ್ಗಿಯಲ್ಲಿರುವ ಎಲ್ಲಾ ಧರ್ಮದವರ ಆರಾಧ್ಯ ದೈವ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪಾ ಸಾತ್ವಿಕರೂ, ಶರಣ ಸಂಸ್ಕೃತಿಯ ಪ್ರತಿಪಾದಕರಾಗಿದ್ದರು. ಅವರು ದಾಸೋಹದ ಮೂಲಕ ಎಲ್ಲ ಸಮುದಾಯದವರು ಒಂದೇ ಎಂದು ಹೇಳುತ್ತಿದ್ದರು. ಅವರು ವಾಸಿಸುತ್ತಿದ್ದ ನಿವಾಸ ಗೋದುತಾಯಿ ನಗರದಲ್ಲಿ ಹಾದು ಹೋಗಿರುವ ಸೇತುವೆಗೆ ಅವರ ಹೆಸರು ಇಡುವುದು ಸೂಕ್ತ ಎಂಬುದು ಎಲ್ಲರ ಒತ್ತಾಸೆಯಾಗಿದೆ. ವಿಶೇಷವಾಗಿ ಕಲಬುರ್ಗಿ ವೀರಶೈವ ಲಿಂಗಾಯತ ಸಮುದಾಯದವರು ಅಪ್ಪಾ ಅವರ ಹೆಸರನ್ನು ಮೇಲ್ಸೇತುವೆಗೆ ಇಡುವುದರ ಮೂಲಕ ಶರಣ ಸಂಸ್ಕೃತಿ ಹಾಗೂ ದಾಸೋಹ ಪರಂಪರೆಗೆ ಸಂದ ಗೌರವವಾಗುತ್ತದೆ’ ಎಂದು ತಿಳಿಸಿದ್ದಾರೆ.