ಬಳಿಕ ಮಾತನಾಡಿದ ಅವರು, ಹಲವು ತಿಂಗಳಿಂದ ಅಕ್ರಮವಾಗಿ ಶಾಲೆ ಬಿಡುವುದು, ಮತ್ತೆ ಬಂದು ಹಾಜರಿ ಪುಸ್ತಕದಲ್ಲಿ ಶಾಲೆ ಬಿಟ್ಟ ದಿನಗಳ ಸಹಿ ಮಾಡುವುದು, ಆದೇಶವಿಲ್ಲದಿದ್ದರೂ ಹಾಜರಿ ಪುಸ್ತಕದಲ್ಲಿ ಅನ್ಯಕಾರ್ಯ ನಿಮಿತ್ತ(ಒಡಿ) ಅಂತ ನಮೂದಿಸಿ ಶಾಲೆಗೆ ಗೈರಾಗುವುದು. ಅಲ್ಲದೆ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸದೆ ಹಣವನ್ನು ಎತ್ತಿ ಹಾಕಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಬೋಧನೆ ಮಾಡದೆ ಕಾಲ ಹರಣ ಮಾಡಿ, ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ಷಪಡಿಸಿದರು.