ಜನದಟ್ಟಣಿ ಹೆಚ್ಚಿದ್ದರಿಂದ ಪೊಲೀಸರು ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಆಟೊ, ಕಾರು ಸೇರಿದಂತೆ ಇತರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರು. ಬೈಕ್ ಸವಾರರಿಗೆ ಮಾತ್ರ ಪ್ರವೇಶವಿತ್ತು. ಬಹಳ ದಿನಗಳ ಬಳಿಕ ದೇವಸ್ಥಾನದ ಬಳಿ ತೆರಳಲು ಅವಕಾಶ ಸಿಕ್ಕಿದ್ದರಿಂದ ಹಿರಿ ಹಿರಿ ಹಿಗ್ಗಿದ ಭಕ್ತರು ಬಹಳ ಹೊತ್ತಿನ ತನಕ ಪೂಜಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಮಾರ್ಚ್ನಲ್ಲಿ ಲಾಕ್ಡೌನ್ ಆರಂಭವಾದ ಬಳಿಕ ಜಾತ್ರೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಗಿತ್ತು. ಇದೀಗ ದೇವಸ್ಥಾನದ ಬಳಿ ಭಕ್ತರ ದಟ್ಟಣಿ ಹೆಚ್ಚಾಗಿದೆ.