ಚರ್ಚೆಗೆ ಪಂಥಾಹ್ವಾನ: ‘ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಹಿಡಿದು ಅಗ್ನಿ ಪಥ ತನಕದ 15 ಯೋಜನೆಗಳ ಉದ್ದೇಶ, ಸ್ವರೂಪ, ಅವುಗಳ ಜಾರಿಯ ನಿಜಚಿತ್ರಣ, ಅದಕ್ಕೆ ಮಾಡಿದ ವೆಚ್ಚಗಳ ಬಗ್ಗೆ ಮಾತನಾಡಲು ಮಾಲೀಕಯ್ಯ ಗುತ್ತೇದಾರ ಹಾಗೂ ಉಮೇಶ ಜಾಧವ ಸಿದ್ಧರಿದ್ದರೆ, ನಾವೇ ಸ್ಥಳ ನಿಗದಿ ಮಾಡುತ್ತೇವೆ, ಬಹಿರಂಗ ಚರ್ಚೆಗೆ ಬರಲಿ’ ಎಂದು ಅರ್ಜುನ ಭದ್ರೆ ಸವಾಲು ಹಾಕಿದರು.