<p><strong>ಗಂಗಾವತಿ</strong>: ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉನ್ನತ ಗುರಿ ಸಾಧನೆಗೆ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಿಕೆಗೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.</p>.<p>ನಗರದ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ದೇವಾಂಗ ಸಮಾಜ, ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ದೇವಲ ದೇವಾಂಗ ಪುರಾಣಗ್ರಂಥ ಬಿಡುಗಡೆ, ಜಿಲ್ಲಾ ದೇವಾಂಗ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ದೇವಾಂಗ ಸಮಾಜದ ಮಹರ್ಷಿಗಳು ದೇವಾನು-ದೇವತೆಗಳಿಗೆ ವಸ್ತ್ರ ನೇಯ್ದುಕೊಟ್ಟವರು. ಇಂತಹ ಸಮಾಜದಲ್ಲಿ ಜನಿಸಿದ ನೀವು ಸಂಘಟನಾತ್ಮಕವಾಗಿ ಸಮಾಜದ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಪ್ರತಿಭಾ ಪುರಸ್ಕಾರಗಳು ನೀಡುತ್ತಿರುವುದು ಶ್ಲಾಘನೀಯ ಎಂದರು.</p>.<p>ದೇವಾಂಗ ಸಮಾಜ ಏಳಿಗೆಗೆ ಶ್ರೀಗಳ ಪಾತ್ರ ದೊಡ್ಡದಿದ್ದು, ಇಂದಿನಿಂದ ದೇವಾಂಗ ಸಮಾಜದ ಕಷ್ಟ-ಸುಖದ ಜತೆಗೆ ಸಂಘದ ಪದಾಧಿಕಾರಿಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದು ದೇವಾಂಗ ಸಮಾಜಕ್ಕೆ ಭರವಸೆ ನೀಡಿದರು.</p>.<p>ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದ ಏಳಿಗೆಗೆ ಒಗ್ಗಟ್ಟಿನ ಮಂತ್ರ ಪಠಿಸುವುದು ತುಂಬಾ ಮುಖ್ಯ. ನಮ್ಮ ವೈಯಕ್ತಿಕ ಜೀವನ ಜತೆಗೆ ಸಮಾಜದ ಏಳಿಗೆಗೆ ಶ್ರಮಿಸಬೇಕಾದದ್ದು, ಎಲ್ಲ ಜವಾಬ್ದಾರಿಯಾಗಿದೆ ಎಂದರು.</p>.<p>ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ದೇವಾಂಗ ಸಮಾಜದ ಜನರು ಬದುಕಿನ ಉನ್ನತಮಟ್ಟಕ್ಕೆ ಏರುವ ವಿಷಯದಲ್ಲಿ ಇನ್ಮುಂದೆ ಜಾಗೃತರಾಗಬೇಕು. ಸಮಾಜದ ಗುರು-ಹಿರಿಯರನ್ನು ಗೌರವಿಸುವ ಜತೆಗೆ ಸಮಾಜವನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು ಎಂದು ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.</p>.<p>ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಅವರು, ದೇವಲ ದೇವಾಂಗ ಸಮಾಜದ ಪುರಾಣಗ್ರಂಥ ಬಿಡುಗಡೆ ಮಾಡಿದರು. ನಂತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.</p>.<p>ದೇವಾಂಗಮಠದ ಶಂಕರಯ್ಯ ಸ್ವಾಮಿ, ರುದ್ರಮುಮುನಿ ಸ್ವಾಮಿ, ಲಲಿತಾ ಕುದುರೆಮುಖಿ, ಮಂಜುನಾಥ ವಸ್ತ್ರದ, ಎಸ್.ಆರ್. ಸಿದ್ಧಲಿಂಗ, ಪ್ರಹ್ಲಾದ ಗೌಡ, ವಾಸುದೇವ ಕೊಳಗದ, ಈರಣ್ಣ ಬೆಟಗೇರಿ, ವೆಂಕಟೇಶ, ಶಂಕ್ರಪ್ಪ ಪಂಪಣ್ಣ ಬೆಟಗೇರಿ, ರಾಮನಗೌಡ ಬಿಜ್ಜಳ, ಸುನಂದ, ಆನಂದ್ ಅಕ್ಕಿ ಸೇರಿ ಸಮಾಜದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉನ್ನತ ಗುರಿ ಸಾಧನೆಗೆ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಿಕೆಗೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.</p>.<p>ನಗರದ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ದೇವಾಂಗ ಸಮಾಜ, ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ದೇವಲ ದೇವಾಂಗ ಪುರಾಣಗ್ರಂಥ ಬಿಡುಗಡೆ, ಜಿಲ್ಲಾ ದೇವಾಂಗ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ದೇವಾಂಗ ಸಮಾಜದ ಮಹರ್ಷಿಗಳು ದೇವಾನು-ದೇವತೆಗಳಿಗೆ ವಸ್ತ್ರ ನೇಯ್ದುಕೊಟ್ಟವರು. ಇಂತಹ ಸಮಾಜದಲ್ಲಿ ಜನಿಸಿದ ನೀವು ಸಂಘಟನಾತ್ಮಕವಾಗಿ ಸಮಾಜದ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಪ್ರತಿಭಾ ಪುರಸ್ಕಾರಗಳು ನೀಡುತ್ತಿರುವುದು ಶ್ಲಾಘನೀಯ ಎಂದರು.</p>.<p>ದೇವಾಂಗ ಸಮಾಜ ಏಳಿಗೆಗೆ ಶ್ರೀಗಳ ಪಾತ್ರ ದೊಡ್ಡದಿದ್ದು, ಇಂದಿನಿಂದ ದೇವಾಂಗ ಸಮಾಜದ ಕಷ್ಟ-ಸುಖದ ಜತೆಗೆ ಸಂಘದ ಪದಾಧಿಕಾರಿಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದು ದೇವಾಂಗ ಸಮಾಜಕ್ಕೆ ಭರವಸೆ ನೀಡಿದರು.</p>.<p>ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದ ಏಳಿಗೆಗೆ ಒಗ್ಗಟ್ಟಿನ ಮಂತ್ರ ಪಠಿಸುವುದು ತುಂಬಾ ಮುಖ್ಯ. ನಮ್ಮ ವೈಯಕ್ತಿಕ ಜೀವನ ಜತೆಗೆ ಸಮಾಜದ ಏಳಿಗೆಗೆ ಶ್ರಮಿಸಬೇಕಾದದ್ದು, ಎಲ್ಲ ಜವಾಬ್ದಾರಿಯಾಗಿದೆ ಎಂದರು.</p>.<p>ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ದೇವಾಂಗ ಸಮಾಜದ ಜನರು ಬದುಕಿನ ಉನ್ನತಮಟ್ಟಕ್ಕೆ ಏರುವ ವಿಷಯದಲ್ಲಿ ಇನ್ಮುಂದೆ ಜಾಗೃತರಾಗಬೇಕು. ಸಮಾಜದ ಗುರು-ಹಿರಿಯರನ್ನು ಗೌರವಿಸುವ ಜತೆಗೆ ಸಮಾಜವನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು ಎಂದು ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.</p>.<p>ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಅವರು, ದೇವಲ ದೇವಾಂಗ ಸಮಾಜದ ಪುರಾಣಗ್ರಂಥ ಬಿಡುಗಡೆ ಮಾಡಿದರು. ನಂತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.</p>.<p>ದೇವಾಂಗಮಠದ ಶಂಕರಯ್ಯ ಸ್ವಾಮಿ, ರುದ್ರಮುಮುನಿ ಸ್ವಾಮಿ, ಲಲಿತಾ ಕುದುರೆಮುಖಿ, ಮಂಜುನಾಥ ವಸ್ತ್ರದ, ಎಸ್.ಆರ್. ಸಿದ್ಧಲಿಂಗ, ಪ್ರಹ್ಲಾದ ಗೌಡ, ವಾಸುದೇವ ಕೊಳಗದ, ಈರಣ್ಣ ಬೆಟಗೇರಿ, ವೆಂಕಟೇಶ, ಶಂಕ್ರಪ್ಪ ಪಂಪಣ್ಣ ಬೆಟಗೇರಿ, ರಾಮನಗೌಡ ಬಿಜ್ಜಳ, ಸುನಂದ, ಆನಂದ್ ಅಕ್ಕಿ ಸೇರಿ ಸಮಾಜದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>