<p><strong>ಕಲಬುರಗಿ:</strong> ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. 2022–23ನೇ ಅಬಕಾರಿ ವರ್ಷಕ್ಕೆ (ಜುಲೈನಿಂದ ಜೂನ್) ಹೋಲಿಸಿದರೆ 2024–25ರಲ್ಲಿ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ತಗ್ಗಿದೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತಿವೆ.</p>.<p>ಅಬಕಾರಿ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು, ಕಳೆದ ಮೂರೂವರೆ ವರ್ಷಗಳಲ್ಲಿ ಏಳು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೇ, ವಿವಿಧ ಬಗೆಯ ಮದ್ಯ, ವಾಹನಗಳು ಸೇರಿದಂತೆ ₹8 ಕೋಟಿಗೂ ಅಧಿಕ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಜಿಲ್ಲೆಯಲ್ಲಿರುವ ಏಳು ಅಬಕಾರಿ ವಲಯಗಳಲ್ಲಿ 2022–23ರಲ್ಲಿ 3,455 ಮಂದಿ ವಿರುದ್ಧ ಕಾನೂನು ಕ್ರಮಕೈಗೊಂಡು, 2,732 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 330 ಘೋರ ಅಪರಾಧಗಳು ಸೇರಿವೆ. ಆ ವರ್ಷ ಒಟ್ಟು ₹3.33 ಕೋಟಿ ಮೊತ್ತದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಮದ್ಯ ಅಕ್ರಮಕ್ಕೆ ಸಂಬಂಧಿಸಿದಂತೆ 2023–24ರಲ್ಲಿ 280 ಘೋರ ಅಪರಾಧಗಳು ಸೇರಿದಂತೆ 2,123 ಪ್ರಕರಣಗಳನ್ನು ದಾಖಲಿಸಿ, 2,799 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.</p>.<p>2024–25ರಲ್ಲಿ 102 ಘೋರ ಅಪರಾಧಗಳು ಸೇರಿದಂತೆ 1,396 ಪ್ರಕರಣಗಳನ್ನು ದಾಖಲಿಸಿರುವ ಅಬಕಾರಿ ಅಧಿಕಾರಿಗಳು, 1,776 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>2025–26ರ ಡಿಸೆಂಬರ್ ಅಂತ್ಯದ ತನಕ 781 ಪ್ರಕರಣಗಳನ್ನು ದಾಖಲಿಸಿರುವ 700ಕ್ಕೂ ಅಧಿಕ ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.</p>.<p><strong>ಯಾವೆಲ್ಲ ಪ್ರಕರಣಗಳು?</strong></p>.<p>ಚಿಲ್ಲರೆ ಮದ್ಯ ವಹಿವಾಟು, ಹೆಚ್ಚಿನ ದರಕ್ಕೆ ಮದ್ಯ ಮಾರಾಟ, ನಿಗದಿತ ಸಮಯ ಮೀರಿ ವಹಿವಾಟು ಸೇರಿದಂತೆ ಅಬಕಾರಿ ಸನ್ನದು ಷರತ್ತುಗಳನ್ನು ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಅಬಕಾರಿ ಅಧಿಕಾರಿಗಳು ಕಠಿಣ ಕ್ರಮಕೈಗೊಂಡಿದ್ದಾರೆ. 1,456 ಇಂಥ ಅಪರಾಧಗಳಲ್ಲಿ 1,456 ಪ್ರಕರಣಗಳನ್ನು ದಾಖಲಿಸಿದ್ದಾರೆ.</p>.<p>ಇನ್ನುಳಿದಂತೆ ಉದ್ಯಾನ, ಬೀದಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ–ಸೇವನೆಗೆ ಸಂಬಂಧಿಸಿದಂತೆ 2022ರ ಜುಲೈನಿಂದ 2025ರ ಡಿಸೆಂಬರ್ ತನಕ 4,800ಕ್ಕೂ ಅಧಿಕ ಪ್ರಕರಣಗಳು ಅಧಿಕಾರಿಗಳು ದಾಖಲಿಸಿದ್ದಾರೆ.</p>.<p><strong>ಸೇಂದಿಗೆ ಬೀಳದ ಕಡಿವಾಣ:</strong> </p>.<p>ಜಿಲ್ಲೆಯ ಚಿತ್ತಾಪುರ, ಸೇಡಂ, ಚಿಂಚೋಳಿ ಭಾಗದಲ್ಲಿ ಈಗಲೂ ಅಕ್ರಮವಾಗಿ ಸೇಂದಿ ಮಾರಾಟ, ಅಧಿಕಾರಿಗಳ ಕಣ್ಣು ತಪ್ಪಿಸಿ ಕಳ್ಳಭಟ್ಟಿ ತಯಾರಿಸುವುದು ನಿಂತಿಲ್ಲ.</p>.<p>ಕಳೆದ ಮೂರೂವರೆ ವರ್ಷದಲ್ಲಿ 8,880ಕ್ಕೂ ಅಧಿಕ ಲೀಟರ್ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 450ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ಹಾಗೂ 3,300ಕ್ಕೂ ಅಧಿಕ ಲೀಟರ್ ಬೆಲ್ಲದಕೊಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. 2022–23ನೇ ಅಬಕಾರಿ ವರ್ಷಕ್ಕೆ (ಜುಲೈನಿಂದ ಜೂನ್) ಹೋಲಿಸಿದರೆ 2024–25ರಲ್ಲಿ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ತಗ್ಗಿದೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತಿವೆ.</p>.<p>ಅಬಕಾರಿ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು, ಕಳೆದ ಮೂರೂವರೆ ವರ್ಷಗಳಲ್ಲಿ ಏಳು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೇ, ವಿವಿಧ ಬಗೆಯ ಮದ್ಯ, ವಾಹನಗಳು ಸೇರಿದಂತೆ ₹8 ಕೋಟಿಗೂ ಅಧಿಕ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಜಿಲ್ಲೆಯಲ್ಲಿರುವ ಏಳು ಅಬಕಾರಿ ವಲಯಗಳಲ್ಲಿ 2022–23ರಲ್ಲಿ 3,455 ಮಂದಿ ವಿರುದ್ಧ ಕಾನೂನು ಕ್ರಮಕೈಗೊಂಡು, 2,732 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 330 ಘೋರ ಅಪರಾಧಗಳು ಸೇರಿವೆ. ಆ ವರ್ಷ ಒಟ್ಟು ₹3.33 ಕೋಟಿ ಮೊತ್ತದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಮದ್ಯ ಅಕ್ರಮಕ್ಕೆ ಸಂಬಂಧಿಸಿದಂತೆ 2023–24ರಲ್ಲಿ 280 ಘೋರ ಅಪರಾಧಗಳು ಸೇರಿದಂತೆ 2,123 ಪ್ರಕರಣಗಳನ್ನು ದಾಖಲಿಸಿ, 2,799 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.</p>.<p>2024–25ರಲ್ಲಿ 102 ಘೋರ ಅಪರಾಧಗಳು ಸೇರಿದಂತೆ 1,396 ಪ್ರಕರಣಗಳನ್ನು ದಾಖಲಿಸಿರುವ ಅಬಕಾರಿ ಅಧಿಕಾರಿಗಳು, 1,776 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>2025–26ರ ಡಿಸೆಂಬರ್ ಅಂತ್ಯದ ತನಕ 781 ಪ್ರಕರಣಗಳನ್ನು ದಾಖಲಿಸಿರುವ 700ಕ್ಕೂ ಅಧಿಕ ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.</p>.<p><strong>ಯಾವೆಲ್ಲ ಪ್ರಕರಣಗಳು?</strong></p>.<p>ಚಿಲ್ಲರೆ ಮದ್ಯ ವಹಿವಾಟು, ಹೆಚ್ಚಿನ ದರಕ್ಕೆ ಮದ್ಯ ಮಾರಾಟ, ನಿಗದಿತ ಸಮಯ ಮೀರಿ ವಹಿವಾಟು ಸೇರಿದಂತೆ ಅಬಕಾರಿ ಸನ್ನದು ಷರತ್ತುಗಳನ್ನು ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಅಬಕಾರಿ ಅಧಿಕಾರಿಗಳು ಕಠಿಣ ಕ್ರಮಕೈಗೊಂಡಿದ್ದಾರೆ. 1,456 ಇಂಥ ಅಪರಾಧಗಳಲ್ಲಿ 1,456 ಪ್ರಕರಣಗಳನ್ನು ದಾಖಲಿಸಿದ್ದಾರೆ.</p>.<p>ಇನ್ನುಳಿದಂತೆ ಉದ್ಯಾನ, ಬೀದಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ–ಸೇವನೆಗೆ ಸಂಬಂಧಿಸಿದಂತೆ 2022ರ ಜುಲೈನಿಂದ 2025ರ ಡಿಸೆಂಬರ್ ತನಕ 4,800ಕ್ಕೂ ಅಧಿಕ ಪ್ರಕರಣಗಳು ಅಧಿಕಾರಿಗಳು ದಾಖಲಿಸಿದ್ದಾರೆ.</p>.<p><strong>ಸೇಂದಿಗೆ ಬೀಳದ ಕಡಿವಾಣ:</strong> </p>.<p>ಜಿಲ್ಲೆಯ ಚಿತ್ತಾಪುರ, ಸೇಡಂ, ಚಿಂಚೋಳಿ ಭಾಗದಲ್ಲಿ ಈಗಲೂ ಅಕ್ರಮವಾಗಿ ಸೇಂದಿ ಮಾರಾಟ, ಅಧಿಕಾರಿಗಳ ಕಣ್ಣು ತಪ್ಪಿಸಿ ಕಳ್ಳಭಟ್ಟಿ ತಯಾರಿಸುವುದು ನಿಂತಿಲ್ಲ.</p>.<p>ಕಳೆದ ಮೂರೂವರೆ ವರ್ಷದಲ್ಲಿ 8,880ಕ್ಕೂ ಅಧಿಕ ಲೀಟರ್ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 450ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ಹಾಗೂ 3,300ಕ್ಕೂ ಅಧಿಕ ಲೀಟರ್ ಬೆಲ್ಲದಕೊಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>