ಕಮಲಾಪುರ ಪಟ್ಟಣದಲ್ಲಿ ರಸ್ತೆ ಗಸ್ತು ಮಾಡುತ್ತಿರುವ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಶಾಂತಪ್ಪ ವೀರಭದ್ರಪ್ಪ ಎಂಬಾತ ಬ್ಲೆಂಡರ್ಸ್ ಪ್ರೈಡ್, ಇಂಪೀರಿಯಲ್ ಬ್ಲೂ, ಒಆರ್ಸಿ ಕಂಪನಿಗಳ 14.4 ಲೀಟರ್ ಮದ್ಯ ಹಾಗೂ 7.8 ಲೀಟರ್ ಬಿಯರ್ ಅಕ್ರಮವಾಗಿ ಹಳ್ಳಿಗಳಲ್ಲಿ ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕಲಬುರಗಿ ವಲಯ 1ರ ಅಬಕಾರಿ ಉಪ ನಿರೀಕ್ಷಕ ಕೆ. ಪ್ರವೀಣ್ ಕುಮಾರ್ ₹ 9,620 ಮೌಲ್ಯದ ಮದ್ಯ ಹಾಗೂ ₹ 30 ಸಾವಿರ ಮೌಲ್ಯದ ಹೀರೊ ಸ್ಪ್ಲೆಂಡರ್ ಪ್ರೊ ಬೈಕ್ ಜಪ್ತಿ ಮಾಡಿದ್ದಾರೆ. ಕಾನ್ಸ್ಟೆಬಲ್ಗಳಾದ ಶಿವಪ್ಪ ಗೌಡ, ಮೋಹನ್, ಅರವಿಂದ್, ರಾಜೇಂದ್ರ ದಾಳಿ ತಂಡದಲ್ಲಿದ್ದರು.