<p><strong>ಅಫಜಲಪುರ:</strong> ತಾಲ್ಲೂಕಿನಲ್ಲಿ ಭೀಮಾ ಪ್ರವಾಹ ಕಡಿಮೆಯಾಗಿ 2 ದಿನ ಕಳೆದರೂ ಪ್ರವಾಹ ಪೀಡಿತ ಗ್ರಾಮಗಳ ನರಕಯಾತನೆ ಇನ್ನೂ ನಿಂತಿಲ್ಲ.</p>.<p>ಪ್ರವಾಹದಿಂದ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೊಂದರೆ ಆಗಿದೆ. ಮನೆಗಳಿಗೆ ನೀರು ಹೊಕ್ಕಿದೆ. ಇನ್ನೊಂದು ಕಡೆ ಕೆರೆಕಟ್ಟೆ, ರಸ್ತೆಗಳು ಹಾಳಾಗಿ ಹೋಗಿವೆ. ವಿದ್ಯುತ್ ಕಂಬ ಹಾಳಾಗಿದ್ದರಿಂದ ಗ್ರಾಮಗಳಲ್ಲಿ ಇದುವರೆಗೂ ವಿದ್ಯುತ್ ಪೂರೈಕೆಯಾಗಿಲ್ಲ. ಇದರಿಂದ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ.</p>.<p>ಸಾಕಷ್ಟು ರೈತರು ಮನೆ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಮತ್ತೆ ನೆರೆ ನಿಂತರೂ ಮಳೆ ಬರುತ್ತಲೇ ಇದೆ. ಹೀಗಾಗಿ ಪ್ರವಾಹ ನಿರ್ವಹಣೆ ಕಾರ್ಯಕ್ಕೆ ತೊಂದರೆ ಆಗುತ್ತಿದೆ. ಇದೀಗ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರ ಅರ್ಜಿ ಪಡೆಯುವ ಕೆಲಸ ನಡೆದಿದೆ.</p>.<p>ಪ್ರವಾಹಕ್ಕೆ ಒಳಗಾಗಿರುವ ಬಂಕಲಗಾ ಗ್ರಾಮದಲ್ಲಿ ಇನ್ನೂ ನೀರು ನಿಂತುಕೊಂಡಿದೆ. ಗ್ರಾಮದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಹದಿಂದ ಎಲ್ಲವೂ ಹಾಳಾಗಿ ಹೋಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಲ್ಲಪ್ಪ ಪ್ಯಾಟಿ ಹೇಳಿದರು.</p>.<p class="Subhead">ಭೀಮಾ ಪ್ರವಾಹಕ್ಕೆ ನದಿ ದಂಡೆಯ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ತೊಗರಿ, ಹತ್ತಿ, ಮೆಕ್ಕೆಜೋಳ ನಾಶವಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೇವಾಂಶ ಜಾಸ್ತಿ ಇರುವದರಿಂದ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.</p>.<p class="Subhead"><strong>ಹದಗೆಟ್ಟ ರಸ್ತೆಗಳು: </strong>ಭೀಮಾ ಪ್ರವಾಹದಿಂದ ಭೀಮಾ ದಡದ ಗ್ರಾಮಗಳ ರಸ್ತೆಗಳು ಹಾಳಾಗಿ ಹೋಗಿವೆ. ಬಂದರವಾಡ, ಜೇವರ್ಗಿ(ಬಿ), ಜೇವರ್ಗಿ(ಕೆ), ನಂದರಗಾ, ಸೊನ್ನ, ಘತ್ತರಗಾ, ಹಿಂಚಗೇರಾ, ಕಿರಸಾವಳಗಿ, ಟಾಕಳಿ, ಉಮರ್ಗಾ ರಸ್ತೆಗಳು ಹಾಳಾಗಿ ಹೋಗಿವೆ. ಕೆಲವು ಕಡೆ ಇಟ್ಟಿಗೆ ತಯಾರು ಮಾಡುವ ಕಾರ್ಮಿಕರ ಶೆಡ್ಗಳು ಕಿತ್ತುಕೊಂಡು ಹೋಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ:</strong> ತಾಲ್ಲೂಕಿನಲ್ಲಿ ಭೀಮಾ ಪ್ರವಾಹ ಕಡಿಮೆಯಾಗಿ 2 ದಿನ ಕಳೆದರೂ ಪ್ರವಾಹ ಪೀಡಿತ ಗ್ರಾಮಗಳ ನರಕಯಾತನೆ ಇನ್ನೂ ನಿಂತಿಲ್ಲ.</p>.<p>ಪ್ರವಾಹದಿಂದ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೊಂದರೆ ಆಗಿದೆ. ಮನೆಗಳಿಗೆ ನೀರು ಹೊಕ್ಕಿದೆ. ಇನ್ನೊಂದು ಕಡೆ ಕೆರೆಕಟ್ಟೆ, ರಸ್ತೆಗಳು ಹಾಳಾಗಿ ಹೋಗಿವೆ. ವಿದ್ಯುತ್ ಕಂಬ ಹಾಳಾಗಿದ್ದರಿಂದ ಗ್ರಾಮಗಳಲ್ಲಿ ಇದುವರೆಗೂ ವಿದ್ಯುತ್ ಪೂರೈಕೆಯಾಗಿಲ್ಲ. ಇದರಿಂದ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ.</p>.<p>ಸಾಕಷ್ಟು ರೈತರು ಮನೆ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಮತ್ತೆ ನೆರೆ ನಿಂತರೂ ಮಳೆ ಬರುತ್ತಲೇ ಇದೆ. ಹೀಗಾಗಿ ಪ್ರವಾಹ ನಿರ್ವಹಣೆ ಕಾರ್ಯಕ್ಕೆ ತೊಂದರೆ ಆಗುತ್ತಿದೆ. ಇದೀಗ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರ ಅರ್ಜಿ ಪಡೆಯುವ ಕೆಲಸ ನಡೆದಿದೆ.</p>.<p>ಪ್ರವಾಹಕ್ಕೆ ಒಳಗಾಗಿರುವ ಬಂಕಲಗಾ ಗ್ರಾಮದಲ್ಲಿ ಇನ್ನೂ ನೀರು ನಿಂತುಕೊಂಡಿದೆ. ಗ್ರಾಮದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಹದಿಂದ ಎಲ್ಲವೂ ಹಾಳಾಗಿ ಹೋಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಲ್ಲಪ್ಪ ಪ್ಯಾಟಿ ಹೇಳಿದರು.</p>.<p class="Subhead">ಭೀಮಾ ಪ್ರವಾಹಕ್ಕೆ ನದಿ ದಂಡೆಯ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ತೊಗರಿ, ಹತ್ತಿ, ಮೆಕ್ಕೆಜೋಳ ನಾಶವಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೇವಾಂಶ ಜಾಸ್ತಿ ಇರುವದರಿಂದ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.</p>.<p class="Subhead"><strong>ಹದಗೆಟ್ಟ ರಸ್ತೆಗಳು: </strong>ಭೀಮಾ ಪ್ರವಾಹದಿಂದ ಭೀಮಾ ದಡದ ಗ್ರಾಮಗಳ ರಸ್ತೆಗಳು ಹಾಳಾಗಿ ಹೋಗಿವೆ. ಬಂದರವಾಡ, ಜೇವರ್ಗಿ(ಬಿ), ಜೇವರ್ಗಿ(ಕೆ), ನಂದರಗಾ, ಸೊನ್ನ, ಘತ್ತರಗಾ, ಹಿಂಚಗೇರಾ, ಕಿರಸಾವಳಗಿ, ಟಾಕಳಿ, ಉಮರ್ಗಾ ರಸ್ತೆಗಳು ಹಾಳಾಗಿ ಹೋಗಿವೆ. ಕೆಲವು ಕಡೆ ಇಟ್ಟಿಗೆ ತಯಾರು ಮಾಡುವ ಕಾರ್ಮಿಕರ ಶೆಡ್ಗಳು ಕಿತ್ತುಕೊಂಡು ಹೋಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>