ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮಾಜಿ ಸಚಿವ ದಿ.ವೈಜನಾಥ ಪಾಟೀಲ ಪತ್ನಿ ಜ್ಞಾನೇಶ್ವರಿ ನಿಧನ

Last Updated 16 ಆಗಸ್ಟ್ 2021, 10:44 IST
ಅಕ್ಷರ ಗಾತ್ರ

ಕಲಬುರ್ಗಿ: ಮಾಜಿ ಸಚಿವ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದ ದಿ.ವೈಜನಾಥ ಪಾಟೀಲ ಅವರ ಪತ್ನಿ ಜ್ನಾನೇಶ್ವರಿ ಪಾಟೀಲ (74) ಅವರು ಸೋಮವಾರ ಬೆಳಿಗ್ಗೆ ‌ನಿಧನರಾದರು.

ಅವರಿಗೆ ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಗೌತಮ‌ ಪಾಟೀಲ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು.

ವೈಜನಾಥ ಪಾಟೀಲ ಅವರಿಗೆ ಬೆನ್ನೆಲುಬಾಗಿದ್ದ ಜ್ಞಾನೇಶ್ವರಿ ಅವರು ಪಾಟೀಲ ಅವರ ಹಿಂಬಾಲಕರು ಮನೆಗೆ ಬಂದ ಸಂದರ್ಭದಲ್ಲಿ ಸ್ವತಃ ರೊಟ್ಟಿ ತಯಾರಿಸಿ ಊಟ ಬಡಿಸುತ್ತಿದ್ದರು.

ಬೀದರ್ ಜಿಲ್ಲೆಯ ಹಕ್ಯಾಳ ಗ್ರಾಮದ ವೈಜನಾಥ ಅವರು ಪತ್ನಿಯ ಊರಾದ ಚಿಂಚೋಳಿಯಲ್ಲೇ ನೆಲೆಸಿದ್ದರು. 200 ಎಕರೆಗೂ ಅಧಿಕ ಆಸ್ತಿಯ ಒಡತಿಯಾಗಿದ್ದ ಜ್ಞಾನೇಶ್ವರಿ ಅವರು ಸರ್ಕಾರಕ್ಕೆ ಉಚಿತವಾಗಿ ‌ಜಮೀನು ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT