<p><strong>ಕಲಬುರಗಿ</strong>: ತಾಲ್ಲೂಕಿನ ತಾವರಗೇರಾ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ವತಿಯಿಂದ ಕುಟುಂಬ ದತ್ತು ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು. </p>.<p>ಈ ಕಾರ್ಯಕ್ರಮದಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಸ್ತ್ರೀ ರೋಗ, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು, ಎಲುಬು ಕೀಲು ಸೇರಿದಂತೆ ಚಿಕ್ಕ ಮಕ್ಕಳ ವಿಭಾಗಗಳು ಭಾಗವಹಿಸಿದ್ದವು.</p>.<p>ವಿದ್ಯಾರ್ಥಿಗಳು ಗ್ರಾಮದ ಜನರ ಮನೆಗೆ ತೆರಳಿ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ತಪಾಸಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.</p>.<p>ಉರ್ದು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ ಗ್ರಾಮಸ್ಥರು ತಪಾಸಣೆ ಮಾಡಿಸಿಕೊಂಡು ಉಚಿತ ಮಾತ್ರೆಗಳನ್ನು ಪಡೆದುಕೊಂಡರು. </p>.<p>ತಾವರಿಗೇರಾದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ಮೆಡಿಕಲ್ ಡೀನ್ ಡಾ. ಸಿದ್ದೇಶ ಸಿರವಾರ ತಿಳಿಸಿದರು. ಎಲ್ಲ ರೋಗಿಗಗಳಿಗೆ ಕೆಬಿಎನ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಈ ಕಾರ್ಡನಿಂದ ಕುಟುಂಬ ಸದಸ್ಯರೆಲ್ಲರ ಆರೋಗ್ಯ ಪರೀಕ್ಷೆಗಳು, ವಾರ್ಡ್ ಚಾರ್ಜ್, ಆಪರೇಷನ್ಗೆ ಒಳಗಾದವರು ಶೇ 30ರಷ್ಟು ರಿಯಾಯತಿ ಪಡೆಬಹುದಾಗಿದೆ ಎಂದರು.</p>.<p>ಸುಮಾರು 175ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು.</p>.<p>ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಶಹನಾಜ್, ಡಾ.ಅಸ್ಮಾ, ಡಾ. ಆಯಿಷಾ, ಡಾ. ಆಕಾಶ, ಡಾ. ಮುಸ್ತಾಕ್, ಡಾ. ಸಯ್ಯದ್ ಅಲಿ, ಡಾ. ಶಿಲ್ಪಾ, ಡಾ. ಪದ್ಮಾ, ಡಾ. ಕೇದಾರಾನಾಥ, ಡಾ. ಶಿಫಾ ಹಾಗೂ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ತಾಲ್ಲೂಕಿನ ತಾವರಗೇರಾ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ವತಿಯಿಂದ ಕುಟುಂಬ ದತ್ತು ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು. </p>.<p>ಈ ಕಾರ್ಯಕ್ರಮದಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಸ್ತ್ರೀ ರೋಗ, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು, ಎಲುಬು ಕೀಲು ಸೇರಿದಂತೆ ಚಿಕ್ಕ ಮಕ್ಕಳ ವಿಭಾಗಗಳು ಭಾಗವಹಿಸಿದ್ದವು.</p>.<p>ವಿದ್ಯಾರ್ಥಿಗಳು ಗ್ರಾಮದ ಜನರ ಮನೆಗೆ ತೆರಳಿ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ತಪಾಸಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.</p>.<p>ಉರ್ದು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ ಗ್ರಾಮಸ್ಥರು ತಪಾಸಣೆ ಮಾಡಿಸಿಕೊಂಡು ಉಚಿತ ಮಾತ್ರೆಗಳನ್ನು ಪಡೆದುಕೊಂಡರು. </p>.<p>ತಾವರಿಗೇರಾದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ಮೆಡಿಕಲ್ ಡೀನ್ ಡಾ. ಸಿದ್ದೇಶ ಸಿರವಾರ ತಿಳಿಸಿದರು. ಎಲ್ಲ ರೋಗಿಗಗಳಿಗೆ ಕೆಬಿಎನ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಈ ಕಾರ್ಡನಿಂದ ಕುಟುಂಬ ಸದಸ್ಯರೆಲ್ಲರ ಆರೋಗ್ಯ ಪರೀಕ್ಷೆಗಳು, ವಾರ್ಡ್ ಚಾರ್ಜ್, ಆಪರೇಷನ್ಗೆ ಒಳಗಾದವರು ಶೇ 30ರಷ್ಟು ರಿಯಾಯತಿ ಪಡೆಬಹುದಾಗಿದೆ ಎಂದರು.</p>.<p>ಸುಮಾರು 175ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು.</p>.<p>ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಶಹನಾಜ್, ಡಾ.ಅಸ್ಮಾ, ಡಾ. ಆಯಿಷಾ, ಡಾ. ಆಕಾಶ, ಡಾ. ಮುಸ್ತಾಕ್, ಡಾ. ಸಯ್ಯದ್ ಅಲಿ, ಡಾ. ಶಿಲ್ಪಾ, ಡಾ. ಪದ್ಮಾ, ಡಾ. ಕೇದಾರಾನಾಥ, ಡಾ. ಶಿಫಾ ಹಾಗೂ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>