19ರಂದು ಬೆಳಿಗ್ಗೆ 8 ಗಂಟೆಗೆ ನಗರದ ಮಾಯಾ ಮಂದಿರದಿಂದ ಸಕಲ ವಾದ್ಯಗಳೊಂದಿಗೆ ಕುಂಭ, ಕಳಸಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಕೋಟೆ ರಸ್ತೆ, ಕಪಡಾ ಬಜಾರ್ ಮುಖಾಂತರ ಸರಾಫ್ ಬಜಾರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ವಿವಿಧ ವರ್ತಕರು, ಸುವರ್ಣ ಕಾರ್ಖಾನೆಯವರು, ಸುವರ್ಣ ವ್ಯಾಪಾರೋದ್ಯಮಗಳು, ಸುವರ್ಣಕಾರರು ಸೇರಿದಂತೆ ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಕಪಡಾ ಬಜಾರ್, ಗಂಜ್ ಪ್ರದೇಶದ ವಿವಿಧ ವರ್ತಕರು ಮತ್ತು ಭಕ್ತರು ಭಾಗವಹಿಸುವರು. ಮೆರವಣಿಗೆ ನಂತರ ನವೀಕೃತ ಕಳಸಾರೋಹಣ ನಡೆಯಲಿದೆ. ಇಡೀ ದಿನ ಮಂದಿರದಲ್ಲಿ ಲೋಕ ಕಲ್ಯಾಣಕ್ಕಾಗಿ ಹೋಮ– ಹವನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.