<p><strong>ಕಾಳಗಿ: </strong>ನೂರಾರು ರೈತರ ಅನುಕೂಲಕ್ಕಾಗಿ ತಾಲ್ಲೂಕಿನ ಗೊಣಗಿ- ರಟಕಲ್ ಹಳೆ ರಸ್ತೆಗೆ ಡಾಂಬರ್ ರಸ್ತೆ ಮಂಜೂರಾಗಿದೆ. ಕಾಮಗಾರಿ ಆರಂಭಕ್ಕೆ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಮಾರ್ಚ್ ಮೊದಲನೇ ವಾರದಲ್ಲಿ ಭೂಮಿಪೂಜೆ ಮಾಡಿದ್ದಾರೆ. ಆದರೆ, ಭೂಮಿಪೂಜೆ ಸಲ್ಲಿಸಿ 6 ತಿಂಗಳಾಗುತ್ತಿದ್ದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ ಎಂದು ರೈತರು ದೂರಿದ್ದಾರೆ.</p>.<p>ಬೆಡಸೂರ, ಗೊಣಗಿ, ಮುಕರಂಬಾ ಮತ್ತು ರಟಕಲ್ ಸೀಮೆಯ ಸುಮಾರು 400 ಎಕರೆ ಜಮೀನಿಗೆ ಸಂಪರ್ಕ ಕಲ್ಪಿಸುವ ಈ ಹಳೆ ರಸ್ತೆ ಬಹಳಷ್ಟು ವರ್ಷಗಳಿಂದ ಕೆಟ್ಟು ಹೋಗಿದೆ. ಪರಿಣಾಮ ಈ ರಸ್ತೆ ಬದಿಯ ಹೊಲಗಳಿಗೆ ಓಡಾಡುವ ರೈತರು, ಕೂಲಿಕಾರರು, ಜಾನುವಾರುಗಳು ಪಡಬಾರದ ಕಷ್ಟ ಪಡುತ್ತಿದ್ದರು.</p>.<p>ರೈತರ ಕೋರಿಕೆಯ ಮೇರೆಗೆ ಕ್ಷೇತ್ರದ ಚಿಂಚೋಳಿ ಶಾಸಕರು 1 ಕಿ.ಮೀ ಡಾಂಬರ್ ರಸ್ತೆ ಮಂಜೂರುಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹33 ಲಕ್ಷ ಅನುದಾನ ಕಲ್ಪಿಸಿದ್ದಾರೆ. ಅದರಂತೆ ಕಾಮಗಾರಿ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದು ಚಾಲನೆ ಸಹ ದೊರೆತಿದೆ.</p>.<p>ಇನ್ನೇನು ಹಳೆ ರಸ್ತೆ ಹೋಗಿ ಡಾಂಬರ್ ರಸ್ತೆಯಾಗುತ್ತಿದೆ. ನಮ್ಮ ದೈನಂದಿನ ಕಷ್ಟ ತಪ್ಪುತ್ತಿದೆ ಎಂದುಕೊಂಡಿದ್ದ ರೈತಾಪಿ ಜನರ ಸಂಕಷ್ಟ ಇನ್ನೂ ತಪ್ಪದಾಗಿದೆ ಎಂದು ಸದ್ಯ ಕೆಸರಿನಲ್ಲಿ ಸಂಚರಿಸಲು ಹರಸಾಹಸ ಪಡುತ್ತಿರುವ ರೈತರು ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡಿದ್ದಾರೆ.</p>.<p>ದಿನ ಕಳೆದಂತೆ ಹಳೆ ರಸ್ತೆ ತೀವ್ರ ಹದಗೆಟ್ಟು ನಡೆದಾಡಲು ಬರದಂತಾಗಿದೆ. ಎತ್ತಿನಬಂಡಿ, ಟ್ರ್ಯಾಕ್ಟರ್, ರಾಶಿ ಮಷೀನ್ಗಳು ಕೆಸರು ಗುಂಡಿಯಲ್ಲಿ ಸಿಕ್ಕಿ ಬೀಳುತ್ತಿವೆ.</p>.<p>ರಾಶಿಗೆ ಬಂದ ಉದ್ದು, ಹೆಸರು ಬಿಡಿಸಿ ಮನೆಗೆ ತರುವುದಾದರು ಹೇಗೆ ಎಂಬ ಚಿಂತೆ ಎಲ್ಲರಲ್ಲಿ ಕಾಡುತ್ತಿದೆ. ಹೇಗಾದರೂ ಮನೆಗೆ ರಾಶಿ ತರಲೇಬೇಕಲ್ಲ ಎಂದುಕೊಂಡು ಒಂದು ಕತ್ತೆಗೆ ₹500ರಂತೆ ಕತ್ತೆ ಮೇಲೆ ಚೀಲ ಹೊರಿಸಿ ರಾಶಿ ಮನೆಗೆ ತರಲಾಗುತ್ತಿದೆ ಎಂದು ಮುಕರಂಬಾ ರೈತ ಸಿದ್ದಣ್ಣಾ ಗೋಗಿ, ಸುಭಾಷ ಕಿಣಗಿ ತಿಳಿಸಿದರು.</p>.<p>ಈ ಭಾಗದ ರೈತರಿಗೆ ದೇವರು ವರ ಕರುಣಿಸಿದರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಈ ಎಲ್ಲಾ ಅವಾಂತರಕ್ಕೆ ಕಾರಣರಾಗಿರುವ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಬೇಕು ಎಂದು<br />ಗೊಣಗಿ ಗ್ರಾಮದ ಮುಖಂಡ ಶಿವರಾಜ ಪಾಟೀಲ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ: </strong>ನೂರಾರು ರೈತರ ಅನುಕೂಲಕ್ಕಾಗಿ ತಾಲ್ಲೂಕಿನ ಗೊಣಗಿ- ರಟಕಲ್ ಹಳೆ ರಸ್ತೆಗೆ ಡಾಂಬರ್ ರಸ್ತೆ ಮಂಜೂರಾಗಿದೆ. ಕಾಮಗಾರಿ ಆರಂಭಕ್ಕೆ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಮಾರ್ಚ್ ಮೊದಲನೇ ವಾರದಲ್ಲಿ ಭೂಮಿಪೂಜೆ ಮಾಡಿದ್ದಾರೆ. ಆದರೆ, ಭೂಮಿಪೂಜೆ ಸಲ್ಲಿಸಿ 6 ತಿಂಗಳಾಗುತ್ತಿದ್ದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ ಎಂದು ರೈತರು ದೂರಿದ್ದಾರೆ.</p>.<p>ಬೆಡಸೂರ, ಗೊಣಗಿ, ಮುಕರಂಬಾ ಮತ್ತು ರಟಕಲ್ ಸೀಮೆಯ ಸುಮಾರು 400 ಎಕರೆ ಜಮೀನಿಗೆ ಸಂಪರ್ಕ ಕಲ್ಪಿಸುವ ಈ ಹಳೆ ರಸ್ತೆ ಬಹಳಷ್ಟು ವರ್ಷಗಳಿಂದ ಕೆಟ್ಟು ಹೋಗಿದೆ. ಪರಿಣಾಮ ಈ ರಸ್ತೆ ಬದಿಯ ಹೊಲಗಳಿಗೆ ಓಡಾಡುವ ರೈತರು, ಕೂಲಿಕಾರರು, ಜಾನುವಾರುಗಳು ಪಡಬಾರದ ಕಷ್ಟ ಪಡುತ್ತಿದ್ದರು.</p>.<p>ರೈತರ ಕೋರಿಕೆಯ ಮೇರೆಗೆ ಕ್ಷೇತ್ರದ ಚಿಂಚೋಳಿ ಶಾಸಕರು 1 ಕಿ.ಮೀ ಡಾಂಬರ್ ರಸ್ತೆ ಮಂಜೂರುಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹33 ಲಕ್ಷ ಅನುದಾನ ಕಲ್ಪಿಸಿದ್ದಾರೆ. ಅದರಂತೆ ಕಾಮಗಾರಿ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದು ಚಾಲನೆ ಸಹ ದೊರೆತಿದೆ.</p>.<p>ಇನ್ನೇನು ಹಳೆ ರಸ್ತೆ ಹೋಗಿ ಡಾಂಬರ್ ರಸ್ತೆಯಾಗುತ್ತಿದೆ. ನಮ್ಮ ದೈನಂದಿನ ಕಷ್ಟ ತಪ್ಪುತ್ತಿದೆ ಎಂದುಕೊಂಡಿದ್ದ ರೈತಾಪಿ ಜನರ ಸಂಕಷ್ಟ ಇನ್ನೂ ತಪ್ಪದಾಗಿದೆ ಎಂದು ಸದ್ಯ ಕೆಸರಿನಲ್ಲಿ ಸಂಚರಿಸಲು ಹರಸಾಹಸ ಪಡುತ್ತಿರುವ ರೈತರು ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡಿದ್ದಾರೆ.</p>.<p>ದಿನ ಕಳೆದಂತೆ ಹಳೆ ರಸ್ತೆ ತೀವ್ರ ಹದಗೆಟ್ಟು ನಡೆದಾಡಲು ಬರದಂತಾಗಿದೆ. ಎತ್ತಿನಬಂಡಿ, ಟ್ರ್ಯಾಕ್ಟರ್, ರಾಶಿ ಮಷೀನ್ಗಳು ಕೆಸರು ಗುಂಡಿಯಲ್ಲಿ ಸಿಕ್ಕಿ ಬೀಳುತ್ತಿವೆ.</p>.<p>ರಾಶಿಗೆ ಬಂದ ಉದ್ದು, ಹೆಸರು ಬಿಡಿಸಿ ಮನೆಗೆ ತರುವುದಾದರು ಹೇಗೆ ಎಂಬ ಚಿಂತೆ ಎಲ್ಲರಲ್ಲಿ ಕಾಡುತ್ತಿದೆ. ಹೇಗಾದರೂ ಮನೆಗೆ ರಾಶಿ ತರಲೇಬೇಕಲ್ಲ ಎಂದುಕೊಂಡು ಒಂದು ಕತ್ತೆಗೆ ₹500ರಂತೆ ಕತ್ತೆ ಮೇಲೆ ಚೀಲ ಹೊರಿಸಿ ರಾಶಿ ಮನೆಗೆ ತರಲಾಗುತ್ತಿದೆ ಎಂದು ಮುಕರಂಬಾ ರೈತ ಸಿದ್ದಣ್ಣಾ ಗೋಗಿ, ಸುಭಾಷ ಕಿಣಗಿ ತಿಳಿಸಿದರು.</p>.<p>ಈ ಭಾಗದ ರೈತರಿಗೆ ದೇವರು ವರ ಕರುಣಿಸಿದರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಈ ಎಲ್ಲಾ ಅವಾಂತರಕ್ಕೆ ಕಾರಣರಾಗಿರುವ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಬೇಕು ಎಂದು<br />ಗೊಣಗಿ ಗ್ರಾಮದ ಮುಖಂಡ ಶಿವರಾಜ ಪಾಟೀಲ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>