‘ಸಂಶೋಧನಾ ಪ್ರಾಜೆಕ್ಟ್ಗಳೂ ಇಲ್ಲ’
ಹಲವು ಸಂಶೋಧನಾ ವಿಷಯಗಳಿಗೆ ಸಂಬಂಧಿಸಿದಂತೆ ಮೊದಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪ್ರಾಧ್ಯಾಪಕರನ್ನು ಆಯ್ಕೆ ಮಾಡಿ ಪ್ರಾಜೆಕ್ಟ್ಗಳನ್ನು ವಹಿಸುತ್ತಿತ್ತು. ಇದರಿಂದ ಹಲವು ರಂಗಗಳ ಅಮೂಲಾಗ್ರ ಅಧ್ಯಯನ ಸಾಧ್ಯವಾಗುತ್ತಿತ್ತು. ಸುಖದೇವ್ ಥೋರಟ್ ಅವರು ಯುಜಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 100ಕ್ಕೂ ಅಧಿಕ ಪ್ರಾಜೆಕ್ಟ್ ಫೆಲೋಶಿಪ್ಗಳನ್ನು ಘೋಷಿಸಿದ್ದರು. ಆದರೆ ಈಗ ಯಾವ ಪ್ರಾಜೆಕ್ಟ್ಗಳೂ ಸಿಗುತ್ತಿಲ್ಲ ಎಂದು ಗುಲಬರ್ಗಾ ವಿ.ವಿ. ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಬೇಸರ ವ್ಯಕ್ತಪಡಿಸಿದರು. ‘ಪ್ರಾಧ್ಯಾಪಕರಿಲ್ಲದೇ ಸಂಶೋಧನೆ ಹಾಗೂ ಬೋಧನಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.