ಸಚಿವ ಪ್ರಿಯಾಂಕ್ ಖರ್ಗೆ ಮೌನ ಮುರಿಯಲಿ
ಕೆಇಎ ನೇಮಕಾತಿ ಅಕ್ರಮದ ಕುರಿತು ಪ್ರಿಯಾಂಕ್ ಖರ್ಗೆಯವರು ಮೌನ ಮುರಿಯಬೇಕು ಎಂದ ರಾಜಕುಮಾರ್ ಪಾಟೀಲ ‘ಅದರಲ್ಲಿ ಯಾರ್ಯಾರಿಗೆ ಕಿಕ್ ಬ್ಯಾಕ್ ತಲುಪಿದೆ. ಯಾಕೆ ಸರ್ಕಾರ ಮೌನ ವಹಿಸಿದೆ’ ಎಂದು ಪ್ರಶ್ನಿಸಿದರು. ‘ಬ್ಲೂಟೂತ್ ಬಳಸಿದ ನಾಲ್ವರನ್ನು ಒಳಗೆ ಹಾಕಿ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ. ಕಿಂಗ್ಪಿನ್ಗಳನ್ನು ಬಂಧಿಸಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಯಾರಿಗೆ ಇದರಲ್ಲಿ ಪಾಲು ಹೋಗಿದೆ ಎಂಬುದು ತಿಳಿಯಬೇಕು’ ಎಂದರು. ‘ಕಾಂಗ್ರೆಸ್ ಗ್ಯಾರಂಟಿಯಲ್ಲಿ ಪರೀಕ್ಷಾ ಹಗರಣವೂ ಸೇರಿದೆ. ಪರೀಕ್ಷೆ ಸರಿಯಾಗಿ ನಡೆದು ಕೆಲಸ ಸಿಕ್ಕರೆ ಅವರಿಗೆ ಸಂಬಳ ಕೊಡಲಿಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾಗಿ ಏನಾದರೂ ಮಾಡಿ ದಾರಿ ತಪ್ಪಿಸಬೇಕು ಎಂದು ಸರ್ಕಾರ ಯೋಜನೆ ಮಾಡಿದೆಯಾ’ ಎಂದು ಪ್ರಶ್ನಿಸಿದರು.