ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೆಇಎ ಅಕ್ರಮ ತನಿಖೆ ಸಿಬಿಐಗೆ ನೀಡಿ: ರಾಜಕುಮಾರ್ ಪಾಟೀಲ ತೇಲ್ಕೂರ್‌ ಒತ್ತಾಯ

Published : 31 ಅಕ್ಟೋಬರ್ 2023, 15:57 IST
Last Updated : 31 ಅಕ್ಟೋಬರ್ 2023, 15:57 IST
ಫಾಲೋ ಮಾಡಿ
Comments
ಸಚಿವ ಪ್ರಿಯಾಂಕ್‌ ಖರ್ಗೆ ಮೌನ ಮುರಿಯಲಿ
ಕೆಇಎ ನೇಮಕಾತಿ ಅಕ್ರಮದ ಕುರಿತು ಪ್ರಿಯಾಂಕ್‌ ಖರ್ಗೆಯವರು ಮೌನ ಮುರಿಯಬೇಕು ಎಂದ ರಾಜಕುಮಾರ್‌ ಪಾಟೀಲ ‘ಅದರಲ್ಲಿ ಯಾರ್‍ಯಾರಿಗೆ ಕಿಕ್‌ ಬ್ಯಾಕ್‌ ತಲುಪಿದೆ. ಯಾಕೆ ಸರ್ಕಾರ ಮೌನ ವಹಿಸಿದೆ’ ಎಂದು ಪ್ರಶ್ನಿಸಿದರು. ‘ಬ್ಲೂಟೂತ್ ಬಳಸಿದ ನಾಲ್ವರನ್ನು ಒಳಗೆ ಹಾಕಿ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ. ಕಿಂಗ್‌ಪಿನ್‌ಗಳನ್ನು ಬಂಧಿಸಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಯಾರಿಗೆ ಇದರಲ್ಲಿ ಪಾಲು ಹೋಗಿದೆ ಎಂಬುದು ತಿಳಿಯಬೇಕು’ ಎಂದರು. ‘ಕಾಂಗ್ರೆಸ್‌ ಗ್ಯಾರಂಟಿಯಲ್ಲಿ ಪರೀಕ್ಷಾ ಹಗರಣವೂ ಸೇರಿದೆ. ಪರೀಕ್ಷೆ ಸರಿಯಾಗಿ ನಡೆದು ಕೆಲಸ ಸಿಕ್ಕರೆ ಅವರಿಗೆ ಸಂಬಳ ಕೊಡಲಿಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾಗಿ ಏನಾದರೂ ಮಾಡಿ ದಾರಿ ತಪ್ಪಿಸಬೇಕು ಎಂದು ಸರ್ಕಾರ ಯೋಜನೆ ಮಾಡಿದೆಯಾ’ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಬರ ಅಧ್ಯಯನ
‘ರಾಜ್ಯ ಬಿಜೆಪಿಯಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ  ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕಲಬುರಗಿ ಬೀದರ್ ಜಿಲ್ಲೆಯಲ್ಲಿ ಬರ ಅಧ್ಯಯನ ಸಮೀಕ್ಷೆ ನಡೆಸಲಾಗುವುದು’ ಎಂದು ರಾಜಕುಮಾರ್‌ ಪಾಟೀಲ ಹೇಳಿದರು. ‘ಇನ್ನೆರಡು ದಿನಗಳಲ್ಲಿ ತಂಡ ಆಗಮಿಸಲಿದ್ದು ಅದರಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಎರಡು ಜಿಲ್ಲೆಗಳ ಶಾಸಕರು ಇರಲಿದ್ದು ಬರ ಸಮೀಕ್ಷೆಯನ್ನು ಮಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT