<p>ಕಾಳಗಿ: ಹಚ್ಚಹಸಿರಿನ ಬೆಟ್ಟದಲ್ಲಿ ಎದ್ದು ಕಾಣುವ ತಾಲ್ಲೂಕಿನ ಕೋಡ್ಲಿ ಗ್ರಾಮದ ಒಡೆಯ ಹನುಮಾನ ದೇವಸ್ಥಾನ ಸುತ್ತಲಿನ ಹಳ್ಳಿಗಳಿಗೂ ‘ಒಡೆಯ’ನಂತೆ ಕಂಡುಬರುತ್ತಿದೆ. ಜನರು ಸಹ ತಮ್ಮ ಭಾಗದ ‘ಒಡೆಯ’ ಎಂದೇ ಭಾವಿಸಿ ಇಲ್ಲಿಗೆ ನಡೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.</p>.<p>ಇದಕ್ಕೆಲ್ಲ ದೇವಸ್ಥಾನದ ಒಳಗಡೆ ಕಾಣುವ 300 ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಆಕಾರದ ಕಲ್ಲಿನಲ್ಲಿ ‘ನಿಂತ ಹನುಮಾನ, ಕುಳಿತ ಗಣಪತಿ ಮತ್ತು ನಾಗರ ಆಕೃತಿ’ಗಳೇ ಮುಖ್ಯ ಕಾರಣವಾಗಿವೆ.</p>.<p>ಹೌದು, ಇಲ್ಲಿ ಕಾಣುವ ಬೆಟ್ಟದಲ್ಲಿ (ದೇವಸ್ಥಾನದ ಸದ್ಯದ ಜಾಗ) ರೈತನೊಬ್ಬ ಹೊಲ ಉಳುಮೆ ಮಾಡುತ್ತಿದ್ದಾಗ ನೇಗಿಲ ಭಾರಕ್ಕೆ ಕಲ್ಲೊಂದನ್ನು ಬಳಸಲಾಗುತ್ತಿತ್ತು. ಕೆಲಸವಾದ ನಂತರ ರೈತ ಆ ಕಲ್ಲನ್ನು ತನ್ನ ಹೊಲದಲ್ಲೇ ಬಿಸಾಕಿ ಮನೆಗೆ ಹೋಗುತ್ತಿದ್ದ. ಮತ್ತೆ ಮರುದಿನ ಬಂದು ಅದೇ ಕಲ್ಲು ಬಳಸಬೇಕು ಎನ್ನುವಷ್ಟರಲ್ಲಿ ಆ ಕಲ್ಲು ತನ್ನ ಮೂಲ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಿತ್ತು. ಈ ಆಶ್ಚರ್ಯ ಒಂದೆರಡು ದಿನ ಮಾತ್ರ ನಡೆಯದೆ ದಿನಾಲೂ ನಡೆದು ರೈತನ ಹುಬ್ಬೇರಿಸುವಂತೆ ಮಾಡಿತ್ತು.</p>.<p>ರೈತ ಕೆಲ ದಿನಗಳ ಬಳಿಕ ಹೊಲದಲ್ಲಿ ನಡೆದಿರುವ ಸಂಗತಿಯನ್ನೆಲ್ಲ ಗ್ರಾಮಸ್ಥರಿಗೆ ತಿಳಿಸಿದ. ವಸ್ತುಸ್ಥಿತಿಯನ್ನು ಅರಿಯಲು 8-10 ಮುಖಂಡರು ರೈತನೊಂದಿಗೆ ಹೊಲಕ್ಕೆ ತೆರಳಿ ಕಲ್ಲಿಗೆ ಸುಣ್ಣಬಣ್ಣ ಹಚ್ಚಿ ಕೆಲ ದಿನಗಳವರೆಗೆ ಬಂದು ನೋಡಿ ಪರೀಕ್ಷಿಸಿದಾಗಲೂ ಅದೇ ಆಶ್ಚರ್ಯ ಎಲ್ಲರನ್ನು ಚಕಿತರನ್ನಾಗಿಸಿತ್ತು. ಮುನ್ನೂರು ವರ್ಷಗಳ ಹಿಂದೆಯೇ ಈ ಅನುಭವ ಆಗಿತ್ತು ಎನ್ನುತ್ತಾರೆ ಗ್ರಾಮಸ್ಥರು.</p>.<p>ಮುಂದೆ ರೈತ ಈ ಕಲ್ಲನ್ನು ಮುಟ್ಟಲು ಹೋಗಲಿಲ್ಲ. ಈ ಕಲ್ಲಿನಲ್ಲಿ ಏನೋ ಮಹಿಮೆ ಇದೆ ಎಂದುಕೊಂಡ ಗ್ರಾಮಸ್ಥರು ನಿತ್ಯ ಪೂಜೆಗೆ ಪೂಜಾರಿಯನ್ನು ನೇಮಿಸಿದರು. ಪ್ರತಿನಿತ್ಯ ಕಲ್ಲಿನ ಪೂಜೆ ನಡೆದು ಕಲ್ಲು ದೊಡ್ಡದಾಗಿ ಬೆಳೆಯುತ್ತ ಕಲ್ಲಿನಲ್ಲಿ ನಿಂತ ಹನುಮಾನ, ಕುಳಿತ ಗಣೇಶ ಮತ್ತು ನಾಗರ ಆಕೃತಿಗಳು ಮೂಡತೊಡಗಿದವು.</p>.<p>ಇದನ್ನು ಕಂಡ ಕೋಡ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನರು ನಮ್ಮೆಲ್ಲರ ಒಡೆಯನೆಂದು ಭಾವಿಸಿ ಭಯಭಕ್ತಿಯಿಂದ ಆರಾಧಿಸಲು ಆರಂಭಿಸಿದರು. ಹೀಗೆ ಮಹಿಮೆ, ಪವಾಡ ಎನ್ನುವಂತೆ ಇಲ್ಲಿ ಒಂದಲ್ಲ ಒಂದು ಘಟನೆ ಜರುಗಿ ಚಂದನಕೇರಾ ಗ್ರಾಮದ ಕಡಗದ ಮನೆತನದವರು ಕಲ್ಲಿಗೆ ಚಿಕ್ಕ ಗುಡಿ ಕಟ್ಟಿಸಿದರು.</p>.<p>ಕಾಲಕಳೆದಂತೆ ಜನರ ನಂಬಿಕೆ ಹೆಚ್ಚಾಗಿ ಕೋಡ್ಲಿ ಮತ್ತಿತರ ಗ್ರಾಮಸ್ಥರು ಒಟ್ಟುಗೂಡಿ ಈ ವರ್ಷ ಒಂದು ಕೋಟಿ ರೂಪಾಯಿ ವೆಚ್ಚದ ಭವ್ಯ ದೇವಸ್ಥಾನವನ್ನು ನಾಡಿಗೆ ಸಮರ್ಪಿಸಿದ್ದಾರೆ. ಕಳೆದ ನವೆಂಬರ್ 23ರಂದು ಉದ್ಘಾಟನೆಗೊಂಡಿರುವ ಈ ದೇವಸ್ಥಾನ ಆಸ್ತಿಕರ ಭಕ್ತಿಯ ಕ್ಷೇತ್ರವಾಗಿ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಕೈಬೀಸಿ ಕರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಳಗಿ: ಹಚ್ಚಹಸಿರಿನ ಬೆಟ್ಟದಲ್ಲಿ ಎದ್ದು ಕಾಣುವ ತಾಲ್ಲೂಕಿನ ಕೋಡ್ಲಿ ಗ್ರಾಮದ ಒಡೆಯ ಹನುಮಾನ ದೇವಸ್ಥಾನ ಸುತ್ತಲಿನ ಹಳ್ಳಿಗಳಿಗೂ ‘ಒಡೆಯ’ನಂತೆ ಕಂಡುಬರುತ್ತಿದೆ. ಜನರು ಸಹ ತಮ್ಮ ಭಾಗದ ‘ಒಡೆಯ’ ಎಂದೇ ಭಾವಿಸಿ ಇಲ್ಲಿಗೆ ನಡೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.</p>.<p>ಇದಕ್ಕೆಲ್ಲ ದೇವಸ್ಥಾನದ ಒಳಗಡೆ ಕಾಣುವ 300 ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಆಕಾರದ ಕಲ್ಲಿನಲ್ಲಿ ‘ನಿಂತ ಹನುಮಾನ, ಕುಳಿತ ಗಣಪತಿ ಮತ್ತು ನಾಗರ ಆಕೃತಿ’ಗಳೇ ಮುಖ್ಯ ಕಾರಣವಾಗಿವೆ.</p>.<p>ಹೌದು, ಇಲ್ಲಿ ಕಾಣುವ ಬೆಟ್ಟದಲ್ಲಿ (ದೇವಸ್ಥಾನದ ಸದ್ಯದ ಜಾಗ) ರೈತನೊಬ್ಬ ಹೊಲ ಉಳುಮೆ ಮಾಡುತ್ತಿದ್ದಾಗ ನೇಗಿಲ ಭಾರಕ್ಕೆ ಕಲ್ಲೊಂದನ್ನು ಬಳಸಲಾಗುತ್ತಿತ್ತು. ಕೆಲಸವಾದ ನಂತರ ರೈತ ಆ ಕಲ್ಲನ್ನು ತನ್ನ ಹೊಲದಲ್ಲೇ ಬಿಸಾಕಿ ಮನೆಗೆ ಹೋಗುತ್ತಿದ್ದ. ಮತ್ತೆ ಮರುದಿನ ಬಂದು ಅದೇ ಕಲ್ಲು ಬಳಸಬೇಕು ಎನ್ನುವಷ್ಟರಲ್ಲಿ ಆ ಕಲ್ಲು ತನ್ನ ಮೂಲ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಿತ್ತು. ಈ ಆಶ್ಚರ್ಯ ಒಂದೆರಡು ದಿನ ಮಾತ್ರ ನಡೆಯದೆ ದಿನಾಲೂ ನಡೆದು ರೈತನ ಹುಬ್ಬೇರಿಸುವಂತೆ ಮಾಡಿತ್ತು.</p>.<p>ರೈತ ಕೆಲ ದಿನಗಳ ಬಳಿಕ ಹೊಲದಲ್ಲಿ ನಡೆದಿರುವ ಸಂಗತಿಯನ್ನೆಲ್ಲ ಗ್ರಾಮಸ್ಥರಿಗೆ ತಿಳಿಸಿದ. ವಸ್ತುಸ್ಥಿತಿಯನ್ನು ಅರಿಯಲು 8-10 ಮುಖಂಡರು ರೈತನೊಂದಿಗೆ ಹೊಲಕ್ಕೆ ತೆರಳಿ ಕಲ್ಲಿಗೆ ಸುಣ್ಣಬಣ್ಣ ಹಚ್ಚಿ ಕೆಲ ದಿನಗಳವರೆಗೆ ಬಂದು ನೋಡಿ ಪರೀಕ್ಷಿಸಿದಾಗಲೂ ಅದೇ ಆಶ್ಚರ್ಯ ಎಲ್ಲರನ್ನು ಚಕಿತರನ್ನಾಗಿಸಿತ್ತು. ಮುನ್ನೂರು ವರ್ಷಗಳ ಹಿಂದೆಯೇ ಈ ಅನುಭವ ಆಗಿತ್ತು ಎನ್ನುತ್ತಾರೆ ಗ್ರಾಮಸ್ಥರು.</p>.<p>ಮುಂದೆ ರೈತ ಈ ಕಲ್ಲನ್ನು ಮುಟ್ಟಲು ಹೋಗಲಿಲ್ಲ. ಈ ಕಲ್ಲಿನಲ್ಲಿ ಏನೋ ಮಹಿಮೆ ಇದೆ ಎಂದುಕೊಂಡ ಗ್ರಾಮಸ್ಥರು ನಿತ್ಯ ಪೂಜೆಗೆ ಪೂಜಾರಿಯನ್ನು ನೇಮಿಸಿದರು. ಪ್ರತಿನಿತ್ಯ ಕಲ್ಲಿನ ಪೂಜೆ ನಡೆದು ಕಲ್ಲು ದೊಡ್ಡದಾಗಿ ಬೆಳೆಯುತ್ತ ಕಲ್ಲಿನಲ್ಲಿ ನಿಂತ ಹನುಮಾನ, ಕುಳಿತ ಗಣೇಶ ಮತ್ತು ನಾಗರ ಆಕೃತಿಗಳು ಮೂಡತೊಡಗಿದವು.</p>.<p>ಇದನ್ನು ಕಂಡ ಕೋಡ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನರು ನಮ್ಮೆಲ್ಲರ ಒಡೆಯನೆಂದು ಭಾವಿಸಿ ಭಯಭಕ್ತಿಯಿಂದ ಆರಾಧಿಸಲು ಆರಂಭಿಸಿದರು. ಹೀಗೆ ಮಹಿಮೆ, ಪವಾಡ ಎನ್ನುವಂತೆ ಇಲ್ಲಿ ಒಂದಲ್ಲ ಒಂದು ಘಟನೆ ಜರುಗಿ ಚಂದನಕೇರಾ ಗ್ರಾಮದ ಕಡಗದ ಮನೆತನದವರು ಕಲ್ಲಿಗೆ ಚಿಕ್ಕ ಗುಡಿ ಕಟ್ಟಿಸಿದರು.</p>.<p>ಕಾಲಕಳೆದಂತೆ ಜನರ ನಂಬಿಕೆ ಹೆಚ್ಚಾಗಿ ಕೋಡ್ಲಿ ಮತ್ತಿತರ ಗ್ರಾಮಸ್ಥರು ಒಟ್ಟುಗೂಡಿ ಈ ವರ್ಷ ಒಂದು ಕೋಟಿ ರೂಪಾಯಿ ವೆಚ್ಚದ ಭವ್ಯ ದೇವಸ್ಥಾನವನ್ನು ನಾಡಿಗೆ ಸಮರ್ಪಿಸಿದ್ದಾರೆ. ಕಳೆದ ನವೆಂಬರ್ 23ರಂದು ಉದ್ಘಾಟನೆಗೊಂಡಿರುವ ಈ ದೇವಸ್ಥಾನ ಆಸ್ತಿಕರ ಭಕ್ತಿಯ ಕ್ಷೇತ್ರವಾಗಿ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಕೈಬೀಸಿ ಕರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>