ಹೌದು, ಇಲ್ಲಿ ಕಾಣುವ ಬೆಟ್ಟದಲ್ಲಿ (ದೇವಸ್ಥಾನದ ಸದ್ಯದ ಜಾಗ) ರೈತನೊಬ್ಬ ಹೊಲ ಉಳುಮೆ ಮಾಡುತ್ತಿದ್ದಾಗ ನೇಗಿಲ ಭಾರಕ್ಕೆ ಕಲ್ಲೊಂದನ್ನು ಬಳಸಲಾಗುತ್ತಿತ್ತು. ಕೆಲಸವಾದ ನಂತರ ರೈತ ಆ ಕಲ್ಲನ್ನು ತನ್ನ ಹೊಲದಲ್ಲೇ ಬಿಸಾಕಿ ಮನೆಗೆ ಹೋಗುತ್ತಿದ್ದ. ಮತ್ತೆ ಮರುದಿನ ಬಂದು ಅದೇ ಕಲ್ಲು ಬಳಸಬೇಕು ಎನ್ನುವಷ್ಟರಲ್ಲಿ ಆ ಕಲ್ಲು ತನ್ನ ಮೂಲ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಿತ್ತು. ಈ ಆಶ್ಚರ್ಯ ಒಂದೆರಡು ದಿನ ಮಾತ್ರ ನಡೆಯದೆ ದಿನಾಲೂ ನಡೆದು ರೈತನ ಹುಬ್ಬೇರಿಸುವಂತೆ ಮಾಡಿತ್ತು.